ಜೂನ್ 22 ರಂದು ಮುಖ್ಯಮಂತ್ರಿ ಕೆಸಿಆರ್ ಅವರು ಸೂರ್ಯಪೇಟೆ ಪಟ್ಟಣದ ಸಂತೋಷ್ ಬಾಬು ಅವರ ನಿವಾಸಕ್ಕೆ ತೆರಳಿ ಅವರ ಪೋಷಕರು ಮತ್ತು ಇತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು. ಅಲ್ಲದೆ, ಸ್ಥಳದಲ್ಲೇ ₹5 ಕೋಟಿ ಪರಿಹಾರ ಘೋಷಿಸಿದ್ದರು. ಸಂತೋಷ್ ಬಾಬು ಅವರ ಪತ್ನಿಗೆ ಗ್ರೂಪ್ 'ಎ' ಕೆಲಸದ ನೇಮಕಾತಿ ಪತ್ರ ಮತ್ತು ಹೈದರಾಬಾದ್ನ ಬಂಜಾರ ಹಿಲ್ಸ್ನಲ್ಲಿ 711 ಚದರ ಅಡಿಗಳಷ್ಟು ಅಳತೆ ಇರುವ ನಿವೇಶನ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಅವರು ಹಸ್ತಾಂತರಿಸಿದ್ದರು.