<p><strong>ನವದೆಹಲಿ:</strong> ಯಮುನಾ ನದಿಯನ್ನು ಮಾಲಿನ್ಯ ಮುಕ್ತವಾಗಿಸುವ ಕಡೆಗೆ ನಮ್ಮ ಸರ್ಕಾರವು ಹೆಜ್ಜೆಯಿಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ತಿಳಿಸಿದರು. </p><p>ಗುರುವಾರ ಯಮುನಾ ನದಿಯ ಪುನರುಜ್ಜೀವನದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗಿನ ಮಾತುಕತೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. </p><p>ಯಮುನಾ ನದಿಯ ಮೂಲ ಸ್ಥಾನದಿಂದ ಸಮುದ್ರ ಸೇರುವವರೆಗೆ ಮಾಲಿನ್ಯ ಮುಕ್ತವಾಗಿಸುವುದು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿ ಯೋಜನೆಯಾಗಿದೆ ಎಂದರು. </p>.ಯಮುನಾ ನೀರು | ಗುಣಮಟ್ಟ ಇಲ್ಲ: ಸಂಸದೀಯ ಸಮಿತಿ.<p>ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರವು ಸಹಯೋಗದಲ್ಲಿ ದೆಹಲಿ ಸಮೀಪ ಯಮುನಾ ನದಿಯನ್ನು ಮಾಲಿನ್ಯ ಮುಕ್ತವಾಗಿಸುವ ಕೆಲಸ ಮಾಡುತ್ತಿದ್ದು, ಹಂತ ಹಂತವಾಗಿ ನದಿಯನ್ನು ಸ್ವಚ್ಛ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು. </p><p>ದೆಹಲಿಯ ವಜೀರಾಬಾದ್ ಮತ್ತು ಓಖ್ಲಾ ನಡುವಿನ 22 ಕಿ.ಮೀ ಪ್ರದೇಶದಲ್ಲಿ ಯಮುನಾ ನದಿಗೆ ಅದರ ಒಟ್ಟು ಮಾಲಿನ್ಯದ ಶೇ.80ರಷ್ಟು ಸೇರ್ಪಡೆಯಾಗುತ್ತಿದ್ದು, ಈ ವಿಸ್ತೀರ್ಣವು ಕೇವಲ ನದಿಯ ಶೇ.2ರಷ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಯಮುನಾ ನದಿಯನ್ನು ಮಾಲಿನ್ಯ ಮುಕ್ತವಾಗಿಸುವ ಕಡೆಗೆ ನಮ್ಮ ಸರ್ಕಾರವು ಹೆಜ್ಜೆಯಿಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ತಿಳಿಸಿದರು. </p><p>ಗುರುವಾರ ಯಮುನಾ ನದಿಯ ಪುನರುಜ್ಜೀವನದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗಿನ ಮಾತುಕತೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. </p><p>ಯಮುನಾ ನದಿಯ ಮೂಲ ಸ್ಥಾನದಿಂದ ಸಮುದ್ರ ಸೇರುವವರೆಗೆ ಮಾಲಿನ್ಯ ಮುಕ್ತವಾಗಿಸುವುದು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿ ಯೋಜನೆಯಾಗಿದೆ ಎಂದರು. </p>.ಯಮುನಾ ನೀರು | ಗುಣಮಟ್ಟ ಇಲ್ಲ: ಸಂಸದೀಯ ಸಮಿತಿ.<p>ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರವು ಸಹಯೋಗದಲ್ಲಿ ದೆಹಲಿ ಸಮೀಪ ಯಮುನಾ ನದಿಯನ್ನು ಮಾಲಿನ್ಯ ಮುಕ್ತವಾಗಿಸುವ ಕೆಲಸ ಮಾಡುತ್ತಿದ್ದು, ಹಂತ ಹಂತವಾಗಿ ನದಿಯನ್ನು ಸ್ವಚ್ಛ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು. </p><p>ದೆಹಲಿಯ ವಜೀರಾಬಾದ್ ಮತ್ತು ಓಖ್ಲಾ ನಡುವಿನ 22 ಕಿ.ಮೀ ಪ್ರದೇಶದಲ್ಲಿ ಯಮುನಾ ನದಿಗೆ ಅದರ ಒಟ್ಟು ಮಾಲಿನ್ಯದ ಶೇ.80ರಷ್ಟು ಸೇರ್ಪಡೆಯಾಗುತ್ತಿದ್ದು, ಈ ವಿಸ್ತೀರ್ಣವು ಕೇವಲ ನದಿಯ ಶೇ.2ರಷ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>