<p><strong>ಕೋಟಾ:</strong> ಮದುವೆ ಮುಗಿಸಿಕೊಂಡು ಮರಳುತ್ತಿದ್ದ 9 ಜನರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಝಾಲಾವಾಢದಲ್ಲಿ ನಡೆದಿದೆ. </p>.<p>16ರಿಂದ 30 ವರ್ಷ ವಯಸ್ಸಿನ 9 ಜನ ಪುರುಷರು ಮಧ್ಯಪ್ರದೇಶದ ಡೂಂಗರಿ ಗ್ರಾಮದಲ್ಲಿ ಮದುವೆ ಮುಗಿಸಿಕೊಂಡು ಮರಳುತ್ತಿದ್ದರು. ಇವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಮೃತರ ಪೈಕಿ ರೋಹಿತ್ (16), ಸೋನು (22) ಮತ್ತು ದೀಪಕ್ (24) ಸಹೋದರರು ಎಂದು ಪೊಲೀಸರು ತಿಳಿಸಿದ್ದಾರೆ. </p>.<p>ಮೃತರಾದ ಅಶೋಕ್ (24), ಹೇಮರಾಜ್ (33) ರವಿಶಂಕರ್ (25) ಮತ್ತು ರಾಹುಲ್ (20) ಎಂಬುವವರು ಝಾಲಾವಾಢದ ಅಕಲೇರಾ ಗ್ರಾಮದ ನಿವಾಸಿಗಳು. ಉಳಿದಂತೆ ಮೃತ ರೋಹಿತ್ (22) ಮತ್ತು ರಾಮ್ಕಿಶನ್ (20) ಕ್ರಮವಾಗಿ ಝಾಲಾವಾಢದ ಖಾನ್ಪುರ ಹಾಗೂ ಬಾರಾ ಜಿಲ್ಲೆಯ ಹರನಾವಡಾ ನಿವಾಸಿಗಳು.</p>.<p>ಇನ್ನು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ 18 ವರ್ಷದ ಮನೀಶ್ ಬಗಾರಿ ಎಂಬುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟ್ರಕ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಟಾ:</strong> ಮದುವೆ ಮುಗಿಸಿಕೊಂಡು ಮರಳುತ್ತಿದ್ದ 9 ಜನರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಝಾಲಾವಾಢದಲ್ಲಿ ನಡೆದಿದೆ. </p>.<p>16ರಿಂದ 30 ವರ್ಷ ವಯಸ್ಸಿನ 9 ಜನ ಪುರುಷರು ಮಧ್ಯಪ್ರದೇಶದ ಡೂಂಗರಿ ಗ್ರಾಮದಲ್ಲಿ ಮದುವೆ ಮುಗಿಸಿಕೊಂಡು ಮರಳುತ್ತಿದ್ದರು. ಇವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಮೃತರ ಪೈಕಿ ರೋಹಿತ್ (16), ಸೋನು (22) ಮತ್ತು ದೀಪಕ್ (24) ಸಹೋದರರು ಎಂದು ಪೊಲೀಸರು ತಿಳಿಸಿದ್ದಾರೆ. </p>.<p>ಮೃತರಾದ ಅಶೋಕ್ (24), ಹೇಮರಾಜ್ (33) ರವಿಶಂಕರ್ (25) ಮತ್ತು ರಾಹುಲ್ (20) ಎಂಬುವವರು ಝಾಲಾವಾಢದ ಅಕಲೇರಾ ಗ್ರಾಮದ ನಿವಾಸಿಗಳು. ಉಳಿದಂತೆ ಮೃತ ರೋಹಿತ್ (22) ಮತ್ತು ರಾಮ್ಕಿಶನ್ (20) ಕ್ರಮವಾಗಿ ಝಾಲಾವಾಢದ ಖಾನ್ಪುರ ಹಾಗೂ ಬಾರಾ ಜಿಲ್ಲೆಯ ಹರನಾವಡಾ ನಿವಾಸಿಗಳು.</p>.<p>ಇನ್ನು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ 18 ವರ್ಷದ ಮನೀಶ್ ಬಗಾರಿ ಎಂಬುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟ್ರಕ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>