<p>ನವದೆಹಲಿ (ಪಿಟಿಐ): ರಾಜಕೀಯ ಪಕ್ಷ ರಚನೆಗೆ ದಾರಿ ಮಾಡಿಕೊಡುವ ಸಲುವಾಗಿ ಅಣ್ಣಾ ತಂಡವು ಸೋಮವಾರ ತನ್ನನ್ನು ಸ್ವಯಂ ವಿಸರ್ಜನೆ ಮಾಡಿಕೊಂಡಿದೆ. ಮತ್ತು ಇನ್ನುಮುಂದೆ ಲೋಕಪಾಲ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಜೊತೆಗೆ ಯಾವುದೇ ಮಾತುಕತೆ ನಡೆಸದೇ ಇರಲು ತೀರ್ಮಾನಿಸಿದೆ.<br /> <br /> 2014ರ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಪರ್ಯಾಯ ರಚನೆಯ ಯೋಜನೆಯೊಂದಿಗೆ ಜಂತರ್ ಮಂತರ್ ನಲ್ಲಿ ತನ್ನ ಅನಿರ್ದಿಷ್ಟ ನಿರಶನವನ್ನು ಕೊನೆಗೊಳಿಸಿದ ಮೂರು ದಿನಗಳ ಬಳಿಕ ಅಣ್ಣಾ ತಂಡದ ವಿಸರ್ಜನೆಯಾಗಿದೆ.<br /> <br /> ತಂಡದ ವಿಸರ್ಜನೆ ಕುರಿತು ಅಣ್ಣಾ ಹಜಾರೆ ಅವರು ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿದ್ದಾರೆ. ತತ್ ಕ್ಷಣವೇ ಪಕ್ಷ ರಚನೆ ವಿಚಾರವನ್ನು ಘೋಷಿಸಲಾಗುವುದೇ ಎಂಬುದನ್ನು ಬ್ಲಾಗ್ ನಲ್ಲಿ ಸ್ಪಷ್ಟ ಪಡಿಸದೇ ಇದ್ದರೂ ರಾಜಕೀಯ ಪರ್ಯಾಯ ರಚನೆಯ ವಿಧಿವಿಧಾನಗಳ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ.<br /> <br /> ~ಸರ್ಕಾರವು ಲೋಕಪಾಲ ಮಸೂದೆ ಜಾರಿಗೊಳಿಸಲು ಸಿದ್ಧವಿಲ್ಲ. ಎಷ್ಟು ಕಾಲ ಮತ್ತು ಎಷ್ಟು ಸಲು ನಾವು ನಿರಶನ ಮಾಡಬೇಕು? ಈಗ ಜನ ನಮ್ಮನ್ನು ನಿರಶನ ಬಿಡಿ, ಪರ್ಯಾಯ ನೀಡಿ ಎಂದು ಹೇಳಿದ್ದಾರೆ. ಸರ್ಕಾರವು ಭ್ರಷ್ಟಾಚಾರವನ್ನು ಹತ್ತಿಕ್ಕಲು ಹೋಗುವುದಿಲ್ಲ ಎಂದು ನನಗೂ ಮನವರಿಕೆಯಾಗಿದೆ...~<br /> <br /> ~ಈಗ ನಾವು ಈದಿನದಿಂದ ಅಣ್ಣಾ ತಂಡ ಅಥವಾ ಅಣ್ಣಾ ಪ್ರಮುಖ ಸಮಿತಿಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತಿದ್ದೇವೆ.~ ಎಂದು ಹಜಾರೆ ಹೇಳಿದ್ದಾರೆ.<br /> <br /> ಕಳೆದ ವರ್ಷ ಏಪ್ರಿಲ್ ತಿಂಗಳಿನಿಂದ ಅಣ್ಣಾ ತಂಡ ಬೀದಿಗಿಳಿದಿತ್ತು. ಅಣ್ಣಾ ಹಜಾರೆ ಅವರು ನಾಲ್ಕು ಸಲು ಅನಿರ್ದಿಷ್ಟ ನಿರಶನ ನಡೆಸಿದ್ದರು. ನಾಲ್ಕು ಸಲ ಒಂದು ದಿನದ ಉಪವಾಸ ಮಾಡಿದ್ದರು. ಲೋಕಪಾಲ ಮಸೂದೆ ರಚನಾ ಸಮಿತಿಯಲ್ಲೂ ತಂಡ ಪಾಲ್ಗೊಂಡಿತ್ತು.