<p>ನವದೆಹಲಿ (ಪಿಟಿಐ): ಹಲವು ಯೋಜನೆಗಳನ್ನು ತಡೆಹಿಡಿದ ದೂರುಗಳ ಹಿನ್ನೆಲೆಯಲ್ಲಿ ಪರಿಸರ ಸಚಿವ ಸ್ಥಾನಕ್ಕೆ ತಾವು ರಾಜೀನಾಮೆ ನೀಡಿರುವ ವದಂತಿಯನ್ನು ಕಾಂಗ್ರೆಸ್ ರಾಜ್ಯಸಭಾ ಸದಸ್ಯೆ ಜಯಂತಿ ನಟರಾಜನ್ ತಳ್ಳಿಹಾಕಿದ್ದಾರೆ.<br /> <br /> ಶನಿವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಗ್ಗೆ ಭಾನುವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ತಾವು ಯಾವುದೇ ಯೋಜನೆ ತಡೆಹಿಡಿದಿಲ್ಲ’ ಎಂದು ಸ್ಪಷ್ಟಪಡಿಸಿದರು.<br /> <br /> ಬರುವ ಲೋಕಸಭಾ ಚುನಾವಣೆಗೆ ಪಕ್ಷದ ಪರ ಕೆಲಸ ಮಾಡಲು ತಾವು ಸ್ವಇಚ್ಛೆಯಿಂದಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಂಗೀಕರಿಸಲು ಪ್ರಧಾನಿಗೆ ಕೋರಿದ್ದಾಗಿ ಅವರು ತಿಳಿಸಿದರು.<br /> <br /> ತಮ್ಮ ಕಾರ್ಯನಿರ್ವಹಣೆ ಕುರಿತು ಪ್ರಧಾನಿಯೇ ಪ್ರಶಂಸೆ ಮಾಡಿದ್ದಾರೆ ಎಂದ ಅವರು, ‘ಉತ್ತರಾಖಂಡದಂತಹ ದುರಂತವನ್ನು ತಪ್ಪಿಸಲು ಇನ್ನು ಮುಂದೆ ಅಭಿವೃದ್ಧಿ ಯೋಜನೆಗಳಿಗೆ ಅನುಮತಿ ನೀಡುವಾಗ, ಪರಿಸರ ಸಂರಕ್ಷಣೆಯನ್ನೂ ಗಮನದಲ್ಲಿಟ್ಟು ಎಚ್ಚರಿಕೆಯ ಹೆಜ್ಜೆ ಇಡಬೇಕು’ ಎಂದು ಹೇಳಿದರು.<br /> <br /> ಸಚಿವರ ಅಚ್ಚರಿಯ ರಾಜೀನಾಮೆಗೆ ಪಕ್ಷದ ಕೆಲಸ ಕಾರಣವೇ ಅಥವಾ ಅವರ ಸಚಿವಾಲಯ ವಿವಿಧ ಯೋಜನೆಗಳಿಗೆ ಪರಿಸರ ಪ್ರಮಾಣಪತ್ರ ನೀಡದೆ ತಡೆಯೊಡ್ಡಿದ್ದರ ವಿರುದ್ಧ ಉದ್ಯಮ ವಲಯ ದೂರು ನೀಡಿರುವುದು ಕಾರಣವೇ ಎಂಬ ಪ್ರಶ್ನೆ ಎದ್ದಿದೆ.<br /> <br /> ಈ ವದಂತಿಗೆ ಪೂರಕ ಎಂಬಂತೆ, ಎಫ್ಐಸಿಸಿ ಸಭೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಉದ್ಯಮಿಗಳು ದೂರು ನೀಡಿದ್ದಾರೆ. ರಾಹುಲ್ ಸಹ ಯಾವುದೇ ನಿರ್ಧಾರ ಕೈಗೊಳ್ಳಬಹುದಾದ ಪರಿಸರ ಸಚಿವರು ಅಥವಾ ಮುಖ್ಯಮಂತ್ರಿಗಳು ನಿರಂಕುಶ ಆಡಳಿತದ ಮೂಲಕ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯಾಗಿರುವುದನ್ನು ಟೀಕಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಹಲವು ಯೋಜನೆಗಳನ್ನು ತಡೆಹಿಡಿದ ದೂರುಗಳ ಹಿನ್ನೆಲೆಯಲ್ಲಿ ಪರಿಸರ ಸಚಿವ ಸ್ಥಾನಕ್ಕೆ ತಾವು ರಾಜೀನಾಮೆ ನೀಡಿರುವ ವದಂತಿಯನ್ನು ಕಾಂಗ್ರೆಸ್ ರಾಜ್ಯಸಭಾ ಸದಸ್ಯೆ ಜಯಂತಿ ನಟರಾಜನ್ ತಳ್ಳಿಹಾಕಿದ್ದಾರೆ.