ಕೇರಳದಲ್ಲಿ ನಡೆಯುತ್ತಿರುವ ಯುವ ಸಮಾವೇಶದಲ್ಲಿ ತಮ್ಮ ಭಾಷಣದ ಮುಕ್ತಾಯದ ವೇಳೆ ಸಚಿವೆ ಲೇಖಿ ಅವರು ಭಾರತ್ ಮಾತಾ ಕೀ ಜೈ ಘೊಷಣೆ ಕೂಗಿದರು. ಬಳಿಕ ಅದನ್ನು ವೀಕ್ಷಕರು ಪುನಾರವರ್ತಿಸುವಂತೆ ತಿಳಿಸಿದರು. ವೀಕ್ಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ಬರಲಿಲ್ಲ. ಆಗ ಕೋಪಗೊಂಡ ಸಚಿವೆ ‘ಭಾರತ ನಿಮ್ಮ ಮನೆಯಲ್ಲ ಎಂದೆನಿಸುತ್ತದೆ’ ಎಂದರು. ಮಹಿಳೆಯೊಬ್ಬರನ್ನು ಎದ್ದು ನಿಲ್ಲಲು ಹೇಳಿದರು. ಸಚಿವೆ ಮತ್ತೊಮ್ಮೆ ಘೋಷಣೆ ಕೂಗಿದಾಗಲೂ ಮಹಿಳೆ ಅದನ್ನು ಪುನರಾವರ್ತಿಸಲಿಲ್ಲ. ಆಕ್ರೋಶಗೊಂಡ ಸಚಿವೆ ‘ನೀವು ಕಾರ್ಯಕ್ರಮ ಸ್ಥಳದಿಂದ ನಿರ್ಗಮಿಸಬಹುದು’ ಎಂದರು.