<p><strong>ಅಹಮದಾಬಾದ್ (ಐಎಎನ್ಎಸ್/ಪಿಟಿಐ):</strong> ಹತ್ತು ವರ್ಷಗಳ ಹಿಂದೆ ಗುಜರಾತ್ನಲ್ಲಿ ನಡೆದಿದ್ದ ಕೋಮುಗಲಭೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಸುಪ್ರೀಂಕೋರ್ಟ್ನಿಂದ ನೇಮಕಗೊಂಡಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಗುಲ್ಬರ್ಗಾ ಸೊಸೈಟಿ ಹತ್ಯಾಕಾಂಡ ಪ್ರಕರಣದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ದೋಷಮುಕ್ತಗೊಳಿಸಿ ವರದಿ ನೀಡಿದೆ. <br /> <br /> ಈ ಪ್ರಕರಣಕ್ಕೆ ಸಂಬಂಧಿಸಿ ಮೋದಿ ಹಾಗೂ ಇತರ 57 ಜನರ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಗಳು ಲಭ್ಯವಾಗಿಲ್ಲ ಎಂದು `ಎಸ್ಐಟಿ~ ಅಹಮದಾಬಾದ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಫೆಬ್ರುವರಿ 28ರಂದು `ಪರಿಸಮಾಪ್ತಿ ವರದಿ~ ಸಲ್ಲಿಸಿತ್ತು. ಈ ವರದಿ ಆಧರಿಸಿ ಆದೇಶ ನೀಡಿರುವ ನ್ಯಾಯಾಧೀಶ ಎಂ. ಎಸ್. ಭಟ್, ತನಿಖಾಧಿಕಾರಿಗಳಿಗೆ ಮೋದಿ ಸೇರಿದಂತೆ ಯಾವ ಆರೋಪಿಗಳ ವಿರುದ್ಧವೂ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಹೇಳಿದರು.<br /> <br /> ಹಾಗೆಂದು `ಎಸ್ಐಟಿ~ ಸಲ್ಲಿಸಿರುವ `ಪರಿಸಮಾಪ್ತಿ ವರದಿ~ಯನ್ನು ಕೋರ್ಟ್ ಸ್ವೀಕರಿಸಲಿದೆಯೇ ಇಲ್ಲವೇ ಎಂಬುದನ್ನು ನ್ಯಾಯಾಧೀಶರು ಮಂಗಳವಾರದ ವಿಚಾರಣೆಯ ಸಂದರ್ಭದಲ್ಲಿ ಹೇಳಲಿಲ್ಲ. ಸುಪ್ರೀಂಕೋರ್ಟ್ ಆದೇಶದನ್ವಯ, ಸಾಮಾಜಿಕ ನ್ಯಾಯದ ತತ್ವದ ಆಧಾರದಲ್ಲಿ ತನಿಖಾ ವರದಿಯನ್ನು ದೂರುದಾರರಾದ ಜಕಿಯಾ ಜಾಫ್ರಿ ಅವರಿಗೆ 30 ದಿನಗಳೊಳಗಾಗಿ ನೀಡುವಂತೆ `ಎಸ್ಐಟಿ~ಗೆ ಸೂಚಿಸಿದರು.<br /> <br /> ತನಿಖಾ ವರದಿ, ಸಾಕ್ಷ್ಯಗಳ ಹೇಳಿಕೆ, ಸಂಬಂಧಿಸಿದ ದಾಖಲೆಗಳನ್ನು ಜಕಿಯಾ ಅವರಿಗೆ ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿತು. ಜಕಿಯಾ ಅವರ ವಾದವನ್ನು ಆಲಿಸಿದ ನಂತರ `ಪರಿಸಮಾಪ್ತಿ ವರದಿ~ ಸ್ವೀಕರಿಸಬೇಕೇ ಇಲ್ಲವೇ ಎಂಬುದನ್ನು ಕೋರ್ಟ್ ನಿರ್ಧರಿಸಲಿದೆ.