<p><strong>ನವದೆಹಲಿ (ಪಿಟಿಐ</strong>): `ಈಗ ನಾಯಕರು ಮತ್ತು ಸಾಮಾನ್ಯರ ನಡುವಿನ ಹೋರಾಟ ಆರಂಭವಾಗಿದೆ' ಎಂದು ಹೇಳುವ ಮೂಲಕ ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ತಮ್ಮ `ಆಮ್ ಆದ್ಮಿ' ರಾಜಕೀಯ ಪಕ್ಷವನ್ನು ಸೋಮವಾರ ವಿಧ್ಯುಕ್ತವಾಗಿ ಉದ್ಘಾಟಿಸಿದರು.<br /> <br /> ರಾಜಧಾನಿಯ ಸಂಸತ್ ವೃತ್ತದಲ್ಲಿ ನೆರೆದಿದ್ದ ಸಾವಿರಾರು ಬೆಂಬಲಿಗರ ಎದುರು ಹೊಸ ಪಕ್ಷ ಉದ್ಘಾಟಿಸಿ ಮಾತನಾಡಿದ ಅವರು, `ತಮ್ಮ ಈ ನೂತನ ಪಕ್ಷ ಭ್ರಷ್ಟಾಚಾರ ವಿರುದ್ಧದ ಹೋರಾಟದ ಫಲಿತಾಂಶವಾಗಿದೆ' ಎಂದು ಹೇಳಿದರು.<br /> <br /> ರಾಜಕೀಯ ಅನುಭವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, `ಇಂದಿನ ರಾಜಕಾರಣಿಗಳಂತೆ ನನಗೆ ಭ್ರಷ್ಟಾಚಾರ ಮತ್ತು ಅಪರಾಧ ದಾಖಲೆಗಳ ಬಗ್ಗೆ ಅನುಭವವಿಲ್ಲ. ಅಲ್ಲದೆ, ಅಂತಹ ಅನುಭವವನ್ನು ಬಯಸುವುದೂ ಇಲ್ಲ' ಎಂದು ವ್ಯಂಗ್ಯವಾಗಿ ಉತ್ತರಿಸಿದರು.<br /> ಹೊಸ ಪಕ್ಷ ಉದ್ಘಾಟನೆಗೂ ಮುನ್ನ ಕೇಜ್ರಿವಾಲ್ ಮತ್ತು ಸಂಗಡಿಗರು ರಾಜ್ಘಾಟ್ ಮತ್ತು ಅಂಬೇಡ್ಕರ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.<br /> <br /> 1949ರ ನವೆಂಬರ್ 26ರಂದು ದೇಶ ಸಂವಿಧಾನವನ್ನು ಅಂಗೀಕರಿಸಿದ ದಿನವನ್ನೇ, ಇಂದು ಕೇಜ್ರಿವಾಲ್ ತಮ್ಮ ಪಕ್ಷದ ಅಧಿಕೃತ ಉದ್ಘಾಟನೆಗೆ ಆರಿಸಿಕೊಂಡಿರುವುದು ವಿಶೇಷವಾಗಿತ್ತು. ಇದೇ ವೇಳೆ ಕೇಜ್ರಿವಾಲ್ ಮತ್ತು ಅವರ ಸಂಗಡಿಗರು 26/11 ದಾಳಿಯಲ್ಲಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಹೋರಾಡಿ ಮಡಿದ ಎನ್ಎಸ್ಜಿ ಕಮಾಂಡೊಗಳಿಗೆ ಗೌರವ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ</strong>): `ಈಗ ನಾಯಕರು ಮತ್ತು ಸಾಮಾನ್ಯರ ನಡುವಿನ ಹೋರಾಟ ಆರಂಭವಾಗಿದೆ' ಎಂದು ಹೇಳುವ ಮೂಲಕ ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ತಮ್ಮ `ಆಮ್ ಆದ್ಮಿ' ರಾಜಕೀಯ ಪಕ್ಷವನ್ನು ಸೋಮವಾರ ವಿಧ್ಯುಕ್ತವಾಗಿ ಉದ್ಘಾಟಿಸಿದರು.<br /> <br /> ರಾಜಧಾನಿಯ ಸಂಸತ್ ವೃತ್ತದಲ್ಲಿ ನೆರೆದಿದ್ದ ಸಾವಿರಾರು ಬೆಂಬಲಿಗರ ಎದುರು ಹೊಸ ಪಕ್ಷ ಉದ್ಘಾಟಿಸಿ ಮಾತನಾಡಿದ ಅವರು, `ತಮ್ಮ ಈ ನೂತನ ಪಕ್ಷ ಭ್ರಷ್ಟಾಚಾರ ವಿರುದ್ಧದ ಹೋರಾಟದ ಫಲಿತಾಂಶವಾಗಿದೆ' ಎಂದು ಹೇಳಿದರು.<br /> <br /> ರಾಜಕೀಯ ಅನುಭವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, `ಇಂದಿನ ರಾಜಕಾರಣಿಗಳಂತೆ ನನಗೆ ಭ್ರಷ್ಟಾಚಾರ ಮತ್ತು ಅಪರಾಧ ದಾಖಲೆಗಳ ಬಗ್ಗೆ ಅನುಭವವಿಲ್ಲ. ಅಲ್ಲದೆ, ಅಂತಹ ಅನುಭವವನ್ನು ಬಯಸುವುದೂ ಇಲ್ಲ' ಎಂದು ವ್ಯಂಗ್ಯವಾಗಿ ಉತ್ತರಿಸಿದರು.<br /> ಹೊಸ ಪಕ್ಷ ಉದ್ಘಾಟನೆಗೂ ಮುನ್ನ ಕೇಜ್ರಿವಾಲ್ ಮತ್ತು ಸಂಗಡಿಗರು ರಾಜ್ಘಾಟ್ ಮತ್ತು ಅಂಬೇಡ್ಕರ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.<br /> <br /> 1949ರ ನವೆಂಬರ್ 26ರಂದು ದೇಶ ಸಂವಿಧಾನವನ್ನು ಅಂಗೀಕರಿಸಿದ ದಿನವನ್ನೇ, ಇಂದು ಕೇಜ್ರಿವಾಲ್ ತಮ್ಮ ಪಕ್ಷದ ಅಧಿಕೃತ ಉದ್ಘಾಟನೆಗೆ ಆರಿಸಿಕೊಂಡಿರುವುದು ವಿಶೇಷವಾಗಿತ್ತು. ಇದೇ ವೇಳೆ ಕೇಜ್ರಿವಾಲ್ ಮತ್ತು ಅವರ ಸಂಗಡಿಗರು 26/11 ದಾಳಿಯಲ್ಲಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಹೋರಾಡಿ ಮಡಿದ ಎನ್ಎಸ್ಜಿ ಕಮಾಂಡೊಗಳಿಗೆ ಗೌರವ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>