<p><strong>ನವದೆಹಲಿ:</strong> ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆಯ ಬಳಿಕ ತಕ್ಷಣವೇ ತಾತ್ಕಾಲಿಕ ಕೀ– ಉತ್ತರಗಳನ್ನು ಪ್ರಕಟಿಸುವ ಹೊಸ ನೀತಿಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಇದು ಲಕ್ಷಾಂತರ ಅಭ್ಯರ್ಥಿಗಳಲ್ಲಿ ನಿರಾಳ ಭಾವ ಮೂಡಿಸಿದೆ.</p>.<p>ನ್ಯಾಯಮೂರ್ತಿಗಳಾದ ಪಿ.ಎಸ್ ನರಸಿಂಹ ಮತ್ತು ಎ.ಎಸ್ ಚಂದೂರ್ಕರ್ ಅವರ ಪೀಠವು ಯುಪಿಎಸ್ಸಿ ಹೊಸ ನೀತಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿತಲ್ಲದೆ, ‘ಇದು ತುಂಬಾ ಒಳ್ಳೆಯ ಬೆಳವಣಿಗೆ’ ಎಂದು ಮಂಗಳವಾರ ಹೇಳಿತು.</p>.<p>ಪೂರ್ವಭಾವಿ ಪರೀಕ್ಷೆಯ ಕೀ–ಉತ್ತರಗಳು, ಅಭ್ಯರ್ಥಿಗಳ ಕಟ್–ಆಫ್ ಅಂಕಗಳು ಮತ್ತು ಅಂಕಗಳನ್ನು ಬಹಿರಂಗಪಡಿಸುವಂತೆ ಯುಪಿಎಸ್ಸಿಗೆ ನಿರ್ದೇಶನ ನೀಡಬೇಕೇಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪೀಠವು ವಿಲೇವಾರಿ ಮಾಡಿತು.</p>.<p>ಅರ್ಜಿದಾರರು ಬಾಕಿಯಿರುವ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ತಮ್ಮ ವ್ಯಾಪ್ತಿಯ ಹೈಕೋರ್ಟ್ಗಳ ಮೊರೆ ಹೋಗಬಹುದು. ಆ ಅರ್ಜಿಗಳ ತ್ವರಿತ ವಿಚಾರಣೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಪೀಠವು ಹೇಳಿತು.</p>.<p>ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ನೇಮಿಸಿದ್ದ ಅಮಿಕಸ್ ಕ್ಯೂರಿ, ಹಿರಿಯ ವಕೀಲ ಜೈದೀಪ್ ಗುಪ್ತಾ ಅವರು ಈ ವಿಷಯದಲ್ಲಿ ಯುಪಿಎಸ್ಸಿ ಈಚೆಗೆ ಪ್ರಮಾಣಪತ್ರ ಸಲ್ಲಿಸಿದ್ದನ್ನು ಪೀಠದ ಗಮನಕ್ಕೆ ತಂದರು. ಅದಕ್ಕೆ ಪೀಠ, ‘ತುಂಬಾ ಸಕಾರಾತ್ಮಕವಾದ ಏನೋ ಒಂದು ಬೆಳವಣಿಗೆ ನಡೆದಿದೆ’ ಎಂದಿತು.</p>.<p>ಪೂರ್ವಭಾವಿ ಪರೀಕ್ಷೆ ಬಳಿಕ ತಾತ್ಕಾಲಿಕ ಕೀ– ಉತ್ತರಗಳನ್ನು ಹಾಗೂ ಅಂತಿಮ ಫಲಿತಾಂಶದ ಬಳಿಕ ಅಂತಿಮ ಕೀ– ಉತ್ತರಗಳನ್ನು ಪ್ರಕಟಿಸಲಾಗುವುದು ಎಂದು ಕಳೆದ ತಿಂಗಳು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಯುಪಿಎಸ್ಸಿ ತಿಳಿಸಿತ್ತು.