<br /> <br /> <strong>ಹಿನ್ನೆಲೆ:</strong> ಗೋಧ್ರಾ ರೈಲು ನಿಲ್ದಾಣದಲ್ಲಿ ಕರಸೇವಕರು ಬೆಂಕಿಗೆ ಆಹುತಿಯಾದ ಘಟನೆಗೆ ಪ್ರತೀಕಾರವಾಗಿ 2002ರ ಫೆಬ್ರುವರಿ-ಮಾರ್ಚ್ನಲ್ಲಿ ಇಡೀ ಗುಜರಾತ್ ಕೋಮುಗಲಭೆಯಲ್ಲಿ ಹೊತ್ತಿ ಉರಿದಿತ್ತು. 2002ರ ಫೆಬ್ರುವರಿ 28ರಂದು ಉದ್ರಿಕ್ತ ಗುಂಪೊಂದು ಅಹಮದಾಬಾದ್ನ ಗುಲ್ಬರ್ಗಾ ಹೌಸಿಂಗ್ ಸೊಸೈಟಿಯಲ್ಲಿ ಕಾಂಗ್ರೆಸ್ನ ಮಾಜಿ ಸಂಸದ ಎಹಸಾನ್ ಜಾಫ್ರಿ ಸೇರಿ 69 ಜನರನ್ನು ಜೀವಂತವಾಗಿ ದಹಿಸಿತ್ತು.<br /> <br /> ಎಹಸಾನ್ ಜಾಫ್ರಿ ಅವರ ಪತ್ನಿ ಜಕಿಯಾ ಜಾಫ್ರಿ ಈ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿ ಹಾಗೂ ಗುಜರಾತ್ ಸರ್ಕಾರದ ಹಿರಿಯ ಅಧಿಕಾರಿಗಳ ಕೈವಾಡವಿದೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು.<br /> <br /> ಗುಜರಾತ್ ಕೋಮುಗಲಭೆಯ ಹತ್ತು ವರ್ಷಗಳ ನಂತರ ಹೊರಬಿದ್ದಿರುವ ಈ ತನಿಖಾ ವರದಿ, ನರೇಂದ್ರ ಮೋದಿ ಅವರಿಗೆ ಭಾರಿ ಸಮಾಧಾನ ನೀಡುವಂತಿದೆ. ಮೋದಿ ವಿರುದ್ಧ ವಿಶೇಷ ತನಿಖಾ ತಂಡಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂಬ ವಿಚಾರವೂ ಈಗ ಅಧಿಕೃತವಾಗಿ ಹೊರಬಿದ್ದಂತಾಗಿದೆ. ಈ ಪ್ರಕರಣದಲ್ಲಿ `ಎಸ್ಐಟಿ~ ಮೋದಿ ಅವರನ್ನು 9 ಗಂಟೆಗಳ ಕಾಲ ಪ್ರಶ್ನಿಸಿತ್ತು. <br /> <br /> <strong>ರಾಘವನ್ ಹೇಳಿಕೆ:</strong> `ಎಸ್ಐಟಿ~ ವರದಿಯ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ತನಿಖಾ ತಂಡದ ಮುಖ್ಯಸ್ಥ ಆರ್.ಕೆ. ರಾಘವನ್, `ಎಸ್ಐಟಿ~ ವರದಿ ಪ್ರಶ್ನಿಸುವ ಅವಕಾಶ ದೂರುದಾರರಿಗೆ ಇದ್ದೇ ಇದೆ. ನಿರ್ದಿಷ್ಟ ಅರ್ಜಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳು ಲಭ್ಯವಿಲ್ಲ ಎಂದು ನಾವು ವರದಿ ನೀಡಿದ್ದೇವೆ ಹಾಗೂ ಪ್ರಕರಣ ಅಂತ್ಯಗೊಳಿಸಲು ಶಿಫಾರಸು ಮಾಡಿದ್ದೇವೆ ಎಂದಿದ್ದಾರೆ. <br /> <br /> ನಾವು ನಮ್ಮ ಕರ್ತವ್ಯವನ್ನು ದಕ್ಷತೆಯಿಂದ ನಿಭಾಯಿಸಿದ್ದೇವೆ. ಈ ವರದಿಯ ಹಿನ್ನೆಲೆಯಲ್ಲಿ ತನಿಖಾ ತಂಡದ ಪ್ರಾಮಾಣಿಕತೆಯನ್ನು ಪ್ರಶ್ನಿಸಬಾರದು ಎಂದೂ ಹೇಳಿದ್ದಾರೆ. <br /> <br /> ಈ ಮಧ್ಯೆ, ಸುಪ್ರೀಂಕೋರ್ಟ್ ನೇಮಿಸಿದ್ದ ಕೋರ್ಟ್ ಸಹಾಯಕ ರಾಜು ರಾಮಚಂದ್ರನ್ `ಎಸ್ಐಟಿ~ ದಾಖಲೆಯ ಮೇಲೆ ತಾವು ನೀಡಿರುವ ಸ್ವತಂತ್ರ ವರದಿಯನ್ನು ಸಹ ದೂರುದಾರರಿಗೆ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ವರದಿಯ ವಿವರ ನೀಡಲು ಅವರು ನಿರಾಕರಿಸಿದ್ದಾರೆ.<br /> <br /> ಗುಲ್ಬರ್ಗಾ ಸೊಸೈಟಿ ಹತ್ಯಾಕಾಂಡ ಪ್ರಕರಣದಲ್ಲಿ ವಿಸ್ತ್ರತ ತನಿಖೆ ನಂತರ `ಎಸ್ಐಟಿ~ ಕಳೆದ ವರ್ಷವೇ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಿತ್ತು. ಕೋರ್ಟ್ ಸಹಾಯಕ ರಾಮಚಂದ್ರನ್ ಸಹ ತಮ್ಮ ವರದಿ ಸಲ್ಲಿಸಿದ್ದರು. <br /> <br /> ಎರಡೂ ವರದಿಗಳನ್ನು ಪರಿಶೀಲಿಸಿದ್ದ ನಂತರ ಸುಪ್ರೀಂಕೋರ್ಟ್ ಕಳೆದ ಸೆಪ್ಟೆಂಬರ್ನಲ್ಲಿ ನೀಡಿದ್ದ ಆದೇಶದಲ್ಲಿ, ವರದಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಸಲ್ಲಿಸಲು ಸೂಚಿಸಿತ್ತು. ತನಿಖಾ ತಂಡಕ್ಕೆ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದಾದಲ್ಲಿ `ಪರಿಸಮಾಪ್ತಿ ವರದಿ~ಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ದೂರುದಾರರಿಗೆ ವರದಿಯ ಪ್ರತಿ ನೀಡಬೇಕು ಎಂದೂ ಸುಪ್ರೀಂಕೋರ್ಟ್ ಹೇಳಿತ್ತು.<br /> </p>.<p><strong>ಜಕಿಯಾ ಜಾಫ್ರಿ ಪ್ರತಿಕ್ರಿಯೆ</strong></p>.<p>ಈ ಪ್ರಕರಣಕ್ಕೆ ಎಸ್ಐಟಿ ತೆರೆ ಎಳೆದಿರುವುದಕ್ಕೆ ಪ್ರತಿಕ್ರಿಯಿಸಿರುವ ಜಕಿಯಾ ಜಾಫ್ರಿ, ಇದರಿಂದ ತಮಗೆ ನಿರಾಸೆಯಾಗಿದ್ದು, ಜೀವ ಇರುವವರೆಗೆ ನ್ಯಾಯಕ್ಕಾಗಿ ಹೋರಾಡುವುದಾಗಿ ತಿಳಿಸಿದ್ದಾರೆ. `ನನಗೆ ದುಃಖವಾಗಿದೆ. ಆದರೆ, ನ್ಯಾಯ ಸಿಗುತ್ತದೆ ಎಂಬ ಆತ್ಮವಿಶ್ವಾಸವಿದೆ. ನಾನು ಬದುಕಿರುವವರೆಗೆ ಹೋರಾಡುತ್ತೇನೆ~ ಎಂದು ಜಕಿಯಾ ಹೇಳಿದರು. ಹತ್ಯಾಕಾಂಡ ನಡೆದ ದಿನ ತಮ್ಮ ಪತಿ ಎಹಸಾನ್ ಜಾಫ್ರಿ ಪೊಲೀಸರು ಮತ್ತು ಮುಖ್ಯಮಂತ್ರಿ ಕಚೇರಿಗೆ ದೂರವಾಣಿ ಕರೆ ಮಾಡುತ್ತಲೇ ಇದ್ದರು ಎಂದು ಜಕಿಯಾ ಹೇಳುತ್ತಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್ (ಐಎಎನ್ಎಸ್/ಪಿಟಿಐ):</strong> ಹತ್ತು ವರ್ಷಗಳ ಹಿಂದೆ ಗುಜರಾತ್ನಲ್ಲಿ ನಡೆದಿದ್ದ ಕೋಮುಗಲಭೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಸುಪ್ರೀಂಕೋರ್ಟ್ನಿಂದ ನೇಮಕಗೊಂಡಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಗುಲ್ಬರ್ಗಾ ಸೊಸೈಟಿ ಹತ್ಯಾಕಾಂಡ ಪ್ರಕರಣದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ದೋಷಮುಕ್ತಗೊಳಿಸಿ ವರದಿ ನೀಡಿದೆ. <br /> <br /> ಈ ಪ್ರಕರಣಕ್ಕೆ ಸಂಬಂಧಿಸಿ ಮೋದಿ ಹಾಗೂ ಇತರ 57 ಜನರ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಗಳು ಲಭ್ಯವಾಗಿಲ್ಲ ಎಂದು `ಎಸ್ಐಟಿ~ ಅಹಮದಾಬಾದ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಫೆಬ್ರುವರಿ 28ರಂದು `ಪರಿಸಮಾಪ್ತಿ ವರದಿ~ ಸಲ್ಲಿಸಿತ್ತು. ಈ ವರದಿ ಆಧರಿಸಿ ಆದೇಶ ನೀಡಿರುವ ನ್ಯಾಯಾಧೀಶ ಎಂ. ಎಸ್. ಭಟ್, ತನಿಖಾಧಿಕಾರಿಗಳಿಗೆ ಮೋದಿ ಸೇರಿದಂತೆ ಯಾವ ಆರೋಪಿಗಳ ವಿರುದ್ಧವೂ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಹೇಳಿದರು.<br /> <br /> ಹಾಗೆಂದು `ಎಸ್ಐಟಿ~ ಸಲ್ಲಿಸಿರುವ `ಪರಿಸಮಾಪ್ತಿ ವರದಿ~ಯನ್ನು ಕೋರ್ಟ್ ಸ್ವೀಕರಿಸಲಿದೆಯೇ ಇಲ್ಲವೇ ಎಂಬುದನ್ನು ನ್ಯಾಯಾಧೀಶರು ಮಂಗಳವಾರದ ವಿಚಾರಣೆಯ ಸಂದರ್ಭದಲ್ಲಿ ಹೇಳಲಿಲ್ಲ. ಸುಪ್ರೀಂಕೋರ್ಟ್ ಆದೇಶದನ್ವಯ, ಸಾಮಾಜಿಕ ನ್ಯಾಯದ ತತ್ವದ ಆಧಾರದಲ್ಲಿ ತನಿಖಾ ವರದಿಯನ್ನು ದೂರುದಾರರಾದ ಜಕಿಯಾ ಜಾಫ್ರಿ ಅವರಿಗೆ 30 ದಿನಗಳೊಳಗಾಗಿ ನೀಡುವಂತೆ `ಎಸ್ಐಟಿ~ಗೆ ಸೂಚಿಸಿದರು.<br /> <br /> ತನಿಖಾ ವರದಿ, ಸಾಕ್ಷ್ಯಗಳ ಹೇಳಿಕೆ, ಸಂಬಂಧಿಸಿದ ದಾಖಲೆಗಳನ್ನು ಜಕಿಯಾ ಅವರಿಗೆ ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿತು. ಜಕಿಯಾ ಅವರ ವಾದವನ್ನು ಆಲಿಸಿದ ನಂತರ `ಪರಿಸಮಾಪ್ತಿ ವರದಿ~ ಸ್ವೀಕರಿಸಬೇಕೇ ಇಲ್ಲವೇ ಎಂಬುದನ್ನು ಕೋರ್ಟ್ ನಿರ್ಧರಿಸಲಿದೆ.