<p><strong>ನೈನಿತಾಲ್</strong>: ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ ತಮಗೆ ಮೀಸಲಾತಿಯ ಪ್ರಯೋಜನ ಸಿಕ್ಕಿಲ್ಲ ಎಂದು ಅಭ್ಯರ್ಥಿಗಳು ದೂರು ನೀಡಲು ಸಾಧ್ಯವಿಲ್ಲ ಎಂದು ಉತ್ತರಾಖಂಡ ಹೈಕೋರ್ಟ್ ತೀರ್ಪು ನೀಡಿದೆ.</p><p>ಸಹಾಯಕ ಶಿಕ್ಷಕರ (ಪ್ರಾಥಮಿಕ) ಹುದ್ದೆಯ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮನೋಜ್ ಕುಮಾರ್ ತಿವಾರಿ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.</p><p>ಸದ್ಯ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿರುವ ನ್ಯಾಯಾಲಯದ ಮೆಟ್ಟಿಲೇರಿರುವ ವ್ಯಕ್ತಿಯು, ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದರು. ಚಂಪಾವತ್ ಜಿಲ್ಲೆಗೆ ಆಯ್ಕೆಯಾಗಿರುವ ಅಭ್ಯರ್ಥಿಯು ತನಗಿಂತ ಕಡಿಮೆ ಅಂಕಗಳನ್ನು ಪಡೆದಿದ್ದರೂ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದು ಆರೋಪಿಸಿರುವ ಅವರು, 2026 ಜನವರಿ 28ರಂದು ಪ್ರಕಟವಾದ ಆಯ್ಕೆ ಪಟ್ಟಿ ಹಾಗೂ ಪ್ರತಿವಾದಿಯ ನೇಮಕಾತಿಯನ್ನು ರದ್ದುಪಡಿಸಬೇಕು. ಹಾಗೆಯೇ ಅರ್ಹತೆಯ ಆಧಾರದ ಮೇಲೆ ತಮ್ಮನ್ನನ್ನು ಆಯ್ಕೆಗೆ ಪರಿಗಣಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.</p>.ರಾಜ್ಕೋಟ್ | ₹ 1,500 ಕೋಟಿ ಸೈಬರ್ ವಂಚನೆ: ಮತ್ತೆ ಮೂವರ ಸೆರೆ.Fact Check: ಪೊಲೀಸರ ಗುಂಪು ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುವುದು ಸುಳ್ಳು.<p>ಈ ಸಂಬಂಧ ನ್ಯಾಯಾಲಯಕ್ಕೆ ವಿವರ ನೀಡಿರುವ ರಾಜ್ಯ ಸರ್ಕಾರ, ಆಯ್ಕೆಯಾಗಿರುವ ಅಭ್ಯರ್ಥಿಯು ರಾಜ್ಯತ್ವ ಕಾರ್ಯಕರ್ತರ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದೆ.</p><p>ಉತ್ತರಾಖಂಡ ರಾಜ್ಯತ್ವ ಕಾರ್ಯಕರ್ತರು ಮತ್ತು ಅವರ ಅವಲಂಬಿತರಿಗೆ ರಾಜ್ಯ ಸರ್ಕಾರದ ಸೇವೆಗಳಲ್ಲಿ ಶೇ 10ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿದೆ. ಪ್ರಸ್ತುತ ನೇಮಕಾತಿಯ ಅಧಿಸೂಚನೆಯಲ್ಲೂ ಅದು ಅನ್ವಯವಾಗುತ್ತದೆ ಎಂಬುದಾಗಿ ಸ್ಪಷ್ಟವಾಗಿ ತಿಳಿಸಲಾಗಿತ್ತು ಎಂದೂ ಸರ್ಕಾರ ಹೇಳಿದೆ.</p><p>ಸದ್ಯ ದೂರು ನೀಡಿರುವ ವ್ಯಕ್ತಿಯೂ, ರಾಜ್ಯತ್ವ ಕಾರ್ಯಕರ್ತರ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಆದರೆ, ಅವರು ಸಲ್ಲಿಸಿದ ಅರ್ಜಿಯಲ್ಲಿ ಅದಕ್ಕೆ ಸಂಬಂಧಿಸಿದ ಮಾಹಿತಿ/ದಾಖಲೆಗಳನ್ನು ನಮೂದಿಸಿರಲಿಲ್ಲ ಎನ್ನಲಾಗಿದೆ.</p>.T20 WC | ಜಿಂಬಾಬ್ವೆ ವಿರುದ್ಧ 72 ರನ್ಗಳ ಜಯ: ಭಾರತದ ಸೆಮಿ ಕನಸು ಜೀವಂತ.ತುಮಕೂರು ಜಿಲ್ಲೆಯಲ್ಲಿ ಅಕ್ಕಪಡೆ ‘ಪಹರೆ’ ಶುರು: ಮಹಿಳೆ, ಮಕ್ಕಳ ರಕ್ಷಣೆ ಹೊಣೆ
