<p><strong>ನವದೆಹಲಿ</strong>: 2047ರ ಹೊತ್ತಿಗೆ ಅಭಿವೃದ್ಧಿ ರಾಷ್ಟ್ರವಾಗಬೇಕು ಎಂಬ ಕಲ್ಪನೆಯು ಇನ್ನುಮುಂದೆ ಬರಿ ಕನಸಲ್ಲ. ನಿಶ್ಚಿತ ಗಮ್ಯ (ಗುರಿ) ಆಗಲಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಭಾನುವಾರ ಹೇಳಿದ್ದಾರೆ.</p><p>ಧನಕರ್ ಅವರು, ದೆಹಲಿ ಕಂಟೋನ್ಮೆಂಟ್ನಲ್ಲಿ ಎನ್ಸಿಸಿ ಗಣರಾಜ್ಯೋತ್ಸವ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದಾರೆ.</p><p>ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) – ದೇಶ ಸೇವಾ ಮನೋಭಾವದೊಂದಿಗೆ ಏಕತೆ ಹಾಗೂ ಶಿಸ್ತಿಗೆ ಹೆಸರುವಾಸಿಯಾದ ಯುವಕರ ಪಡೆಯಾಗಿದೆ ಎಂದು ಶ್ಲಾಘಿಸಿದ್ದಾರೆ.</p><p>ಕೆಡೆಟ್ಗಳನ್ನು ಉದ್ದೇಶಿಸಿ, 'ನೀವು ನಮ್ಮ ಜನಸಂಖ್ಯಾ ಬಲವನ್ನು ಪ್ರತಿನಿಧಿಸುತ್ತೀರಿ. ಇದು, ವಿಶ್ವಕ್ಕೇ ಅಸೂಯೆ ಹುಟ್ಟಿಸಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರ ಕುರಿತ ನಮ್ಮ ಕಲ್ಪನೆಯು ಇನ್ನು ಮುಂದೆ ಬರಿ ಕನಸಲ್ಲ. ಅದು ನಿಶ್ಚಿತ ಗುರಿಯಾಗಿದೆ' ಎಂದಿದ್ದಾರೆ.</p><p>'ಭಾರತವು 2047ರ ಹೊತ್ತಿಗೆ ಅಭಿವೃದ್ಧಿ ಸಾಧಿಸಲು ನೀವೆಲ್ಲ ನಿರ್ಣಾಯಕ ಪಾತ್ರ ವಹಿಸಲಿದ್ದೀರಿ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p><p>ದೇಶವು 2047ಕ್ಕೆ 100ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸುವಷ್ಟರಲ್ಲಿ 'ವಿಕಸಿತ ಭಾರತ' ನಿರ್ಮಾಣವಾಗಬೇಕು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.</p><p>ಎನ್ಸಿಸಿಯ ಒಟ್ಟು 2,361 ಕೆಡೆಟ್ಗಳು ಗಣರಾಜ್ಯೋತ್ಸವ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರದ 114 ಹಾಗೂ ಲಡಾಖ್ನ 178 ಮಂದಿ ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: 2047ರ ಹೊತ್ತಿಗೆ ಅಭಿವೃದ್ಧಿ ರಾಷ್ಟ್ರವಾಗಬೇಕು ಎಂಬ ಕಲ್ಪನೆಯು ಇನ್ನುಮುಂದೆ ಬರಿ ಕನಸಲ್ಲ. ನಿಶ್ಚಿತ ಗಮ್ಯ (ಗುರಿ) ಆಗಲಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಭಾನುವಾರ ಹೇಳಿದ್ದಾರೆ.</p><p>ಧನಕರ್ ಅವರು, ದೆಹಲಿ ಕಂಟೋನ್ಮೆಂಟ್ನಲ್ಲಿ ಎನ್ಸಿಸಿ ಗಣರಾಜ್ಯೋತ್ಸವ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದಾರೆ.</p><p>ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) – ದೇಶ ಸೇವಾ ಮನೋಭಾವದೊಂದಿಗೆ ಏಕತೆ ಹಾಗೂ ಶಿಸ್ತಿಗೆ ಹೆಸರುವಾಸಿಯಾದ ಯುವಕರ ಪಡೆಯಾಗಿದೆ ಎಂದು ಶ್ಲಾಘಿಸಿದ್ದಾರೆ.</p><p>ಕೆಡೆಟ್ಗಳನ್ನು ಉದ್ದೇಶಿಸಿ, 'ನೀವು ನಮ್ಮ ಜನಸಂಖ್ಯಾ ಬಲವನ್ನು ಪ್ರತಿನಿಧಿಸುತ್ತೀರಿ. ಇದು, ವಿಶ್ವಕ್ಕೇ ಅಸೂಯೆ ಹುಟ್ಟಿಸಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರ ಕುರಿತ ನಮ್ಮ ಕಲ್ಪನೆಯು ಇನ್ನು ಮುಂದೆ ಬರಿ ಕನಸಲ್ಲ. ಅದು ನಿಶ್ಚಿತ ಗುರಿಯಾಗಿದೆ' ಎಂದಿದ್ದಾರೆ.</p><p>'ಭಾರತವು 2047ರ ಹೊತ್ತಿಗೆ ಅಭಿವೃದ್ಧಿ ಸಾಧಿಸಲು ನೀವೆಲ್ಲ ನಿರ್ಣಾಯಕ ಪಾತ್ರ ವಹಿಸಲಿದ್ದೀರಿ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p><p>ದೇಶವು 2047ಕ್ಕೆ 100ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸುವಷ್ಟರಲ್ಲಿ 'ವಿಕಸಿತ ಭಾರತ' ನಿರ್ಮಾಣವಾಗಬೇಕು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.</p><p>ಎನ್ಸಿಸಿಯ ಒಟ್ಟು 2,361 ಕೆಡೆಟ್ಗಳು ಗಣರಾಜ್ಯೋತ್ಸವ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರದ 114 ಹಾಗೂ ಲಡಾಖ್ನ 178 ಮಂದಿ ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>