<p><strong>ವಾರಾಣಸಿ: </strong>ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಇಲ್ಲಿನ ಮದನಪುರ ಪ್ರದೇಶದಲ್ಲಿ ತಿಂಗಳ ಹಿಂದೆ ಪತ್ತೆಯಾಗಿದ್ದ ಶಿವ ದೇವಾಲಯದ ಬಾಗಿಲನ್ನು ಬುಧವಾರ ತೆರೆಯಲಾಗಿದೆ.</p><p>200 ವರ್ಷಗಳಷ್ಟು ಹಳೆಯದ್ದು ಎನ್ನಲಾದ ಸಿದ್ದೇಶ್ವರ ಮಹಾದೇವ ದೇವಾಲಯವನ್ನು ಹಿಂದೂ ಸಂಘಟನೆಯ ಸದಸ್ಯರು 2024ರ ನವೆಂಬರ್ 19ರಂದು ಪತ್ತೆ ಹಚ್ಚಿದ್ದರು.</p><p>70 ವರ್ಷಗಳಿಗೂ ಹೆಚ್ಚು ಸಮಯದಿಂದ ದೇವಾಲಯದ ಬಾಗಿಲನ್ನು ಬಂದ್ ಮಾಡಲಾಗಿದೆ ಎಂದು ಹೇಳಿರುವ ಸನಾತನ ರಕ್ಷಾ ದಳ, ಪೂಜಾ ಕೈಂಕರ್ಯಗಳನ್ನು ಆರಂಭಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಅದರಂತೆ, ಸರ್ಕಾರದ ದಾಖಲೆಗಳನ್ನು ಪರಿಶೀಲಿಸಿರುವ ಜಿಲ್ಲಾಡಳಿತ, ದೇವಾಲಯವನ್ನು ತೆರೆಯಲು ಅನುಮತಿ ನೀಡಿದೆ ಎಂದು ವರದಿಯಾಗಿದೆ.</p><p>ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲೋಕ್ ವರ್ಮಾ ಅವರು, 'ದೇವಾಲಯವು ಸರ್ಕಾರಿ ಜಾಗದಲ್ಲಿದೆ. ಬೀಗ ತೆಗೆಯಲಾಗಿದೆ' ಎಂದಿದ್ದಾರೆ.</p><p>ದೇವಾಲಯಕ್ಕೆ ಬೀಗ ಜಡಿದಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ನಂತರ, ಈ ವಿಚಾರವನ್ನು ಸನಾತನ ರಕ್ಷಾ ದಳ ಸಂಘಟನೆಯು ಅಧಿಕಾರಿಗಳ ಗಮನಕ್ಕೆ ತಂದಿತ್ತು. ಇದರ ಬೆನ್ನಲ್ಲೇ, ಕಾರ್ಯಪ್ರವೃತ್ತವಾದ ಜಿಲ್ಲಾಡಳಿತ, ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಿತ್ತು.</p><p>ದೇಗುಲದ ಬಾಗಿಲು ತೆರೆಯುವ ವೇಳೆ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಲಿಲ್ಲ. ಸ್ಥಳೀಯರೂ ಸಹಕಾರ ನೀಡಿದರು ಎಂದು ವರ್ಮಾ ತಿಳಿಸಿದ್ದಾರೆ.</p><p>ದೇವಾಲಯದ ಒಳಗೆ, ಭಾರಿ ಪ್ರಮಾಣದ ಮಣ್ಣು, ಕಸದ ರಾಶಿ ತುಂಬಿತ್ತು. ಹಾನಿಯಾಗಿರುವ ಮೂರು ಶಿವಲಿಂಗಗಳು ಪತ್ತೆಯಾಗಿವೆ. ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ, ದೇವಾಲಯದ ಜೀರ್ಣೋದ್ಧಾರಕ್ಕೆ ಯೋಜಿಸಲಾಗಿದೆ ಎಂದು ತಿಳಿದುಬಂದಿದೆ.</p><p>ಇದರೊಂದಿಗೆ, ರಾಜ್ಯದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಆರನೇ ದೇವಾಲಯದ ಬಾಗಿಲು ತೆರೆದಂತಾಗಿದೆ. ಸಂಭಲ್ ಹಾಗೂ ಫಿರೋಜಾಬಾದ್ನಲ್ಲಿ ತಲಾ ಎರಡು ಮತ್ತು ಮೊರಾದಾಬಾದ್ನಲ್ಲಿ ಒಂದು ದೇವಾಲಯ ಬಾಗಿಲು ತೆರೆಯಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾರಾಣಸಿ: </strong>ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಇಲ್ಲಿನ ಮದನಪುರ ಪ್ರದೇಶದಲ್ಲಿ ತಿಂಗಳ ಹಿಂದೆ ಪತ್ತೆಯಾಗಿದ್ದ ಶಿವ ದೇವಾಲಯದ ಬಾಗಿಲನ್ನು ಬುಧವಾರ ತೆರೆಯಲಾಗಿದೆ.