<p><strong>ನವದೆಹಲಿ: </strong>ಕರ್ನಾಟಕದಲ್ಲಿ `ಎ~ ದರ್ಜೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಪುನರ್ವಸತಿ ಯೋಜನಾ ಪ್ರಕ್ರಿಯೆ ಈ ತಿಂಗಳಾಂತ್ಯಕ್ಕೆ ಮುಗಿಯುವ ಸಾಧ್ಯತೆ ಇರುವುದರಿಂದ ಆಗಸ್ಟ್ ಆರಂಭದಲ್ಲಿ ಮತ್ತೆ ಗಣಿಗಾರಿಕೆ ಆರಂಭವಾಗುವ ಸುಳಿವನ್ನು ಭಾರತೀಯ ಖನಿಜ ಉದ್ಯಮಗಳ ಒಕ್ಕೂಟ (ಫಿಮಿ) ನೀಡಿದೆ. ಇದರಿಂದಾಗಿ ಸುಪ್ರೀಂಕೋರ್ಟ್ನಿಂದ ನಿಷೇಧಕ್ಕೆ ಒಳಗಾಗಿರುವ ಗಣಿಗಾರಿಕೆ ಉದ್ಯಮಕ್ಕೆ ಮತ್ತೆ ಜೀವ ಬರುವಂತಾಗಿದೆ.<br /> <br /> ಗಣಿಗಾರಿಕೆ ಉದ್ಯಮಕ್ಕೆ ಪುನರ್ವಸತಿ ಕಲ್ಪಿಸುವಲ್ಲಿ ಭಾರತೀಯ ಅರಣ್ಯ ಸಂಶೋಧನೆ ಹಾಗೂ ಶಿಕ್ಷಣ ಮಂಡಳಿಗೆ (ಐಸಿಎಫ್ಆರ್ಇ) ಅಗತ್ಯ ನೆರವು ನೀಡುತ್ತಿದ್ದು, ಈಗ ಆಗಿರುವ ಪ್ರಗತಿ ಆಧಾರದ ಮೇಲೆ ರಾಜ್ಯದ 14ರಿಂದ 15 ಗಣಿಗಳ ಪುನರಾರಂಭಕ್ಕೆ ಅನುಮತಿ ಸಿಗಬಹುದು ಎಂದು `ಫಿಮಿ~ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಆರ್.ಕೆ. ಬನ್ಸಾಲ್ ಸುದ್ದಿಗಾರರಿಗೆ ತಿಳಿಸಿದರು. <br /> <br /> ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಪ್ರತಿವರ್ಷ 4ರಿಂದ 5 ದಶಲಕ್ಷ ಟನ್ ಕಬ್ಬಿಣದ ಅದಿರು ಉತ್ಪಾದನೆ ಸಾಧ್ಯವಾಗಲಿದೆ. <br /> <br /> ಗಣಿಗಾರಿಕೆ ಆರಂಭವಾದಲ್ಲಿ ಈಗಾಗಲೇ ಕಚ್ಚಾ ಮಾಲಿನ ಕೊರತೆಯಿಂದ ನರಳುತ್ತಿರುವ ಸ್ಥಳೀಯ ಉಕ್ಕು ಉತ್ಪಾದನಾ ಘಟಕಗಳಿಗೆ ಸಾಕಷ್ಟು ನೆರವಾಗಲಿದೆ ಎಂದು ಬನ್ಸಾಲ್ ವಿಶ್ವಾಸ ವ್ಯಕ್ತಪಡಿಸಿದರು.<br /> <br /> ಈಗಾಗಲೆ ತಮ್ಮ ಸಂಸ್ಥೆ 26 ಗಣಿ ಉದ್ಯಮಗಳ ಪುನರ್ವಸತಿ ಯೋಜನೆಯನ್ನು ಐಸಿಎಫ್ಆರ್ಇಗೆ ಸಲ್ಲಿಸಿದ್ದು ಈ ಪೈಕಿ 9ರಿಂದ 10 ಉದ್ಯಮಗಳ ಪುನರಾರಂಭಕ್ಕೆ ಅಂತಿಮ ಅನುಮತಿ ಕೋರಿದ ಪ್ರಸ್ತಾವನೆಯನ್ನು ಅದು ಕೇಂದ್ರ ಉನ್ನತಾಧಿಕಾರ ಸಮಿತಿಗೆ (ಸಿಇಸಿ)ಗೆ ಸಲ್ಲಿಸಿದೆ ಎಂದೂ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕರ್ನಾಟಕದಲ್ಲಿ `ಎ~ ದರ್ಜೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಪುನರ್ವಸತಿ ಯೋಜನಾ ಪ್ರಕ್ರಿಯೆ ಈ ತಿಂಗಳಾಂತ್ಯಕ್ಕೆ ಮುಗಿಯುವ ಸಾಧ್ಯತೆ ಇರುವುದರಿಂದ ಆಗಸ್ಟ್ ಆರಂಭದಲ್ಲಿ ಮತ್ತೆ ಗಣಿಗಾರಿಕೆ ಆರಂಭವಾಗುವ ಸುಳಿವನ್ನು ಭಾರತೀಯ ಖನಿಜ ಉದ್ಯಮಗಳ ಒಕ್ಕೂಟ (ಫಿಮಿ) ನೀಡಿದೆ. ಇದರಿಂದಾಗಿ ಸುಪ್ರೀಂಕೋರ್ಟ್ನಿಂದ ನಿಷೇಧಕ್ಕೆ ಒಳಗಾಗಿರುವ ಗಣಿಗಾರಿಕೆ ಉದ್ಯಮಕ್ಕೆ ಮತ್ತೆ ಜೀವ ಬರುವಂತಾಗಿದೆ.<br /> <br /> ಗಣಿಗಾರಿಕೆ ಉದ್ಯಮಕ್ಕೆ ಪುನರ್ವಸತಿ ಕಲ್ಪಿಸುವಲ್ಲಿ ಭಾರತೀಯ ಅರಣ್ಯ ಸಂಶೋಧನೆ ಹಾಗೂ ಶಿಕ್ಷಣ ಮಂಡಳಿಗೆ (ಐಸಿಎಫ್ಆರ್ಇ) ಅಗತ್ಯ ನೆರವು ನೀಡುತ್ತಿದ್ದು, ಈಗ ಆಗಿರುವ ಪ್ರಗತಿ ಆಧಾರದ ಮೇಲೆ ರಾಜ್ಯದ 14ರಿಂದ 15 ಗಣಿಗಳ ಪುನರಾರಂಭಕ್ಕೆ ಅನುಮತಿ ಸಿಗಬಹುದು ಎಂದು `ಫಿಮಿ~ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಆರ್.ಕೆ. ಬನ್ಸಾಲ್ ಸುದ್ದಿಗಾರರಿಗೆ ತಿಳಿಸಿದರು. <br /> <br /> ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಪ್ರತಿವರ್ಷ 4ರಿಂದ 5 ದಶಲಕ್ಷ ಟನ್ ಕಬ್ಬಿಣದ ಅದಿರು ಉತ್ಪಾದನೆ ಸಾಧ್ಯವಾಗಲಿದೆ. <br /> <br /> ಗಣಿಗಾರಿಕೆ ಆರಂಭವಾದಲ್ಲಿ ಈಗಾಗಲೇ ಕಚ್ಚಾ ಮಾಲಿನ ಕೊರತೆಯಿಂದ ನರಳುತ್ತಿರುವ ಸ್ಥಳೀಯ ಉಕ್ಕು ಉತ್ಪಾದನಾ ಘಟಕಗಳಿಗೆ ಸಾಕಷ್ಟು ನೆರವಾಗಲಿದೆ ಎಂದು ಬನ್ಸಾಲ್ ವಿಶ್ವಾಸ ವ್ಯಕ್ತಪಡಿಸಿದರು.<br /> <br /> ಈಗಾಗಲೆ ತಮ್ಮ ಸಂಸ್ಥೆ 26 ಗಣಿ ಉದ್ಯಮಗಳ ಪುನರ್ವಸತಿ ಯೋಜನೆಯನ್ನು ಐಸಿಎಫ್ಆರ್ಇಗೆ ಸಲ್ಲಿಸಿದ್ದು ಈ ಪೈಕಿ 9ರಿಂದ 10 ಉದ್ಯಮಗಳ ಪುನರಾರಂಭಕ್ಕೆ ಅಂತಿಮ ಅನುಮತಿ ಕೋರಿದ ಪ್ರಸ್ತಾವನೆಯನ್ನು ಅದು ಕೇಂದ್ರ ಉನ್ನತಾಧಿಕಾರ ಸಮಿತಿಗೆ (ಸಿಇಸಿ)ಗೆ ಸಲ್ಲಿಸಿದೆ ಎಂದೂ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>