</p>.<p>ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ‘ಪೂರ್ವಭಾವಿ ಪರೀಕ್ಷೆಯಲ್ಲಿ ‘ತಪ್ಪು ಪ್ರಶ್ನೆ’ಗಳು ಬಂದಿರುವುದಕ್ಕೆ ಅರ್ಜಿಗಳನ್ನು ಸಲ್ಲಿಸಲಾಗಿದೆ ಮತ್ತು ಅರ್ಜಿದಾರು ಹಲವು ವರ್ಷಗಳನ್ನು ಹಾಳುಮಾಡಿಕೊಂಡಿದ್ದಾರೆ’ ಎಂದು ಹೇಳಿದರು.</p>.<p>ಸುಪ್ರೀಂ ಕೋರ್ಟ್ನ ಆದೇಶವು ಮುಂಬರುವ ಪರೀಕ್ಷೆಗಳಿಗೆ ಯುಪಿಎಸ್ಸಿಯ ನೀತಿಯಲ್ಲಿ ಆಗಿರುವ ಬದಲಾವಣೆಯನ್ನು ಅನುಮೋದಿಸಿದೆ. ಇದು ಭಾರತದ ಪ್ರಮುಖ ನಾಗರಿಕ ಸೇವೆಗಳ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆಯನ್ನು ಮರುರೂಪಿಸುವ ಸಾಧ್ಯತೆಯಿದೆ.</p>.<p>ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುವಲ್ಲಿ ಆಯೋಗದ ಬದ್ಧತೆಯನ್ನು ದೃಢಪಡಿಸಿದ್ದ ಯುಪಿಎಸ್ಸಿ ಅಧ್ಯಕ್ಷ ಅಜಯ್ ಕುಮಾರ್ ಅವರು ಹೊಸ ನೀತಿಯ ಅನುಷ್ಠಾನದ ಮೇಲ್ವಿಚಾರಣೆ ಮಾಡುವ ನಿರೀಕ್ಷೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆಯ ಬಳಿಕ ತಕ್ಷಣವೇ ತಾತ್ಕಾಲಿಕ ಕೀ– ಉತ್ತರಗಳನ್ನು ಪ್ರಕಟಿಸುವ ಹೊಸ ನೀತಿಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಇದು ಲಕ್ಷಾಂತರ ಅಭ್ಯರ್ಥಿಗಳಲ್ಲಿ ನಿರಾಳ ಭಾವ ಮೂಡಿಸಿದೆ.</p>.<p>ನ್ಯಾಯಮೂರ್ತಿಗಳಾದ ಪಿ.ಎಸ್ ನರಸಿಂಹ ಮತ್ತು ಎ.ಎಸ್ ಚಂದೂರ್ಕರ್ ಅವರ ಪೀಠವು ಯುಪಿಎಸ್ಸಿ ಹೊಸ ನೀತಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿತಲ್ಲದೆ, ‘ಇದು ತುಂಬಾ ಒಳ್ಳೆಯ ಬೆಳವಣಿಗೆ’ ಎಂದು ಮಂಗಳವಾರ ಹೇಳಿತು.</p>.<p>ಪೂರ್ವಭಾವಿ ಪರೀಕ್ಷೆಯ ಕೀ–ಉತ್ತರಗಳು, ಅಭ್ಯರ್ಥಿಗಳ ಕಟ್–ಆಫ್ ಅಂಕಗಳು ಮತ್ತು ಅಂಕಗಳನ್ನು ಬಹಿರಂಗಪಡಿಸುವಂತೆ ಯುಪಿಎಸ್ಸಿಗೆ ನಿರ್ದೇಶನ ನೀಡಬೇಕೇಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪೀಠವು ವಿಲೇವಾರಿ ಮಾಡಿತು.</p>.