ಇದೀಗ ಎನ್ಜಿಟಿಯು, ತಾಮ್ರ ಸಂಸ್ಕರಣಾ ಘಟಕ ಪುನರಾರಂಭಿಸಲು ಮೂರು ವಾರಗಳ ಒಳಗಾಗಿ ನವೀಕರಣ ಆದೇಶ ರವಾನಿಸುವಂತೆ ತಮಿಳುನಾಡು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿದೆ.ಜೊತೆಗೆ ಆ ಪ್ರದೇಶದ ನಿವಾಸಿಗಳ ಕಲ್ಯಾಣಕ್ಕಾಗಿ ಮೂರು ವರ್ಷಗಳ ಅವಧಿಯಲ್ಲಿ ₹ 1 ಕೋಟಿ ವಿನಿಯೋಗಿಸುವಂತೆ ಘಟಕಕ್ಕೂ ಆದೇಶಿಸಿದೆ.ವಿಚಾರಣೆ ಸಂದರ್ಭದಲ್ಲಿನೀರು ಸರಬರಾಜು, ಆಸ್ಪತ್ರೆ, ಆರೋಗ್ಯ ಸೇವೆಗಳು ಮತ್ತು ಕೌಶಲ್ಯ ಅಭಿವೃದ್ಧಿ ಮುಂತಾದ ಯೋಜನೆಗಳಿಗೆ ಹಣವನ್ನು ಖರ್ಚು ಮಾಡಬಹುದೆಂದು ತ್ಯಾಜ್ಯ ಮಂಡಳಿ ಸಲಹೆ ನೀಡಿದೆ.