‘ಪ್ರಯಾಣಿಕರಿಗೆ ಕಡಿಮೆ ದರಗಳಲ್ಲಿ ಟಿಕೆಟ್ ನೀಡುತ್ತಿದ್ದು, ಪ್ರಯಾಣದ ಶೇ 50ರಷ್ಟು ದರವನ್ನು ಸಚಿವಾಲಯ ಈಗಾಗಲೇ ಭರಿಸುತ್ತಿದೆ.2017ರಿಂದ 2020ರವರೆಗೆ ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡಿರುವುದರಿಂದ ₹4,794 ಕೋಟಿ ಆದಾಯವನ್ನು ಸಚಿವಾಲಯವು ಕಳೆದುಕೊಂಡಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದರು.