ನವದೆಹಲಿ: ‘ಭಾರತದ ಭೂಪ್ರದೇಶವನ್ನು ಚೀನೀಯರು ಆಕ್ರಮಿಸಿಕೊಂಡಿದ್ದು ಹೇಗೆ ಮತ್ತು ಭಾರತದ ಯಾವ ಪ್ರದೇಶವನ್ನು ಅವರು ಆಕ್ರಮಿಸಿಕೊಂಡಿದ್ದಾರೆ ಎಂಬುದನ್ನು ದೇಶದ ಜನತೆಗೆ ತಿಳಿಸಬೇಕು’ ಎಂದು ವಿರೋಧಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿವೆ.
‘ಗಡಿಯಲ್ಲಿ ಸೋಮವಾರ ರಾತ್ರಿ 20 ಸೈನಿಕರ ಸಾವಿಗೆ ಕಾರಣವಾದ ಘಟನೆಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾಡಿರುವ ಟ್ವೀಟ್ನಲ್ಲಿ ಚೀನಾದ ಹೆಸರನ್ನು ಯಾಕೆ ಪ್ರಸ್ತಾಪಿಸಿಲ್ಲ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಪ್ರಶ್ನಿಸಿದ್ದಾರೆ. ಆ ಮೂಲಕ ಸಚಿವರು ಭಾರತೀಯ ಸೇನೆಯನ್ನು ಅಪಮಾನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
If it was so painful:
— Rahul Gandhi (@RahulGandhi) June 17, 2020
1. Why insult Indian Army by not naming China in your tweet?
2. Why take 2 days to condole?
3. Why address rallies as soldiers were being martyred?
4. Why hide and get the Army blamed by the crony media?
5. Why make paid-media blame Army instead of GOI? https://t.co/mpLpMRxwS7
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಹುಲ್, ರಕ್ಷಣಾ ಸಚಿವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
‘ಘಟನೆಯ ಬಗ್ಗೆ ಟ್ವೀಟ್ ಮಾಡಲು ಎರಡು ದಿನಗಳನ್ನು ತೆಗೆದುಕೊಂಡಿದ್ದೇಕೆ, ಸೈನಿಕರು ಗಡಿಯಲ್ಲಿ ಹುತಾತ್ಮರಾಗುತ್ತಿದ್ದರೆ ಸಚಿವರು ಚುನಾವಣಾ ರ್ಯಾಲಿಯಲ್ಲಿ ಭಾಷಣವನ್ನು ಮುಂದುವರಿಸಿದ್ದೇಕೆ, ಘಟನೆಯು ನಿಜವಾಗಿಯೂ ನಿಮಗೆ ನೋವು ಉಂಟುಮಾಡಿದ್ದರೆ ಟ್ವೀಟ್ನಲ್ಲಿ ಚೀನಾದ ಹೆಸರನ್ನು ಉಲ್ಲೇಖಿಸದೆ ಸೇನೆಯನ್ನು ಅಪಮಾನಿಸಿದ್ದೇಕೆ’ ಎಂದು ಪ್ರಶ್ನಿಸಿದ್ದಾರೆ.
‘ಸರ್ಕಾರವೇ ನೇರವಾಗಿ ಚೀನಾವನ್ನು ನಿಂದಿಸುವ ಬದಲು, ತಾವು ಅವಿತು ಕುಳಿತು, ಕಾಸಿಗಾಗಿ ಸುದ್ದಿ ಪ್ರಕಟಿಸುವ ಮಾಧ್ಯಮಗಳ ಮೂಲಕ ಚೀನಾದ ಸೇನೆಯನ್ನು ನಿಂದಿಸಿರುವುದರ ಉದ್ದೇಶವೇನು? ಎಂದು ರಾಹುಲ್ ಪ್ರಶ್ನಿಸಿದ್ದಾರೆ.
‘ಭಾರತದ 20 ಸೈನಿಕರ ಹತ್ಯೆ ಯಾಕಾಯಿತು, ಇನ್ನೂ ಯಾರಾದರೂ ಸೈನಿಕರು ಕಾಣೆಯಾಗಿದ್ದಾರೆಯೇ, ಎಷ್ಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬುದನ್ನು ತಿಳಿಸಿ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಿರುವ ಅವರು, ‘ಪರಿಸ್ಥಿತಿಯ ಬಗ್ಗೆ ತನ್ನ ನಿಲುವೇನು, ಮುಂದಿನ ಹೆಜ್ಜೆಗಳೇನು ಎಂಬುದನ್ನು ಸರ್ಕಾರ ತಿಳಿಸಬೇಕು. ಈ ವಿಚಾರದಲ್ಲಿ ಭಾರತೀಯ ಸೇನೆ ಮತ್ತು ಸರ್ಕಾರಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ’ ಎಂದಿದ್ದಾರೆ. ಘಟನೆಗೆ ವಿವಿಧ ವಿವಿಧ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ಸರ್ವಪಕ್ಷ ಸಭೆ
ಗಡಿ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಜೂನ್ 19) ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರ ಜತೆ ವರ್ಚುವಲ್ ಸಭೆಯನ್ನು ಆಯೋಜಿಸಿದ್ದಾರೆ.
**
Deep condolences at the death of our officer & 2 soldiers.
— Sitaram Yechury (@SitaramYechury) June 16, 2020
Govt should make an authoritative statement as to what actually happened. It’s imperative that both govts advance the process of disengagement on the basis of the agreed understanding on maintaining peace and tranquility pic.twitter.com/mViT6G6U1W
ಗಡಿಯಲ್ಲಿ ಏನಾಗಿದೆ ಎಂಬ ಬಗ್ಗೆ ಸರ್ಕಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಬೇಕು. ಶಾಂತಿ– ಸುವ್ಯವಸ್ಥೆ ಕಾಪಾಡುವ ಸಲುವಾಗಿ ಎರಡೂ ಸರ್ಕಾರಗಳು ಹಿಂದೆ ಮಾಡಿಕೊಂಡಿರುವ ಒಪ್ಪಂದವನ್ನು ಗೌರವಿಸಿ, ಉದ್ವಿಗ್ನತೆಯನ್ನು ಶಮನಗೊಳಿಸುವ ಕೆಲಸ ಆರಂಭಿಸಬೇಕು.
– ಸೀತಾರಾಂ ಯೆಚೂರಿ, ಸಿಪಿಎಂ ನಾಯಕ
**
Nothing can compensate for the supreme sacrifice made by them for the nation or the bereaved families' loss. We stand by the next of the sons of our soil in this difficult time. To this regard, we'll provide ₹5 lakh & a GoWB job to one member in the deceased's family. (2/2)
— Mamata Banerjee (@MamataOfficial) June 17, 2020
‘ಸೈನಿಕರ ಬಲಿದಾನದಿಂದ ದೇಶಕ್ಕೆ ಮತ್ತು ಅವರು ಕುಟುಂಬದವರಿಗೆ ಆಗಿರುವ ನಷ್ಟವನ್ನು ಭರಿಸಲಾಗದು. ಇಂಥ ಸಂಕಷ್ಟದ ಸ್ಥಿತಿಯಲ್ಲಿ ನಾವೆಲ್ಲರೂ ಈ ಮಣ್ಣಿನ ಮಕ್ಕಳ ಬೆಂಬಲಕ್ಕೆ ಇದ್ದೇವೆ.
– ಮಮತಾ ಬ್ಯಾನರ್ಜಿ,ಪಶ್ಚಿಮ ಬಂಗಾಳದ ಮುಖ್ಯಮಂತ್ರಿ
**
चीन के हिंसक व्यवहार को देखते हुए भारत सरकार को सामरिक के साथ-साथ आर्थिक जवाब भी देना चाहिए. चीनी कंपनियों को दिए गए ठेके तत्काल प्रभाव से निलंबित होने चाहिए और चीनी-आयात पर अंकुश लगाना चाहिए. सरकार के ऐसे किसी भी प्रयास में समाजवादी पार्टी देशहित में सरकार के साथ है.
— Akhilesh Yadav (@yadavakhilesh) June 17, 2020
ಚೀನಾದ ಕಂಪನಿಗಳಿಗೆ ನೀಡಿರುವ ಎಲ್ಲಾ ಗುತ್ತಿಗೆಗಳನ್ನು ರದ್ದು ಮಾಡಬೇಕು, ತಕ್ಷಣದಿಂದ ಜಾರಿಯಾಗುವಂತೆ ಚೀನಾದ ಕಂಪನಿಗಳನ್ನು ಅಮಾನತುಗೊಳಿಸಬೇಕು.
– ಅಖಿಲೆಶ್ ಯಾದವ್, ಎಸ್ಪಿ ಮುಖಂಡ
**
ಪ್ರಧಾನಿಯವರೇ ನೀವು ಧೈರ್ಯವಂತರು, ನಿಮ್ಮ ನೇತೃತ್ವದಲ್ಲಿ ಚೀನಾದ ವಿರುದ್ಧ ಪ್ರತೀಕಾರ ಸಾಧ್ಯವಿದೆ. ಚೀನಾಗೆ ತಕ್ಕ ಪ್ರತ್ಯುತ್ತರ ನೇಡಬೇಕು.
– ಸಂಜಯರ್ ರಾವುತ್, ಶಿವಸೇನಾ ಮುಖಂಡ
प्रधान मंत्री जी आप शुर और योद्धा हो..आपके नेतृत्त्वमे
— Sanjay Raut (@rautsanjay61) June 17, 2020
देश चीन से बदला लेंगा..
**
ಭಾರತೀಯ ಸೈನಿಕರು ಅಸಾಧಾರಣ ಧೈರ್ಯ ಮತ್ತು ಸಾಹಸವನ್ನು ಪ್ರದರ್ಶಿಸಿದ್ದಾರೆ. ಅವರ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ. ಇಡೀ ದೇಶ, ಹುತಾತ್ಮರಾದ ಸೈನಿಕರ ಕುಟುಂಬದ ಬೆಂಬಲಕ್ಕೆ ಇದೆ.
–ರಾಜನಾಥ್ ಸಿಂಗ್, ರಕ್ಷಣಾ ಸಚಿವ
The loss of soldiers in Galwan is deeply disturbing and painful. Our soldiers displayed exemplary courage and valour in the line of duty and sacrificed their lives in the highest traditions of the Indian Army.
— Rajnath Singh (@rajnathsingh) June 17, 2020
The Nation will never forget their bravery and sacrifice. My heart goes out to the families of the fallen soldiers. The nation stand shoulder to shoulder with them in this difficult hour. We are proud of the bravery and courage of India’s breavehearts.
— Rajnath Singh (@rajnathsingh) June 17, 2020
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.