ಪರಾಶರನ್ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ ಬಳಿಕ, ‘ಧವನ್ ಅವರೇ, ನಾವು ಹಿಂದೂ ಕಕ್ಷಿದಾರರಿಗೆ ಸಾಕಷ್ಟು ಪ್ರಶ್ನೆಗಳಿನ್ನು ಕೇಳಿದ್ದೇವೆ ಅಲ್ಲವೇ’ ಎಂದು ಮುಖ್ಯನ್ಯಾಯಮೂರ್ತಿ ಪ್ರಶ್ನಿಸಿದರು. ಮುಸ್ಲಿಂ ಕಕ್ಷಿದಾರರ ಪರ ವಕೀಲ ರಾಜೀವ್ ಧವನ್ ಅವರು ‘ಹಿಂದೂ ಕಕ್ಷಿದಾರರಿಗಿಂತ ಮುಸ್ಲಿಂ ಕಕ್ಷಿದಾರರಿಗೆ ಹೆಚ್ಚು ಪ್ರಶ್ನೆ ಕೇಳಲಾಗುತ್ತಿದೆ’ ಎಂದು ಸೋಮವಾರ ಆರೋಪಿಸಿದ್ದರು.