ಹೈದರಾಬಾದ್: ಕರ್ನಾಟಕದಲ್ಲಿ ಕಾಂಗ್ರೆಸ್ ಕೌನ್ಸಿಲರ್ನ ಮಗಳೇ ಕೊಲೆಯಾಗಿದ್ದು, ಆ ಪಕ್ಷವು ಯಾವ ನ್ಯಾಯದ ಖಾತರಿ ನೀಡಬಹುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ ಪ್ರಶ್ನಿಸಿದರು.
ಮೃತ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಕುಟುಂಬದವರು ಪ್ರಕರಣದ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಬೇಕಾಯಿತು ಎಂದೂ ಸಚಿವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ‘ಎಲ್ಲರ ಜತೆ, ಎಲ್ಲರ ಅಭಿವೃದ್ಧಿ’ ಎಂಬ ಭರವಸೆಯನ್ನು ನೀಡಿದೆ ಎಂದರು.
‘ರಾಹುಲ್ ಗಾಂಧಿ ಅವರ ‘ದ್ವೇಷದ ಅಂಗಡಿ’, ಬಜಾರ್ ಆರಂಭಗೊಂಡಿದೆ. ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದಲ್ಲಿ ನೇಹಾ ಅವರ ಕುಟುಂಬಕ್ಕೆ ನ್ಯಾಯ ಸಿಗದು. ಅದಕ್ಕಾಗಿಯೇ ಅವರು ಸಿಬಿಐ ತನಿಖೆಗೆ ಒತ್ತಾಯಿಸಿದ್ದು’ ಎಂದು ಹೇಳಿದರು.