<br /> <br /> <strong>ಹಿನ್ನೆಲೆ:</strong> ಗೋಧ್ರಾ ರೈಲು ನಿಲ್ದಾಣದಲ್ಲಿ ಕರಸೇವಕರು ಬೆಂಕಿಗೆ ಆಹುತಿಯಾದ ಘಟನೆಗೆ ಪ್ರತೀಕಾರವಾಗಿ 2002ರ ಫೆಬ್ರುವರಿ-ಮಾರ್ಚ್ನಲ್ಲಿ ಇಡೀ ಗುಜರಾತ್ ಕೋಮುಗಲಭೆಯಲ್ಲಿ ಹೊತ್ತಿ ಉರಿದಿತ್ತು. 2002ರ ಫೆಬ್ರುವರಿ 28ರಂದು ಉದ್ರಿಕ್ತ ಗುಂಪೊಂದು ಅಹಮದಾಬಾದ್ನ ಗುಲ್ಬರ್ಗಾ ಹೌಸಿಂಗ್ ಸೊಸೈಟಿಯಲ್ಲಿ ಕಾಂಗ್ರೆಸ್ನ ಮಾಜಿ ಸಂಸದ ಎಹಸಾನ್ ಜಾಫ್ರಿ ಸೇರಿ 69 ಜನರನ್ನು ಜೀವಂತವಾಗಿ ದಹಿಸಿತ್ತು.<br /> <br /> ಎಹಸಾನ್ ಜಾಫ್ರಿ ಅವರ ಪತ್ನಿ ಜಕಿಯಾ ಜಾಫ್ರಿ ಈ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿ ಹಾಗೂ ಗುಜರಾತ್ ಸರ್ಕಾರದ ಹಿರಿಯ ಅಧಿಕಾರಿಗಳ ಕೈವಾಡವಿದೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು.<br /> <br /> ಗುಜರಾತ್ ಕೋಮುಗಲಭೆಯ ಹತ್ತು ವರ್ಷಗಳ ನಂತರ ಹೊರಬಿದ್ದಿರುವ ಈ ತನಿಖಾ ವರದಿ, ನರೇಂದ್ರ ಮೋದಿ ಅವರಿಗೆ ಭಾರಿ ಸಮಾಧಾನ ನೀಡುವಂತಿದೆ. ಮೋದಿ ವಿರುದ್ಧ ವಿಶೇಷ ತನಿಖಾ ತಂಡಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂಬ ವಿಚಾರವೂ ಈಗ ಅಧಿಕೃತವಾಗಿ ಹೊರಬಿದ್ದಂತಾಗಿದೆ. ಈ ಪ್ರಕರಣದಲ್ಲಿ `ಎಸ್ಐಟಿ~ ಮೋದಿ ಅವರನ್ನು 9 ಗಂಟೆಗಳ ಕಾಲ ಪ್ರಶ್ನಿಸಿತ್ತು. <br /> <br /> <strong>ರಾಘವನ್ ಹೇಳಿಕೆ:</strong> `ಎಸ್ಐಟಿ~ ವರದಿಯ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ತನಿಖಾ ತಂಡದ ಮುಖ್ಯಸ್ಥ ಆರ್.ಕೆ. ರಾಘವನ್, `ಎಸ್ಐಟಿ~ ವರದಿ ಪ್ರಶ್ನಿಸುವ ಅವಕಾಶ ದೂರುದಾರರಿಗೆ ಇದ್ದೇ ಇದೆ. ನಿರ್ದಿಷ್ಟ ಅರ್ಜಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳು ಲಭ್ಯವಿಲ್ಲ ಎಂದು ನಾವು ವರದಿ ನೀಡಿದ್ದೇವೆ ಹಾಗೂ ಪ್ರಕರಣ ಅಂತ್ಯಗೊಳಿಸಲು ಶಿಫಾರಸು ಮಾಡಿದ್ದೇವೆ ಎಂದಿದ್ದಾರೆ. <br /> <br /> ನಾವು ನಮ್ಮ ಕರ್ತವ್ಯವನ್ನು ದಕ್ಷತೆಯಿಂದ ನಿಭಾಯಿಸಿದ್ದೇವೆ. ಈ ವರದಿಯ ಹಿನ್ನೆಲೆಯಲ್ಲಿ ತನಿಖಾ ತಂಡದ ಪ್ರಾಮಾಣಿಕತೆಯನ್ನು ಪ್ರಶ್ನಿಸಬಾರದು ಎಂದೂ ಹೇಳಿದ್ದಾರೆ. <br /> <br /> ಈ ಮಧ್ಯೆ, ಸುಪ್ರೀಂಕೋರ್ಟ್ ನೇಮಿಸಿದ್ದ ಕೋರ್ಟ್ ಸಹಾಯಕ ರಾಜು ರಾಮಚಂದ್ರನ್ `ಎಸ್ಐಟಿ~ ದಾಖಲೆಯ ಮೇಲೆ ತಾವು ನೀಡಿರುವ ಸ್ವತಂತ್ರ ವರದಿಯನ್ನು ಸಹ ದೂರುದಾರರಿಗೆ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ವರದಿಯ ವಿವರ ನೀಡಲು ಅವರು ನಿರಾಕರಿಸಿದ್ದಾರೆ.<br /> <br /> ಗುಲ್ಬರ್ಗಾ ಸೊಸೈಟಿ ಹತ್ಯಾಕಾಂಡ ಪ್ರಕರಣದಲ್ಲಿ ವಿಸ್ತ್ರತ ತನಿಖೆ ನಂತರ `ಎಸ್ಐಟಿ~ ಕಳೆದ ವರ್ಷವೇ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಿತ್ತು. ಕೋರ್ಟ್ ಸಹಾಯಕ ರಾಮಚಂದ್ರನ್ ಸಹ ತಮ್ಮ ವರದಿ ಸಲ್ಲಿಸಿದ್ದರು. <br /> <br /> ಎರಡೂ ವರದಿಗಳನ್ನು ಪರಿಶೀಲಿಸಿದ್ದ ನಂತರ ಸುಪ್ರೀಂಕೋರ್ಟ್ ಕಳೆದ ಸೆಪ್ಟೆಂಬರ್ನಲ್ಲಿ ನೀಡಿದ್ದ ಆದೇಶದಲ್ಲಿ, ವರದಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಸಲ್ಲಿಸಲು ಸೂಚಿಸಿತ್ತು. ತನಿಖಾ ತಂಡಕ್ಕೆ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದಾದಲ್ಲಿ `ಪರಿಸಮಾಪ್ತಿ ವರದಿ~ಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ದೂರುದಾರರಿಗೆ ವರದಿಯ ಪ್ರತಿ ನೀಡಬೇಕು ಎಂದೂ ಸುಪ್ರೀಂಕೋರ್ಟ್ ಹೇಳಿತ್ತು.<br /> </p>.<p><strong>ಜಕಿಯಾ ಜಾಫ್ರಿ ಪ್ರತಿಕ್ರಿಯೆ</strong></p>.<p>ಈ ಪ್ರಕರಣಕ್ಕೆ ಎಸ್ಐಟಿ ತೆರೆ ಎಳೆದಿರುವುದಕ್ಕೆ ಪ್ರತಿಕ್ರಿಯಿಸಿರುವ ಜಕಿಯಾ ಜಾಫ್ರಿ, ಇದರಿಂದ ತಮಗೆ ನಿರಾಸೆಯಾಗಿದ್ದು, ಜೀವ ಇರುವವರೆಗೆ ನ್ಯಾಯಕ್ಕಾಗಿ ಹೋರಾಡುವುದಾಗಿ ತಿಳಿಸಿದ್ದಾರೆ. `ನನಗೆ ದುಃಖವಾಗಿದೆ. ಆದರೆ, ನ್ಯಾಯ ಸಿಗುತ್ತದೆ ಎಂಬ ಆತ್ಮವಿಶ್ವಾಸವಿದೆ. ನಾನು ಬದುಕಿರುವವರೆಗೆ ಹೋರಾಡುತ್ತೇನೆ~ ಎಂದು ಜಕಿಯಾ ಹೇಳಿದರು. ಹತ್ಯಾಕಾಂಡ ನಡೆದ ದಿನ ತಮ್ಮ ಪತಿ ಎಹಸಾನ್ ಜಾಫ್ರಿ ಪೊಲೀಸರು ಮತ್ತು ಮುಖ್ಯಮಂತ್ರಿ ಕಚೇರಿಗೆ ದೂರವಾಣಿ ಕರೆ ಮಾಡುತ್ತಲೇ ಇದ್ದರು ಎಂದು ಜಕಿಯಾ ಹೇಳುತ್ತಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>