<br /> <br /> ಚುನಾವಣಾ ರಾಜಕೀಯಕ್ಕೆ ಇಳಿಯುವ ಅಣ್ಣಾ ತಂಡದ ನಿರ್ಧಾರಕ್ಕೆ ಈ ಹಿಂದೆ ಪ್ರಮುಖರ ಸಮಿತಿಯ ಸದಸ್ಯರಾದ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಮೇಧಾ ಪಾಟ್ಕರ್, ಚಂದ್ರ ಮೋಹನ್ ಮತ್ತು ಅಖಿಲ್ ಗೊಗೋಯಿ ಮತ್ತಿತರರಿಂದ ವಿರೋಧ ಎದುರಾಗಿತ್ತು.<br /> <br /> ~ಉತ್ತಮ ವ್ಯಕ್ತಿಗಳನ್ನು ಸಂಸತ್ತಿಗೆ ಕಳುಹಿಸುವ ಪರ್ಯಾಯವನ್ನು ನಾನು ನೀಡಿದ್ದೇನೆ. ಆದರೆ ನಾನು ಯಾವುದೇ ಪಕ್ಷದ ಭಾಗಿಯಾಗುವುದಿಲ್ಲ. ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಜನಲೋಕಪಾಲ ಮಸೂದೆ ಜಾರಿಯ ಬಳಿಕ ನಾನು ಮಹಾರಾಷ್ಟ್ರಕ್ಕೆ ಹಿಂದಿರುಗಿ ನನ್ನ ಚಟುವಟಿಕೆಗಳಲ್ಲಿ ಮಗ್ನನಾಗುತ್ತೇನೆ~ ಎಂದು ಹಜಾರೆ ಹೇಳಿದ್ದಾರೆ.<br /> <br /> ~ಪಕ್ಷ ರಚಿಸುವವರಿಗೆ ನಾನು ಇದನ್ನು ಹೇಳಿದ್ದೇನೆ. ಪಕ್ಷ ರಚನೆಯ ಬಳಿಕವೂ ಈ ಚಳವಳಿ ಮುಂದುವರಿಯುತ್ತದೆ. ಈ ಚಳವಳಿಯ ಮೂಲಕ ನಾವು ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿದ್ದೆವು. ಈಗ ಚಳವಳಿಯನ್ನು ಜೀವಂತವಾಗಿ ಇಟ್ಟುಕೊಂಡೇ ಒಳ್ಳೆಯ ವ್ಯಕ್ತಿಗಳನ್ನು ನಾವು ಸಂಸತ್ತಿಗೆ ಕಳುಹಿಸುತ್ತೇವೆ. ಮತ್ತು ಜನರ ನೆರವಿನೊಂದಿಗೆ ಲೋಕಾಯುಕ್ತ ಮಸೂದೆ ಜಾರಿಯ ಖಚಿತತೆ ನೀಡುತ್ತೇವೆ~ ಎಂದು ಹಜಾರೆ ವಿವರಿಸಿದ್ದಾರೆ.<br /> <br /> ~ಅಧಿಕಾರ ಅಥವಾ ಹಣದ ಅಮಲಿಗೆ ಬಲಿಯಾಗಬಾರದು ಎಂಬುದಾಗಿ ನನ್ನ ಸಹೋದ್ಯೋಗಿಗಳಿಗೆ ನಾನು ಹೇಳಿದ್ದೇನೆ. ಸಂಸತ್ತಿಗೆ ಚುನಾಯಿತರಾಗಿ ಹೋದರೆ ಅದು ಜನರು ಮತ್ತು ರಾಷ್ಟ್ರದ ಸೇವೆಗೆ ಲಭಿಸಿದ ಅವಕಾಶ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡೇ ಕೆಲಸ ಮಾಡಬೇಕು~ ಎಂದು ಅಣ್ಣಾ ಹೇಳಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ರಾಜಕೀಯ ಪಕ್ಷ ರಚನೆಗೆ ದಾರಿ ಮಾಡಿಕೊಡುವ ಸಲುವಾಗಿ ಅಣ್ಣಾ ತಂಡವು ಸೋಮವಾರ ತನ್ನನ್ನು ಸ್ವಯಂ ವಿಸರ್ಜನೆ ಮಾಡಿಕೊಂಡಿದೆ. ಮತ್ತು ಇನ್ನುಮುಂದೆ ಲೋಕಪಾಲ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಜೊತೆಗೆ ಯಾವುದೇ ಮಾತುಕತೆ ನಡೆಸದೇ ಇರಲು ತೀರ್ಮಾನಿಸಿದೆ.<br /> <br /> 2014ರ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಪರ್ಯಾಯ ರಚನೆಯ ಯೋಜನೆಯೊಂದಿಗೆ ಜಂತರ್ ಮಂತರ್ ನಲ್ಲಿ ತನ್ನ ಅನಿರ್ದಿಷ್ಟ ನಿರಶನವನ್ನು ಕೊನೆಗೊಳಿಸಿದ ಮೂರು ದಿನಗಳ ಬಳಿಕ ಅಣ್ಣಾ ತಂಡದ ವಿಸರ್ಜನೆಯಾಗಿದೆ.<br /> <br /> ತಂಡದ ವಿಸರ್ಜನೆ ಕುರಿತು ಅಣ್ಣಾ ಹಜಾರೆ ಅವರು ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿದ್ದಾರೆ. ತತ್ ಕ್ಷಣವೇ ಪಕ್ಷ ರಚನೆ ವಿಚಾರವನ್ನು ಘೋಷಿಸಲಾಗುವುದೇ ಎಂಬುದನ್ನು ಬ್ಲಾಗ್ ನಲ್ಲಿ ಸ್ಪಷ್ಟ ಪಡಿಸದೇ ಇದ್ದರೂ ರಾಜಕೀಯ ಪರ್ಯಾಯ ರಚನೆಯ ವಿಧಿವಿಧಾನಗಳ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ.<br /> <br /> ~ಸರ್ಕಾರವು ಲೋಕಪಾಲ ಮಸೂದೆ ಜಾರಿಗೊಳಿಸಲು ಸಿದ್ಧವಿಲ್ಲ. ಎಷ್ಟು ಕಾಲ ಮತ್ತು ಎಷ್ಟು ಸಲು ನಾವು ನಿರಶನ ಮಾಡಬೇಕು? ಈಗ ಜನ ನಮ್ಮನ್ನು ನಿರಶನ ಬಿಡಿ, ಪರ್ಯಾಯ ನೀಡಿ ಎಂದು ಹೇಳಿದ್ದಾರೆ. ಸರ್ಕಾರವು ಭ್ರಷ್ಟಾಚಾರವನ್ನು ಹತ್ತಿಕ್ಕಲು ಹೋಗುವುದಿಲ್ಲ ಎಂದು ನನಗೂ ಮನವರಿಕೆಯಾಗಿದೆ...~<br /> <br /> ~ಈಗ ನಾವು ಈದಿನದಿಂದ ಅಣ್ಣಾ ತಂಡ ಅಥವಾ ಅಣ್ಣಾ ಪ್ರಮುಖ ಸಮಿತಿಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತಿದ್ದೇವೆ.~ ಎಂದು ಹಜಾರೆ ಹೇಳಿದ್ದಾರೆ.<br /> <br /> ಕಳೆದ ವರ್ಷ ಏಪ್ರಿಲ್ ತಿಂಗಳಿನಿಂದ ಅಣ್ಣಾ ತಂಡ ಬೀದಿಗಿಳಿದಿತ್ತು. ಅಣ್ಣಾ ಹಜಾರೆ ಅವರು ನಾಲ್ಕು ಸಲು ಅನಿರ್ದಿಷ್ಟ ನಿರಶನ ನಡೆಸಿದ್ದರು. ನಾಲ್ಕು ಸಲ ಒಂದು ದಿನದ ಉಪವಾಸ ಮಾಡಿದ್ದರು. ಲೋಕಪಾಲ ಮಸೂದೆ ರಚನಾ ಸಮಿತಿಯಲ್ಲೂ ತಂಡ ಪಾಲ್ಗೊಂಡಿತ್ತು.