<p><strong>ವಾರಾಣಸಿ</strong>: ಗ್ಯಾನವಾಪಿ ಮಸೀದಿಯಲ್ಲಿ, ಬಂದ್ ಮಾಡಲಾಗಿರುವ ಎಲ್ಲ ನೆಲಮಾಳಿಗೆಗಳ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್ಐ)ಯಿಂದ ಸಮೀಕ್ಷೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಫೆ. 15ರಂದು ನಡೆಸುವುದಾಗಿ ಇಲ್ಲಿನ ನ್ಯಾಯಾಲಯ ಮಂಗಳವಾರ ಹೇಳಿದೆ.</p>.<p>‘ಅರ್ಜಿಯ ಮುಂದಿನ ವಿಚಾರಣೆಯನ್ನು ಫೆ.15ರಂದು ನಿಗದಿ ಮಾಡಿ ಹಂಗಾಮಿ ಜಿಲ್ಲಾ ನ್ಯಾಯಾಧೀಶ ಅನಿಲ್ ಕುಮಾರ್ ಆದೇಶಿಸಿದ್ದಾರೆ’ ಎಂದು ಅರ್ಜಿದಾರರ ಪರ ವಕೀಲ ಮದನಮೋಹನ್ ಯಾದವ್ ತಿಳಿಸಿದ್ದಾರೆ.</p>.<p>‘ನೆಲಮಾಳಿಗೆಗಳಲ್ಲಿ ರಹಸ್ಯ ಕೋಣೆಗಳಿವೆ. ಹೀಗಾಗಿ, ಗ್ಯಾನವಾಪಿ ಮಸೀದಿ ಕುರಿತಂತೆ ಸಂಪೂರ್ಣ ಸತ್ಯವು ಹೊರಬರಬೇಕಾದರೆ ಎಲ್ಲ ನೆಲಮಾಳಿಗೆಗಳ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸುವುದು ಅಗತ್ಯ’ ಎಂದು ಅರ್ಜಿದಾರರಾದ ರಾಖಿ ಸಿಂಗ್ ಕೋರಿದ್ದಾರೆ.</p>.<p>ರಾಖಿ ಸಿಂಗ್ ಅವರು ವಿಶ್ವ ವೇದಿಕ್ ಸನಾತನ ಸಂಘದ ಸಂಸ್ಥಾಪಕ ಸದಸ್ಯೆ. ಗ್ಯಾನವಾಪಿ ಮಸೀದಿ ಸಂಕೀರ್ಣ ಕುರಿತು ಎಎಸ್ಐ ಸಮೀಕ್ಷೆ ನಡೆಸಲು ಕಾರಣವಾದ ಶೃಂಗಾರ ಗೌರಿ ಪ್ರಕರಣದಲ್ಲಿ ರಾಖಿ ಸಿಂಗ್ ಕೂಡ ಕಕ್ಷಿದಾರರಲ್ಲೊಬ್ಬರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾರಾಣಸಿ</strong>: ಗ್ಯಾನವಾಪಿ ಮಸೀದಿಯಲ್ಲಿ, ಬಂದ್ ಮಾಡಲಾಗಿರುವ ಎಲ್ಲ ನೆಲಮಾಳಿಗೆಗಳ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್ಐ)ಯಿಂದ ಸಮೀಕ್ಷೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಫೆ. 15ರಂದು ನಡೆಸುವುದಾಗಿ ಇಲ್ಲಿನ ನ್ಯಾಯಾಲಯ ಮಂಗಳವಾರ ಹೇಳಿದೆ.</p>.<p>‘ಅರ್ಜಿಯ ಮುಂದಿನ ವಿಚಾರಣೆಯನ್ನು ಫೆ.15ರಂದು ನಿಗದಿ ಮಾಡಿ ಹಂಗಾಮಿ ಜಿಲ್ಲಾ ನ್ಯಾಯಾಧೀಶ ಅನಿಲ್ ಕುಮಾರ್ ಆದೇಶಿಸಿದ್ದಾರೆ’ ಎಂದು ಅರ್ಜಿದಾರರ ಪರ ವಕೀಲ ಮದನಮೋಹನ್ ಯಾದವ್ ತಿಳಿಸಿದ್ದಾರೆ.</p>.<p>‘ನೆಲಮಾಳಿಗೆಗಳಲ್ಲಿ ರಹಸ್ಯ ಕೋಣೆಗಳಿವೆ. ಹೀಗಾಗಿ, ಗ್ಯಾನವಾಪಿ ಮಸೀದಿ ಕುರಿತಂತೆ ಸಂಪೂರ್ಣ ಸತ್ಯವು ಹೊರಬರಬೇಕಾದರೆ ಎಲ್ಲ ನೆಲಮಾಳಿಗೆಗಳ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸುವುದು ಅಗತ್ಯ’ ಎಂದು ಅರ್ಜಿದಾರರಾದ ರಾಖಿ ಸಿಂಗ್ ಕೋರಿದ್ದಾರೆ.</p>.<p>ರಾಖಿ ಸಿಂಗ್ ಅವರು ವಿಶ್ವ ವೇದಿಕ್ ಸನಾತನ ಸಂಘದ ಸಂಸ್ಥಾಪಕ ಸದಸ್ಯೆ. ಗ್ಯಾನವಾಪಿ ಮಸೀದಿ ಸಂಕೀರ್ಣ ಕುರಿತು ಎಎಸ್ಐ ಸಮೀಕ್ಷೆ ನಡೆಸಲು ಕಾರಣವಾದ ಶೃಂಗಾರ ಗೌರಿ ಪ್ರಕರಣದಲ್ಲಿ ರಾಖಿ ಸಿಂಗ್ ಕೂಡ ಕಕ್ಷಿದಾರರಲ್ಲೊಬ್ಬರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>