ವಾಹನವನ್ನು ಅಂಗಡಿಯ ಮುಂದೆ ನಿಲ್ಲಿಸಿದ್ದರಿಂದ ತನ್ನ ಅಂಗಡಿಯಲ್ಲೇ ಪ್ರಸಾದ ತೆಗೆದುಕೊಳ್ಳಬೇಕು ಎಂದು ರಾಜಾ ಭಾಟಿ ಮುಂಬೈನಿಂದ ಬಂದಿದ್ದ ಮೂವರು ಭಕ್ತರನ್ನು ಒತ್ತಾಯಿಸಿದರು. ಇದು ಪರಸ್ಪರರ ನಡುವೆ ಹಲ್ಲೆಗೆ ಕಾರಣವಾಗಿ, ನಾಲ್ವರೂ ಗಾಯಗೊಂಡರು. ಮುಂಬೈನ ರಿಶಿ ಭಟ್ಟಾಚಾರ್ಯ ಎಂಬವರು ನೀಡಿದ ದೂರಿನ ಮೇಲೆ ಹಲ್ಲೆ, ಅಶ್ಲೀಲ ಪದಗಳ ಬಳಕೆ ಹಾಗೂ ಬೆದರಿಕೆ ಒಡ್ಡಿದ ಪ್ರಕರಣಗಳನ್ನು ದಾಖಲಿಸಿಕೊಂಡಿರುವುದಾಗಿ ಪ್ರದೀಪ್ ಶರ್ಮ ಮಾಹಿತಿ ನೀಡಿದರು.