ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಅಡಳಿತದಲ್ಲಿ ಉತ್ತರಪ್ರದೇಶವು ಹೂಡಿಕೆಯ ನೆಚ್ಚಿನ ತಾಣವಾಗಿ ಬದಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಭಿಪ್ರಾಯಪಟ್ಟಿದ್ದಾರೆ.
ನಡ್ಡಾ ಅವರು ಇಂದು (ಶನಿವಾರ) ತಮ್ಮ ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆನಡ್ಡಾ ಅವರು,ʼಉದ್ಯಮಸ್ನೇಹಿರಾಜ್ಯಗಳ ಪಟ್ಟಿಯಲ್ಲಿಉತ್ತರ ಪ್ರದೇಶವುಇಂದು ಎರಡನೇ ಸ್ಥಾನದಲ್ಲಿದೆ. ತಲಾದಾಯವು ದ್ವಿಗುಣಗೊಂಡಿದೆ. ರಾಜ್ಯವು ಯೋಗಿ ಸರ್ಕಾರದ ಅಡಿಯಲ್ಲಿ ಹೂಡಿಕೆಯ ನೆಚ್ಚಿನ ತಾಣವಾಗಿ ಬದಲಾಗಿದೆʼ ಎಂದು ಹೇಳಿದ್ದಾರೆ.
ಉತ್ತರಪ್ರದೇಶವು ʼಒಂದು ರಾಷ್ಟ್ರ-ಒಂದು ಪಡಿತರ ಚೀಟಿʼ ಯೋಜನೆಯನ್ನು ಅಳವಡಿಸಿಕೊಂಡ ಮೊದಲ ರಾಜ್ಯವೂ ಹೌದು ಎಂದು ಶ್ಲಾಘಿಸಿದ್ದಾರೆ.
ಮುಂದುವರಿದು, ʼನಿಮ್ಮ ಕ್ಷೇತ್ರಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವುದು ಹಾಗೂಅಡುಗೆ ಅನಿಲ ಸೌಲಭ್ಯ ಹೊಂದಿಲ್ಲದವರನ್ನು ಗುರುತಿಸಿ ಸೌಲಭ್ಯವನ್ನು ತಲುಪಿಸುವ ಹೊಣೆನಿಮ್ಮದೇʼ ಎಂದುಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಸ್ಥಳೀಯ ನಾಯಕರಿಗೆ ನಡ್ಡಾ ಸೂಚಿಸಿದರು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಪ್ರಕಟಗೊಂಡʼಉದ್ಯಮಸ್ನೇಹಿʼ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ ಮೊದಲನೇ ಮತ್ತುಉತ್ತರಪ್ರದೇಶ ಎರಡನೇ ಸ್ಥಾನದಲ್ಲಿದ್ದವು.