<p><strong>ನವದೆಹಲಿ (ಪಿಟಿಐ):</strong> ರಾಜ್ಯಸಭೆಯ ಪರಿಗಣನೆಯಲ್ಲಿರುವ ಲೋಕಪಾಲ ಮಸೂದೆ ದುರ್ಬಲ ಮತ್ತು ಪರಿಣಾಮಕಾರಿಯಲ್ಲ ಎಂದು ಹೇಳುವ ಮೂಲಕ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಮಸೂದೆಯನ್ನು ತಿರಸ್ಕರಿಸಿದ್ದಾರೆ.<br /> <br /> ಈ ಮಸೂದೆ ಅಂಗೀಕಾರದಿಂದ ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾರಿಗೂ ಲಾಭವಿಲ್ಲ. ಮಸೂದೆ ಅಂಗೀಕಾರವಾದರೆ ರಾಹುಲ್ ಗಾಂಧಿಗೆ ಅದರ ಕೀರ್ತಿ ದೊರೆಯುತ್ತದೆ ಅಷ್ಟೆ ಎಂದು ಹೇಳಿದ್ದಾರೆ.<br /> <br /> ‘ಸಚಿವರ ವಿಷಯ ಬಿಡಿ, ಈ ಮಸೂದೆಯಿಂದ ಒಂದು ಇಲಿಯನ್ನು ಕೂಡ ಜೈಲಿಗೆ ಕಳುಹಿಸುವುದು ಸಾಧ್ಯವಿಲ್ಲ. ಮುಂದಿನ 10 ವರ್ಷಗಳಲ್ಲಿ ಒಬ್ಬನೇ ಒಬ್ಬ ವ್ಯಕ್ತಿಗೆ ಶಿಕ್ಷೆಯಾಗುವುದಿಲ್ಲ’ ಎಂದು ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.<br /> <br /> ಸಿಬಿಐಯನ್ನು ಸ್ವಾಯತ್ತಗೊಳಿಸುವವರೆಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಒಬ್ಬರಿಗೂ ಶಿಕ್ಷೆಯಾಗದು. ಈಗಿನ ಮಸೂದೆ ಸಿಬಿಐಯನ್ನು ಸ್ವಾಯತ್ತ<br /> ಗೊಳಿಸುವುದಿಲ್ಲ. ಕಳೆದ 50 ವರ್ಷಗಳಲ್ಲಿ ಸಿಬಿಐಯಿಂದ ನಾಲ್ಕು ರಾಜಕೀಯ ನಾಯಕರಿಗೆ ಮಾತ್ರ ಶಿಕ್ಷೆಯಾಗಿದೆ. ಯಾರ ವಿರುದ್ಧ ತನಿಖೆ ನಡೆಸಲಾಗುತ್ತದೆಯೋ ಅದೇ ರಾಜಕೀಯ ನಾಯಕರಿಗೆ ಸಿಬಿಐ ವರದಿ ಸಲ್ಲಿಸಬೇಕಿರುವುದರಿಂದ ಹೀಗಾಗಿದೆ ಎಂದು ಕೇಜ್ರಿವಾಲ್ ವಿವರಿಸಿದ್ದಾರೆ.<br /> <br /> 2011ರ ಆಗಸ್ಟ್ 11ರಂದು ಅಂಗೀಕಾರವಾದ ಮಸೂದೆಯಲ್ಲಿ ಲೋಕಪಾಲಕ್ಕೆ ಸ್ವತಂತ್ರವಾದ ತನಿಖಾ ಸಂಸ್ಥೆಯನ್ನು ಹೊಂದುವ ಅವಕಾಶ ಇತ್ತು. ಆದರೆ ಈಗ ದುರ್ಬಲವಾಗಿರುವ ಲೋಕಪಾಲವನ್ನು ಒಪ್ಪಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.<br /> <br /> ಜನ ಲೋಕಪಾಲಕ್ಕಾಗಿ ನಮ್ಮ ಚಳವಳಿಯನ್ನು ಮುಂದುವರಿಸುತ್ತೇವೆ. ಹಿಂದೆ ಹಜಾರೆ ಅವರ ನಿರಶನ ನಿಲ್ಲಿಸುವುದಕ್ಕಾಗಿ ನೀಡಲಾದ ಮೂರು ಭರವಸೆಗಳನ್ನು ಉಳಿಸಿಕೊಳ್ಳುವಲ್ಲಿ ಸಂಸತ್ತು ವಿಫಲವಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.<br /> ಒಂದು ಬಾರಿ ಕಾನೂನು ರಚನೆಯಾದ ನಂತರ ಜನ ಲೋಕಪಾಲದ ಅಂಶಗಳನ್ನು ಮತ್ತೆ ಸೇರಿಸಿಕೊಳ್ಳಬಹುದು ಎಂಬ ಸಲಹೆಯ ಬಗ್ಗೆ ಕೇಜ್ರಿವಾಲ್ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.