<p><strong>ನ್ಯೂಯಾರ್ಕ್:</strong> ಅಮೆರಿಕದ ನ್ಯೂಯಾರ್ಕ್ನ ಮೆಲ್ವಿಲ್ಲೆಯ ಬಿಎಪಿಎಸ್ ಸ್ವಾಮಿನಾರಾಯಣ ದೇವಾಲಯವನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಸಂಸದರು ಒತ್ತಾಯಿಸಿದ್ದಾರೆ. </p>.<p>ಯಾವುದೇ ರೀತಿಯ ದ್ವೇಷದ ವಿರುದ್ಧ ಅಮೆರಿಕ ಒಟ್ಟಾಗಿ ನಿಲ್ಲಬೇಕು ಎಂದು ಅವರು ಹೇಳಿದ್ದಾರೆ.</p>.<p>ದೇವಸ್ಥಾನದಿಂದ ಸುಮಾರು 28 ಕಿ.ಮೀ. ದೂರದಲ್ಲಿರುವ ನಸೌ ವೆಟರನ್ಸ್ ಮೆಮೊರಿಯಲ್ ಕೊಲಿಸಿಯಂನಲ್ಲಿ ಇದೇ 22ರಂದು ನಡೆಯಲಿರುವ ಹಿಂದೂ ಸಮುದಾಯದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ವೇಳೆಯೇ ದೇವಸ್ಥಾನ ವಿರೂಪಗೊಳಿಸುವಂಥ ಘಟನೆ ನಡೆದಿದೆ.</p>.<p>ಇದು ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗಿರುವ ಕೃತ್ಯ ಎಂದು ದೇವಾಲಯ ಸಮಿತಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.</p>.<p>‘ಈ ದಿನ ಸ್ಥಳೀಯ, ರಾಜ್ಯ ಮತ್ತು ಫೆಡರಲ್ ನಾಯಕರು ಶಾಂತಿ, ಗೌರವ ಮತ್ತು ಏಕತೆಯನ್ನು ಸಾರಲು ಒಟ್ಟಾಗಿದ್ದಾರೆ. ನಾವೆಲ್ಲರೂ ದ್ವೇಷದ ವಿರುದ್ಧ ಒಟ್ಟಾಗಿ ನಿಲ್ಲಲಿದ್ದೇವೆ’ ಎಂದು ದೇವಾಲಯದ ಆಡಳಿತ ಮಂಡಳಿ ಪೋಸ್ಟ್ ಮಾಡಿದೆ.</p>.<div><blockquote>ಅಮೆರಿಕದಲ್ಲಿ ರಾಜಕೀಯ ಹಿಂಸಾಚಾರ ಧರ್ಮಾಂಧತೆ ಹೆಚ್ಚುತ್ತಿದೆ. ಅಮೆರಿಕನ್ನರು ಎಲ್ಲಾ ರೀತಿಯ ದ್ವೇಷದ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕು </blockquote><span class="attribution">ರಾಜಾ ಕೃಷ್ಣಮೂರ್ತಿ ಡೆಮಾಕ್ರೆಟಿಕ್ ಪಕ್ಷದ ಪ್ರತಿನಿಧಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯೂಯಾರ್ಕ್:</strong> ಅಮೆರಿಕದ ನ್ಯೂಯಾರ್ಕ್ನ ಮೆಲ್ವಿಲ್ಲೆಯ ಬಿಎಪಿಎಸ್ ಸ್ವಾಮಿನಾರಾಯಣ ದೇವಾಲಯವನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಸಂಸದರು ಒತ್ತಾಯಿಸಿದ್ದಾರೆ. </p>.<p>ಯಾವುದೇ ರೀತಿಯ ದ್ವೇಷದ ವಿರುದ್ಧ ಅಮೆರಿಕ ಒಟ್ಟಾಗಿ ನಿಲ್ಲಬೇಕು ಎಂದು ಅವರು ಹೇಳಿದ್ದಾರೆ.</p>.<p>ದೇವಸ್ಥಾನದಿಂದ ಸುಮಾರು 28 ಕಿ.ಮೀ. ದೂರದಲ್ಲಿರುವ ನಸೌ ವೆಟರನ್ಸ್ ಮೆಮೊರಿಯಲ್ ಕೊಲಿಸಿಯಂನಲ್ಲಿ ಇದೇ 22ರಂದು ನಡೆಯಲಿರುವ ಹಿಂದೂ ಸಮುದಾಯದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ವೇಳೆಯೇ ದೇವಸ್ಥಾನ ವಿರೂಪಗೊಳಿಸುವಂಥ ಘಟನೆ ನಡೆದಿದೆ.</p>.<p>ಇದು ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗಿರುವ ಕೃತ್ಯ ಎಂದು ದೇವಾಲಯ ಸಮಿತಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.</p>.<p>‘ಈ ದಿನ ಸ್ಥಳೀಯ, ರಾಜ್ಯ ಮತ್ತು ಫೆಡರಲ್ ನಾಯಕರು ಶಾಂತಿ, ಗೌರವ ಮತ್ತು ಏಕತೆಯನ್ನು ಸಾರಲು ಒಟ್ಟಾಗಿದ್ದಾರೆ. ನಾವೆಲ್ಲರೂ ದ್ವೇಷದ ವಿರುದ್ಧ ಒಟ್ಟಾಗಿ ನಿಲ್ಲಲಿದ್ದೇವೆ’ ಎಂದು ದೇವಾಲಯದ ಆಡಳಿತ ಮಂಡಳಿ ಪೋಸ್ಟ್ ಮಾಡಿದೆ.</p>.<div><blockquote>ಅಮೆರಿಕದಲ್ಲಿ ರಾಜಕೀಯ ಹಿಂಸಾಚಾರ ಧರ್ಮಾಂಧತೆ ಹೆಚ್ಚುತ್ತಿದೆ. ಅಮೆರಿಕನ್ನರು ಎಲ್ಲಾ ರೀತಿಯ ದ್ವೇಷದ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕು </blockquote><span class="attribution">ರಾಜಾ ಕೃಷ್ಣಮೂರ್ತಿ ಡೆಮಾಕ್ರೆಟಿಕ್ ಪಕ್ಷದ ಪ್ರತಿನಿಧಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>