<br /> <br /> ಶನಿವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಗ್ಗೆ ಭಾನುವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ತಾವು ಯಾವುದೇ ಯೋಜನೆ ತಡೆಹಿಡಿದಿಲ್ಲ’ ಎಂದು ಸ್ಪಷ್ಟಪಡಿಸಿದರು.<br /> <br /> ಬರುವ ಲೋಕಸಭಾ ಚುನಾವಣೆಗೆ ಪಕ್ಷದ ಪರ ಕೆಲಸ ಮಾಡಲು ತಾವು ಸ್ವಇಚ್ಛೆಯಿಂದಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಂಗೀಕರಿಸಲು ಪ್ರಧಾನಿಗೆ ಕೋರಿದ್ದಾಗಿ ಅವರು ತಿಳಿಸಿದರು.<br /> <br /> ತಮ್ಮ ಕಾರ್ಯನಿರ್ವಹಣೆ ಕುರಿತು ಪ್ರಧಾನಿಯೇ ಪ್ರಶಂಸೆ ಮಾಡಿದ್ದಾರೆ ಎಂದ ಅವರು, ‘ಉತ್ತರಾಖಂಡದಂತಹ ದುರಂತವನ್ನು ತಪ್ಪಿಸಲು ಇನ್ನು ಮುಂದೆ ಅಭಿವೃದ್ಧಿ ಯೋಜನೆಗಳಿಗೆ ಅನುಮತಿ ನೀಡುವಾಗ, ಪರಿಸರ ಸಂರಕ್ಷಣೆಯನ್ನೂ ಗಮನದಲ್ಲಿಟ್ಟು ಎಚ್ಚರಿಕೆಯ ಹೆಜ್ಜೆ ಇಡಬೇಕು’ ಎಂದು ಹೇಳಿದರು.<br /> <br /> ಸಚಿವರ ಅಚ್ಚರಿಯ ರಾಜೀನಾಮೆಗೆ ಪಕ್ಷದ ಕೆಲಸ ಕಾರಣವೇ ಅಥವಾ ಅವರ ಸಚಿವಾಲಯ ವಿವಿಧ ಯೋಜನೆಗಳಿಗೆ ಪರಿಸರ ಪ್ರಮಾಣಪತ್ರ ನೀಡದೆ ತಡೆಯೊಡ್ಡಿದ್ದರ ವಿರುದ್ಧ ಉದ್ಯಮ ವಲಯ ದೂರು ನೀಡಿರುವುದು ಕಾರಣವೇ ಎಂಬ ಪ್ರಶ್ನೆ ಎದ್ದಿದೆ.<br /> <br /> ಈ ವದಂತಿಗೆ ಪೂರಕ ಎಂಬಂತೆ, ಎಫ್ಐಸಿಸಿ ಸಭೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಉದ್ಯಮಿಗಳು ದೂರು ನೀಡಿದ್ದಾರೆ. ರಾಹುಲ್ ಸಹ ಯಾವುದೇ ನಿರ್ಧಾರ ಕೈಗೊಳ್ಳಬಹುದಾದ ಪರಿಸರ ಸಚಿವರು ಅಥವಾ ಮುಖ್ಯಮಂತ್ರಿಗಳು ನಿರಂಕುಶ ಆಡಳಿತದ ಮೂಲಕ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯಾಗಿರುವುದನ್ನು ಟೀಕಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>