<p><strong>ಇಟಾವಾ(ಉತ್ತರ ಪ್ರದೇಶ): </strong>ಚಂಬಲ್ ಕಣಿವೆಯ ಕುವಾರಿ ನದಿಯಲ್ಲಿ ತಂದೆಯ ಅಸ್ಥಿ ವಿಸರ್ಜಿಸಲು ತೆರಳಿದ್ದ ವೇಳೆ ಮಗನೇ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. </p><p>ಮೃತ ವಿನೋದ್ ತಿವಾರಿ ಅವರ ಅಸ್ಥಿ ವಿಸರ್ಜಿಸಲು ಅವರ ಮಗ ಸಂತೋಷ್ ಕುಮಾರ್ ತಿವಾರಿ(22) ಮಂಗಳವಾರ ಕುವಾರಿ ನದಿ ಬಳಿ ತೆರಳಿದ್ದಾಗ ಘಟನೆ ಜರುಗಿದೆ. </p><p>ತಂದೆಯ ಅಸ್ಥಿ ವಿಸರ್ಜಿಸುವ ವೇಳೆ ಕಾಲುಜಾರಿ ಸಂತೋಷ್ ಅವರು ನೀರು ಪಾಲಾಗಿದ್ದಾರೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಕೊಚ್ಚಿಕೊಂಡು ಹೋಗಿದ್ದಾರೆ. ಜತೆಯಲ್ಲಿದ್ದವರು ಮೊಸಳೆಯ ಭಯದಿಂದ ಅವರನ್ನು ರಕ್ಷಿಸಲು ಮುಂದಾಗಿಲ್ಲ ಎಂದು ಹೇಳಿದ್ದಾರೆ. </p><p>ಘಟನೆ ತಿಳಿದ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ, ಇನ್ನೂ ಅವರ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಟಾವಾ(ಉತ್ತರ ಪ್ರದೇಶ): </strong>ಚಂಬಲ್ ಕಣಿವೆಯ ಕುವಾರಿ ನದಿಯಲ್ಲಿ ತಂದೆಯ ಅಸ್ಥಿ ವಿಸರ್ಜಿಸಲು ತೆರಳಿದ್ದ ವೇಳೆ ಮಗನೇ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. </p><p>ಮೃತ ವಿನೋದ್ ತಿವಾರಿ ಅವರ ಅಸ್ಥಿ ವಿಸರ್ಜಿಸಲು ಅವರ ಮಗ ಸಂತೋಷ್ ಕುಮಾರ್ ತಿವಾರಿ(22) ಮಂಗಳವಾರ ಕುವಾರಿ ನದಿ ಬಳಿ ತೆರಳಿದ್ದಾಗ ಘಟನೆ ಜರುಗಿದೆ. </p><p>ತಂದೆಯ ಅಸ್ಥಿ ವಿಸರ್ಜಿಸುವ ವೇಳೆ ಕಾಲುಜಾರಿ ಸಂತೋಷ್ ಅವರು ನೀರು ಪಾಲಾಗಿದ್ದಾರೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಕೊಚ್ಚಿಕೊಂಡು ಹೋಗಿದ್ದಾರೆ. ಜತೆಯಲ್ಲಿದ್ದವರು ಮೊಸಳೆಯ ಭಯದಿಂದ ಅವರನ್ನು ರಕ್ಷಿಸಲು ಮುಂದಾಗಿಲ್ಲ ಎಂದು ಹೇಳಿದ್ದಾರೆ. </p><p>ಘಟನೆ ತಿಳಿದ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ, ಇನ್ನೂ ಅವರ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>