<p><strong>ಭದೋಹಿ:</strong> 24 ದಿನಗಳಿಂದ ಕಾಣೆಯಾಗಿದ್ದ 65 ವರ್ಷದ ವೃದ್ಧೆಯ ಮೃತದೇಹವು ಕೆಟ್ಟು ಹೋಗಿದ್ದ ಬೋರ್ವೆಲ್ ಒಂದರ ಪೈಪ್ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಮೃತ ವೃದ್ಧೆ ಶ್ಯಾಮ ದೇವಿ ಆಗಸ್ಟ್ 14ರಂದು ಭೈರಾ ಕಾಸ್ ಗ್ರಾಮದಲ್ಲಿನ ಮನೆಯಿಂದ ಕಾಣೆಯಾಗಿದ್ದರು. ಆಗಸ್ಟ್ 18ರಂದು ದೂರು ದಾಖಲಾಗಿತ್ತು ಎಂದು ಪತಿ ಹರಿಶಂಕರ್ ಮೌರ್ಯ ತಿಳಿಸಿದ್ದಾರೆ.</p>.ಹೃದಯ ಸ್ತಂಭನದಿಂದ ಹಿಂದಿ ಕಿರುತೆರೆ ನಟ ವಿಕಾಸ್ ಸೇಥಿ ಸಾವು. <p>ಭಾನುವಾರದಂದು ಬೋರ್ವೆಲ್ನಿಂದ ವಾಸನೆ ಬರುತ್ತಿತ್ತು. ಈ ಬೋರ್ವೆಲ್ 5 ವರ್ಷದಿಂದ ಮುಚ್ಚಿದ ಸ್ಥಿತಿಯಲ್ಲಿದೆ. 1.5 ಅಡಿ ಸುತ್ತಳತೆಯ ಬೋರ್ವೆಲ್ ಒಳಗೆ ಸುಮಾರು 20 ಅಡಿ ಹಗ್ಗವನ್ನು ಗ್ರಾಮಸ್ಥರು ಇಳಿಬಿಟ್ಟಿದ್ದಾರೆ. ಬಳಿಕ ಫ್ಲಾಶ್ಲೈಟ್ ಬಳಸಿ ನೋಡಿದಾಗ ಕೈ ಗೋಚರಿಸಿದೆ.</p><p>ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ನೆರವಿನಿಂದ ಬೋರ್ವೆಲ್ ಒಳಗಿನ ಮೃತದೇಹವನ್ನು ಹೊರತೆಗೆದಿದ್ದಾರೆ.</p>.ದೇವರಹಿಪ್ಪರಗಿ: ರಥದ ಗಾಲಿಗೆ ಸಿಲುಕಿ ಯುವಕ ಸಾವು .<p>ಮೃತ ಶ್ಯಾಮ ದೇವಿ ಮಾನಸಿಕ ಅಸ್ವಸ್ಥೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಘಟನೆಯ ಬಗ್ಗೆ ನಿಖರ ಕಾರಣ ಪತ್ತೆ ಮಾಡಲು ತನಿಖೆ ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.</p><p>ಮಹಿಳೆಗೆ ಐವರು ಮಕ್ಕಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ</p> .ಚನ್ನಪಟ್ಟಣ: ಗಣೇಶ ವಿಸರ್ಜನೆ ವೇಳೆ ನೀರಲ್ಲಿ ಮುಳುಗಿ ವ್ಯಕ್ತಿ ಸಾವು .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದೋಹಿ:</strong> 24 ದಿನಗಳಿಂದ ಕಾಣೆಯಾಗಿದ್ದ 65 ವರ್ಷದ ವೃದ್ಧೆಯ ಮೃತದೇಹವು ಕೆಟ್ಟು ಹೋಗಿದ್ದ ಬೋರ್ವೆಲ್ ಒಂದರ ಪೈಪ್ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಮೃತ ವೃದ್ಧೆ ಶ್ಯಾಮ ದೇವಿ ಆಗಸ್ಟ್ 14ರಂದು ಭೈರಾ ಕಾಸ್ ಗ್ರಾಮದಲ್ಲಿನ ಮನೆಯಿಂದ ಕಾಣೆಯಾಗಿದ್ದರು. ಆಗಸ್ಟ್ 18ರಂದು ದೂರು ದಾಖಲಾಗಿತ್ತು ಎಂದು ಪತಿ ಹರಿಶಂಕರ್ ಮೌರ್ಯ ತಿಳಿಸಿದ್ದಾರೆ.</p>.ಹೃದಯ ಸ್ತಂಭನದಿಂದ ಹಿಂದಿ ಕಿರುತೆರೆ ನಟ ವಿಕಾಸ್ ಸೇಥಿ ಸಾವು. <p>ಭಾನುವಾರದಂದು ಬೋರ್ವೆಲ್ನಿಂದ ವಾಸನೆ ಬರುತ್ತಿತ್ತು. ಈ ಬೋರ್ವೆಲ್ 5 ವರ್ಷದಿಂದ ಮುಚ್ಚಿದ ಸ್ಥಿತಿಯಲ್ಲಿದೆ. 1.5 ಅಡಿ ಸುತ್ತಳತೆಯ ಬೋರ್ವೆಲ್ ಒಳಗೆ ಸುಮಾರು 20 ಅಡಿ ಹಗ್ಗವನ್ನು ಗ್ರಾಮಸ್ಥರು ಇಳಿಬಿಟ್ಟಿದ್ದಾರೆ. ಬಳಿಕ ಫ್ಲಾಶ್ಲೈಟ್ ಬಳಸಿ ನೋಡಿದಾಗ ಕೈ ಗೋಚರಿಸಿದೆ.</p><p>ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ನೆರವಿನಿಂದ ಬೋರ್ವೆಲ್ ಒಳಗಿನ ಮೃತದೇಹವನ್ನು ಹೊರತೆಗೆದಿದ್ದಾರೆ.</p>.ದೇವರಹಿಪ್ಪರಗಿ: ರಥದ ಗಾಲಿಗೆ ಸಿಲುಕಿ ಯುವಕ ಸಾವು .<p>ಮೃತ ಶ್ಯಾಮ ದೇವಿ ಮಾನಸಿಕ ಅಸ್ವಸ್ಥೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಘಟನೆಯ ಬಗ್ಗೆ ನಿಖರ ಕಾರಣ ಪತ್ತೆ ಮಾಡಲು ತನಿಖೆ ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.</p><p>ಮಹಿಳೆಗೆ ಐವರು ಮಕ್ಕಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ</p> .ಚನ್ನಪಟ್ಟಣ: ಗಣೇಶ ವಿಸರ್ಜನೆ ವೇಳೆ ನೀರಲ್ಲಿ ಮುಳುಗಿ ವ್ಯಕ್ತಿ ಸಾವು .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>