<br /> <br /> ‘ಅವರು ಕಂತುಗಳಲ್ಲಿ ಭ್ರಷ್ಟಾಚಾರ ಎಸಗುವುದಿಲ್ಲ. ಹಾಗಿರುವಾಗ ಕಾನೂನನ್ನು ಮಾತ್ರ ಯಾಕೆ ಕಂತುಗಳಲ್ಲಿ ರಚಿಸಬೇಕು’ ಎಂದು ಅವರು ಕೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ರಾಜ್ಯಸಭೆಯ ಪರಿಗಣನೆಯಲ್ಲಿರುವ ಲೋಕಪಾಲ ಮಸೂದೆ ದುರ್ಬಲ ಮತ್ತು ಪರಿಣಾಮಕಾರಿಯಲ್ಲ ಎಂದು ಹೇಳುವ ಮೂಲಕ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಮಸೂದೆಯನ್ನು ತಿರಸ್ಕರಿಸಿದ್ದಾರೆ.<br /> <br /> ಈ ಮಸೂದೆ ಅಂಗೀಕಾರದಿಂದ ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾರಿಗೂ ಲಾಭವಿಲ್ಲ. ಮಸೂದೆ ಅಂಗೀಕಾರವಾದರೆ ರಾಹುಲ್ ಗಾಂಧಿಗೆ ಅದರ ಕೀರ್ತಿ ದೊರೆಯುತ್ತದೆ ಅಷ್ಟೆ ಎಂದು ಹೇಳಿದ್ದಾರೆ.<br /> <br /> ‘ಸಚಿವರ ವಿಷಯ ಬಿಡಿ, ಈ ಮಸೂದೆಯಿಂದ ಒಂದು ಇಲಿಯನ್ನು ಕೂಡ ಜೈಲಿಗೆ ಕಳುಹಿಸುವುದು ಸಾಧ್ಯವಿಲ್ಲ. ಮುಂದಿನ 10 ವರ್ಷಗಳಲ್ಲಿ ಒಬ್ಬನೇ ಒಬ್ಬ ವ್ಯಕ್ತಿಗೆ ಶಿಕ್ಷೆಯಾಗುವುದಿಲ್ಲ’ ಎಂದು ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.<br /> <br /> ಸಿಬಿಐಯನ್ನು ಸ್ವಾಯತ್ತಗೊಳಿಸುವವರೆಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಒಬ್ಬರಿಗೂ ಶಿಕ್ಷೆಯಾಗದು. ಈಗಿನ ಮಸೂದೆ ಸಿಬಿಐಯನ್ನು ಸ್ವಾಯತ್ತ<br /> ಗೊಳಿಸುವುದಿಲ್ಲ. ಕಳೆದ 50 ವರ್ಷಗಳಲ್ಲಿ ಸಿಬಿಐಯಿಂದ ನಾಲ್ಕು ರಾಜಕೀಯ ನಾಯಕರಿಗೆ ಮಾತ್ರ ಶಿಕ್ಷೆಯಾಗಿದೆ. ಯಾರ ವಿರುದ್ಧ ತನಿಖೆ ನಡೆಸಲಾಗುತ್ತದೆಯೋ ಅದೇ ರಾಜಕೀಯ ನಾಯಕರಿಗೆ ಸಿಬಿಐ ವರದಿ ಸಲ್ಲಿಸಬೇಕಿರುವುದರಿಂದ ಹೀಗಾಗಿದೆ ಎಂದು ಕೇಜ್ರಿವಾಲ್ ವಿವರಿಸಿದ್ದಾರೆ.<br /> <br /> 2011ರ ಆಗಸ್ಟ್ 11ರಂದು ಅಂಗೀಕಾರವಾದ ಮಸೂದೆಯಲ್ಲಿ ಲೋಕಪಾಲಕ್ಕೆ ಸ್ವತಂತ್ರವಾದ ತನಿಖಾ ಸಂಸ್ಥೆಯನ್ನು ಹೊಂದುವ ಅವಕಾಶ ಇತ್ತು. ಆದರೆ ಈಗ ದುರ್ಬಲವಾಗಿರುವ ಲೋಕಪಾಲವನ್ನು ಒಪ್ಪಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.<br /> <br /> ಜನ ಲೋಕಪಾಲಕ್ಕಾಗಿ ನಮ್ಮ ಚಳವಳಿಯನ್ನು ಮುಂದುವರಿಸುತ್ತೇವೆ. ಹಿಂದೆ ಹಜಾರೆ ಅವರ ನಿರಶನ ನಿಲ್ಲಿಸುವುದಕ್ಕಾಗಿ ನೀಡಲಾದ ಮೂರು ಭರವಸೆಗಳನ್ನು ಉಳಿಸಿಕೊಳ್ಳುವಲ್ಲಿ ಸಂಸತ್ತು ವಿಫಲವಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.<br /> ಒಂದು ಬಾರಿ ಕಾನೂನು ರಚನೆಯಾದ ನಂತರ ಜನ ಲೋಕಪಾಲದ ಅಂಶಗಳನ್ನು ಮತ್ತೆ ಸೇರಿಸಿಕೊಳ್ಳಬಹುದು ಎಂಬ ಸಲಹೆಯ ಬಗ್ಗೆ ಕೇಜ್ರಿವಾಲ್ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.<br /> <br /> ‘ಅವರು ಕಂತುಗಳಲ್ಲಿ ಭ್ರಷ್ಟಾಚಾರ ಎಸಗುವುದಿಲ್ಲ. ಹಾಗಿರುವಾಗ ಕಾನೂನನ್ನು ಮಾತ್ರ ಯಾಕೆ ಕಂತುಗಳಲ್ಲಿ ರಚಿಸಬೇಕು’ ಎಂದು ಅವರು ಕೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>