<br /> <br /> ಚುನಾವಣಾ ರಾಜಕೀಯಕ್ಕೆ ಇಳಿಯುವ ಅಣ್ಣಾ ತಂಡದ ನಿರ್ಧಾರಕ್ಕೆ ಈ ಹಿಂದೆ ಪ್ರಮುಖರ ಸಮಿತಿಯ ಸದಸ್ಯರಾದ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಮೇಧಾ ಪಾಟ್ಕರ್, ಚಂದ್ರ ಮೋಹನ್ ಮತ್ತು ಅಖಿಲ್ ಗೊಗೋಯಿ ಮತ್ತಿತರರಿಂದ ವಿರೋಧ ಎದುರಾಗಿತ್ತು.<br /> <br /> ~ಉತ್ತಮ ವ್ಯಕ್ತಿಗಳನ್ನು ಸಂಸತ್ತಿಗೆ ಕಳುಹಿಸುವ ಪರ್ಯಾಯವನ್ನು ನಾನು ನೀಡಿದ್ದೇನೆ. ಆದರೆ ನಾನು ಯಾವುದೇ ಪಕ್ಷದ ಭಾಗಿಯಾಗುವುದಿಲ್ಲ. ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಜನಲೋಕಪಾಲ ಮಸೂದೆ ಜಾರಿಯ ಬಳಿಕ ನಾನು ಮಹಾರಾಷ್ಟ್ರಕ್ಕೆ ಹಿಂದಿರುಗಿ ನನ್ನ ಚಟುವಟಿಕೆಗಳಲ್ಲಿ ಮಗ್ನನಾಗುತ್ತೇನೆ~ ಎಂದು ಹಜಾರೆ ಹೇಳಿದ್ದಾರೆ.<br /> <br /> ~ಪಕ್ಷ ರಚಿಸುವವರಿಗೆ ನಾನು ಇದನ್ನು ಹೇಳಿದ್ದೇನೆ. ಪಕ್ಷ ರಚನೆಯ ಬಳಿಕವೂ ಈ ಚಳವಳಿ ಮುಂದುವರಿಯುತ್ತದೆ. ಈ ಚಳವಳಿಯ ಮೂಲಕ ನಾವು ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿದ್ದೆವು. ಈಗ ಚಳವಳಿಯನ್ನು ಜೀವಂತವಾಗಿ ಇಟ್ಟುಕೊಂಡೇ ಒಳ್ಳೆಯ ವ್ಯಕ್ತಿಗಳನ್ನು ನಾವು ಸಂಸತ್ತಿಗೆ ಕಳುಹಿಸುತ್ತೇವೆ. ಮತ್ತು ಜನರ ನೆರವಿನೊಂದಿಗೆ ಲೋಕಾಯುಕ್ತ ಮಸೂದೆ ಜಾರಿಯ ಖಚಿತತೆ ನೀಡುತ್ತೇವೆ~ ಎಂದು ಹಜಾರೆ ವಿವರಿಸಿದ್ದಾರೆ.<br /> <br /> ~ಅಧಿಕಾರ ಅಥವಾ ಹಣದ ಅಮಲಿಗೆ ಬಲಿಯಾಗಬಾರದು ಎಂಬುದಾಗಿ ನನ್ನ ಸಹೋದ್ಯೋಗಿಗಳಿಗೆ ನಾನು ಹೇಳಿದ್ದೇನೆ. ಸಂಸತ್ತಿಗೆ ಚುನಾಯಿತರಾಗಿ ಹೋದರೆ ಅದು ಜನರು ಮತ್ತು ರಾಷ್ಟ್ರದ ಸೇವೆಗೆ ಲಭಿಸಿದ ಅವಕಾಶ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡೇ ಕೆಲಸ ಮಾಡಬೇಕು~ ಎಂದು ಅಣ್ಣಾ ಹೇಳಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>