<p>ಅರ್ಜಿದಾರರು ಬಾಕಿಯಿರುವ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ತಮ್ಮ ವ್ಯಾಪ್ತಿಯ ಹೈಕೋರ್ಟ್ಗಳ ಮೊರೆ ಹೋಗಬಹುದು. ಆ ಅರ್ಜಿಗಳ ತ್ವರಿತ ವಿಚಾರಣೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಪೀಠವು ಹೇಳಿತು.</p>.<p>ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ನೇಮಿಸಿದ್ದ ಅಮಿಕಸ್ ಕ್ಯೂರಿ, ಹಿರಿಯ ವಕೀಲ ಜೈದೀಪ್ ಗುಪ್ತಾ ಅವರು ಈ ವಿಷಯದಲ್ಲಿ ಯುಪಿಎಸ್ಸಿ ಈಚೆಗೆ ಪ್ರಮಾಣಪತ್ರ ಸಲ್ಲಿಸಿದ್ದನ್ನು ಪೀಠದ ಗಮನಕ್ಕೆ ತಂದರು. ಅದಕ್ಕೆ ಪೀಠ, ‘ತುಂಬಾ ಸಕಾರಾತ್ಮಕವಾದ ಏನೋ ಒಂದು ಬೆಳವಣಿಗೆ ನಡೆದಿದೆ’ ಎಂದಿತು.</p>.<p>ಪೂರ್ವಭಾವಿ ಪರೀಕ್ಷೆ ಬಳಿಕ ತಾತ್ಕಾಲಿಕ ಕೀ– ಉತ್ತರಗಳನ್ನು ಹಾಗೂ ಅಂತಿಮ ಫಲಿತಾಂಶದ ಬಳಿಕ ಅಂತಿಮ ಕೀ– ಉತ್ತರಗಳನ್ನು ಪ್ರಕಟಿಸಲಾಗುವುದು ಎಂದು ಕಳೆದ ತಿಂಗಳು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಯುಪಿಎಸ್ಸಿ ತಿಳಿಸಿತ್ತು.</p>.<p>ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ‘ಪೂರ್ವಭಾವಿ ಪರೀಕ್ಷೆಯಲ್ಲಿ ‘ತಪ್ಪು ಪ್ರಶ್ನೆ’ಗಳು ಬಂದಿರುವುದಕ್ಕೆ ಅರ್ಜಿಗಳನ್ನು ಸಲ್ಲಿಸಲಾಗಿದೆ ಮತ್ತು ಅರ್ಜಿದಾರು ಹಲವು ವರ್ಷಗಳನ್ನು ಹಾಳುಮಾಡಿಕೊಂಡಿದ್ದಾರೆ’ ಎಂದು ಹೇಳಿದರು.</p>.<p>ಸುಪ್ರೀಂ ಕೋರ್ಟ್ನ ಆದೇಶವು ಮುಂಬರುವ ಪರೀಕ್ಷೆಗಳಿಗೆ ಯುಪಿಎಸ್ಸಿಯ ನೀತಿಯಲ್ಲಿ ಆಗಿರುವ ಬದಲಾವಣೆಯನ್ನು ಅನುಮೋದಿಸಿದೆ. ಇದು ಭಾರತದ ಪ್ರಮುಖ ನಾಗರಿಕ ಸೇವೆಗಳ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆಯನ್ನು ಮರುರೂಪಿಸುವ ಸಾಧ್ಯತೆಯಿದೆ.</p>.<p>ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುವಲ್ಲಿ ಆಯೋಗದ ಬದ್ಧತೆಯನ್ನು ದೃಢಪಡಿಸಿದ್ದ ಯುಪಿಎಸ್ಸಿ ಅಧ್ಯಕ್ಷ ಅಜಯ್ ಕುಮಾರ್ ಅವರು ಹೊಸ ನೀತಿಯ ಅನುಷ್ಠಾನದ ಮೇಲ್ವಿಚಾರಣೆ ಮಾಡುವ ನಿರೀಕ್ಷೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>