<p><strong>ನವದೆಹಲಿ</strong>: ‘ರಾಷ್ಟ್ರದ ಉನ್ನತ ನಾಯಕತ್ವವನ್ನು ನಾವು ಯಾವಾಗ ಭೇಟಿಯಾಗಲು ಸಾಧ್ಯವೆಂದು ಅಧಿಕಾರಿಗಳು ತಿಳಿಸುವವರೆಗೂ ನಾನು ಮತ್ತು ನನ್ನ ಬೆಂಬಲಿಗರು ಲಡಾಖ್ ಭವನದಲ್ಲಿಯೇ ಇರುತ್ತೇವೆ’ ಎಂದು ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಸೋಮವಾರ ತಿಳಿಸಿದ್ದಾರೆ. </p>.<p>‘ನಮ್ಮ ನಾಯಕರನ್ನು ನಾವು ಯಾವಾಗ ಭೇಟಿಯಾಗಬಹುದು ಎಂಬುದಕ್ಕೆ ಉತ್ತರ ಸಿಗುವವರೆಗೂ ನಾವು ಇಲ್ಲಿಯೇ ಇರಲಿದ್ದೇವೆ. ನಾವು 30ರಿಂದ 32 ದಿನಗಳು ನಡೆದು ಬಂದಿದ್ದೇವೆ. ನಮ್ಮ ನಾಯಕರ ಭೇಟಿಗೆ ನಾವು ಅರ್ಹರಿದ್ದೇವೆ’ ಎಂದು ವಾಂಗ್ಚುಕ್ ಸುದ್ದಿಸಂಸ್ಥೆಗೆ ತಿಳಿಸಿದರು.</p>.<p>‘ಲಡಾಖ್ ಅನ್ನು ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಒತ್ತಾಯಿಸುತ್ತಿರುವ ಪ್ರತಿಭಟನಕಾರರು ಅಸಾಮಾನ್ಯವಾದುದನ್ನು ಕೇಳುತ್ತಿಲ್ಲ. ಆಡಳಿತಾರೂಢ ಬಿಜೆಪಿಗೆ ತನ್ನ ಚುನಾವಣಾ ಭರವಸೆಯನ್ನು ನೆನಪಿಸಲು ಲಡಾಖ್ ಜನರು ಇಲ್ಲಿಗೆ ಬಂದಿದ್ದಾರೆ’ ಎಂದು ಅವರು ಹೇಳಿದರು.</p>.<p>ರಾಷ್ಟ್ರಪತಿ, ಪ್ರಧಾನಿ ಅಥವಾ ಗೃಹ ಸಚಿವರನ್ನು ಅಕ್ಟೋಬರ್ 4 ರಂದು ಭೇಟಿ ಮಾಡಲು ಸಮಯ ನೀಡದ ಕಾರಣ ವಾಂಗ್ಚುಕ್ ಮತ್ತು ಅವರ ಬೆಂಬಲಿಗರು ಭಾನುವಾರದಿಂದ ಲಡಾಖ್ ಭವನದಲ್ಲಿ ತಮ್ಮ ಅನಿರ್ದಿಷ್ಟ ಉಪವಾಸ ಪ್ರಾರಂಭಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ರಾಷ್ಟ್ರದ ಉನ್ನತ ನಾಯಕತ್ವವನ್ನು ನಾವು ಯಾವಾಗ ಭೇಟಿಯಾಗಲು ಸಾಧ್ಯವೆಂದು ಅಧಿಕಾರಿಗಳು ತಿಳಿಸುವವರೆಗೂ ನಾನು ಮತ್ತು ನನ್ನ ಬೆಂಬಲಿಗರು ಲಡಾಖ್ ಭವನದಲ್ಲಿಯೇ ಇರುತ್ತೇವೆ’ ಎಂದು ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಸೋಮವಾರ ತಿಳಿಸಿದ್ದಾರೆ. </p>.<p>‘ನಮ್ಮ ನಾಯಕರನ್ನು ನಾವು ಯಾವಾಗ ಭೇಟಿಯಾಗಬಹುದು ಎಂಬುದಕ್ಕೆ ಉತ್ತರ ಸಿಗುವವರೆಗೂ ನಾವು ಇಲ್ಲಿಯೇ ಇರಲಿದ್ದೇವೆ. ನಾವು 30ರಿಂದ 32 ದಿನಗಳು ನಡೆದು ಬಂದಿದ್ದೇವೆ. ನಮ್ಮ ನಾಯಕರ ಭೇಟಿಗೆ ನಾವು ಅರ್ಹರಿದ್ದೇವೆ’ ಎಂದು ವಾಂಗ್ಚುಕ್ ಸುದ್ದಿಸಂಸ್ಥೆಗೆ ತಿಳಿಸಿದರು.</p>.<p>‘ಲಡಾಖ್ ಅನ್ನು ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಒತ್ತಾಯಿಸುತ್ತಿರುವ ಪ್ರತಿಭಟನಕಾರರು ಅಸಾಮಾನ್ಯವಾದುದನ್ನು ಕೇಳುತ್ತಿಲ್ಲ. ಆಡಳಿತಾರೂಢ ಬಿಜೆಪಿಗೆ ತನ್ನ ಚುನಾವಣಾ ಭರವಸೆಯನ್ನು ನೆನಪಿಸಲು ಲಡಾಖ್ ಜನರು ಇಲ್ಲಿಗೆ ಬಂದಿದ್ದಾರೆ’ ಎಂದು ಅವರು ಹೇಳಿದರು.</p>.<p>ರಾಷ್ಟ್ರಪತಿ, ಪ್ರಧಾನಿ ಅಥವಾ ಗೃಹ ಸಚಿವರನ್ನು ಅಕ್ಟೋಬರ್ 4 ರಂದು ಭೇಟಿ ಮಾಡಲು ಸಮಯ ನೀಡದ ಕಾರಣ ವಾಂಗ್ಚುಕ್ ಮತ್ತು ಅವರ ಬೆಂಬಲಿಗರು ಭಾನುವಾರದಿಂದ ಲಡಾಖ್ ಭವನದಲ್ಲಿ ತಮ್ಮ ಅನಿರ್ದಿಷ್ಟ ಉಪವಾಸ ಪ್ರಾರಂಭಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>