<p><strong>ನೈನಿತಾಲ್</strong>: ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ ತಮಗೆ ಮೀಸಲಾತಿಯ ಪ್ರಯೋಜನ ಸಿಕ್ಕಿಲ್ಲ ಎಂದು ಅಭ್ಯರ್ಥಿಗಳು ದೂರು ನೀಡಲು ಸಾಧ್ಯವಿಲ್ಲ ಎಂದು ಉತ್ತರಾಖಂಡ ಹೈಕೋರ್ಟ್ ತೀರ್ಪು ನೀಡಿದೆ.</p><p>ಸಹಾಯಕ ಶಿಕ್ಷಕರ (ಪ್ರಾಥಮಿಕ) ಹುದ್ದೆಯ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮನೋಜ್ ಕುಮಾರ್ ತಿವಾರಿ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.</p><p>ಸದ್ಯ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿರುವ ನ್ಯಾಯಾಲಯದ ಮೆಟ್ಟಿಲೇರಿರುವ ವ್ಯಕ್ತಿಯು, ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದರು. ಚಂಪಾವತ್ ಜಿಲ್ಲೆಗೆ ಆಯ್ಕೆಯಾಗಿರುವ ಅಭ್ಯರ್ಥಿಯು ತನಗಿಂತ ಕಡಿಮೆ ಅಂಕಗಳನ್ನು ಪಡೆದಿದ್ದರೂ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದು ಆರೋಪಿಸಿರುವ ಅವರು, 2026 ಜನವರಿ 28ರಂದು ಪ್ರಕಟವಾದ ಆಯ್ಕೆ ಪಟ್ಟಿ ಹಾಗೂ ಪ್ರತಿವಾದಿಯ ನೇಮಕಾತಿಯನ್ನು ರದ್ದುಪಡಿಸಬೇಕು. ಹಾಗೆಯೇ ಅರ್ಹತೆಯ ಆಧಾರದ ಮೇಲೆ ತಮ್ಮನ್ನನ್ನು ಆಯ್ಕೆಗೆ ಪರಿಗಣಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.</p>.ರಾಜ್ಕೋಟ್ | ₹ 1,500 ಕೋಟಿ ಸೈಬರ್ ವಂಚನೆ: ಮತ್ತೆ ಮೂವರ ಸೆರೆ.Fact Check: ಪೊಲೀಸರ ಗುಂಪು ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುವುದು ಸುಳ್ಳು.<p>ಈ ಸಂಬಂಧ ನ್ಯಾಯಾಲಯಕ್ಕೆ ವಿವರ ನೀಡಿರುವ ರಾಜ್ಯ ಸರ್ಕಾರ, ಆಯ್ಕೆಯಾಗಿರುವ ಅಭ್ಯರ್ಥಿಯು ರಾಜ್ಯತ್ವ ಕಾರ್ಯಕರ್ತರ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದೆ.</p><p>ಉತ್ತರಾಖಂಡ ರಾಜ್ಯತ್ವ ಕಾರ್ಯಕರ್ತರು ಮತ್ತು ಅವರ ಅವಲಂಬಿತರಿಗೆ ರಾಜ್ಯ ಸರ್ಕಾರದ ಸೇವೆಗಳಲ್ಲಿ ಶೇ 10ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿದೆ. ಪ್ರಸ್ತುತ ನೇಮಕಾತಿಯ ಅಧಿಸೂಚನೆಯಲ್ಲೂ ಅದು ಅನ್ವಯವಾಗುತ್ತದೆ ಎಂಬುದಾಗಿ ಸ್ಪಷ್ಟವಾಗಿ ತಿಳಿಸಲಾಗಿತ್ತು ಎಂದೂ ಸರ್ಕಾರ ಹೇಳಿದೆ.</p><p>ಸದ್ಯ ದೂರು ನೀಡಿರುವ ವ್ಯಕ್ತಿಯೂ, ರಾಜ್ಯತ್ವ ಕಾರ್ಯಕರ್ತರ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಆದರೆ, ಅವರು ಸಲ್ಲಿಸಿದ ಅರ್ಜಿಯಲ್ಲಿ ಅದಕ್ಕೆ ಸಂಬಂಧಿಸಿದ ಮಾಹಿತಿ/ದಾಖಲೆಗಳನ್ನು ನಮೂದಿಸಿರಲಿಲ್ಲ ಎನ್ನಲಾಗಿದೆ.</p>.T20 WC | ಜಿಂಬಾಬ್ವೆ ವಿರುದ್ಧ 72 ರನ್ಗಳ ಜಯ: ಭಾರತದ ಸೆಮಿ ಕನಸು ಜೀವಂತ.ತುಮಕೂರು ಜಿಲ್ಲೆಯಲ್ಲಿ ಅಕ್ಕಪಡೆ ‘ಪಹರೆ’ ಶುರು: ಮಹಿಳೆ, ಮಕ್ಕಳ ರಕ್ಷಣೆ ಹೊಣೆ