</p><p>200 ವರ್ಷಗಳಷ್ಟು ಹಳೆಯದ್ದು ಎನ್ನಲಾದ ಸಿದ್ದೇಶ್ವರ ಮಹಾದೇವ ದೇವಾಲಯವನ್ನು ಹಿಂದೂ ಸಂಘಟನೆಯ ಸದಸ್ಯರು 2024ರ ನವೆಂಬರ್ 19ರಂದು ಪತ್ತೆ ಹಚ್ಚಿದ್ದರು.</p><p>70 ವರ್ಷಗಳಿಗೂ ಹೆಚ್ಚು ಸಮಯದಿಂದ ದೇವಾಲಯದ ಬಾಗಿಲನ್ನು ಬಂದ್ ಮಾಡಲಾಗಿದೆ ಎಂದು ಹೇಳಿರುವ ಸನಾತನ ರಕ್ಷಾ ದಳ, ಪೂಜಾ ಕೈಂಕರ್ಯಗಳನ್ನು ಆರಂಭಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಅದರಂತೆ, ಸರ್ಕಾರದ ದಾಖಲೆಗಳನ್ನು ಪರಿಶೀಲಿಸಿರುವ ಜಿಲ್ಲಾಡಳಿತ, ದೇವಾಲಯವನ್ನು ತೆರೆಯಲು ಅನುಮತಿ ನೀಡಿದೆ ಎಂದು ವರದಿಯಾಗಿದೆ.</p><p>ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲೋಕ್ ವರ್ಮಾ ಅವರು, 'ದೇವಾಲಯವು ಸರ್ಕಾರಿ ಜಾಗದಲ್ಲಿದೆ. ಬೀಗ ತೆಗೆಯಲಾಗಿದೆ' ಎಂದಿದ್ದಾರೆ.</p><p>ದೇವಾಲಯಕ್ಕೆ ಬೀಗ ಜಡಿದಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ನಂತರ, ಈ ವಿಚಾರವನ್ನು ಸನಾತನ ರಕ್ಷಾ ದಳ ಸಂಘಟನೆಯು ಅಧಿಕಾರಿಗಳ ಗಮನಕ್ಕೆ ತಂದಿತ್ತು. ಇದರ ಬೆನ್ನಲ್ಲೇ, ಕಾರ್ಯಪ್ರವೃತ್ತವಾದ ಜಿಲ್ಲಾಡಳಿತ, ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಿತ್ತು.</p><p>ದೇಗುಲದ ಬಾಗಿಲು ತೆರೆಯುವ ವೇಳೆ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಲಿಲ್ಲ. ಸ್ಥಳೀಯರೂ ಸಹಕಾರ ನೀಡಿದರು ಎಂದು ವರ್ಮಾ ತಿಳಿಸಿದ್ದಾರೆ.</p><p>ದೇವಾಲಯದ ಒಳಗೆ, ಭಾರಿ ಪ್ರಮಾಣದ ಮಣ್ಣು, ಕಸದ ರಾಶಿ ತುಂಬಿತ್ತು. ಹಾನಿಯಾಗಿರುವ ಮೂರು ಶಿವಲಿಂಗಗಳು ಪತ್ತೆಯಾಗಿವೆ. ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ, ದೇವಾಲಯದ ಜೀರ್ಣೋದ್ಧಾರಕ್ಕೆ ಯೋಜಿಸಲಾಗಿದೆ ಎಂದು ತಿಳಿದುಬಂದಿದೆ.</p><p>ಇದರೊಂದಿಗೆ, ರಾಜ್ಯದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಆರನೇ ದೇವಾಲಯದ ಬಾಗಿಲು ತೆರೆದಂತಾಗಿದೆ. ಸಂಭಲ್ ಹಾಗೂ ಫಿರೋಜಾಬಾದ್ನಲ್ಲಿ ತಲಾ ಎರಡು ಮತ್ತು ಮೊರಾದಾಬಾದ್ನಲ್ಲಿ ಒಂದು ದೇವಾಲಯ ಬಾಗಿಲು ತೆರೆಯಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>