<p><strong>ಅಲಹಾಬಾದ್ (ಪಿಟಿಐ):</strong> ಗೌತಮ ಬುದ್ಧ ನಗರ ಜಿಲ್ಲೆಯ ಮೂರು ಗ್ರಾಮಗಳಲ್ಲಿ ಭೂ ಸ್ವಾಧೀನದ ಅಧಿಸೂಚನೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.</p>.<p>ಅಲ್ಲದೆ ಇತರ ಗ್ರಾಮಗಳಲ್ಲಿ ಇದೇ ರೀತಿ ತೊಂದರೆಗೊಳಗಾಗಿರುವ ರೈತರಿಗೆ ಹೆಚ್ಚುವರಿ ಪರಿಹಾರ ನೀಡಬೇಕು ಎಂದೂ ಆದೇಶಿಸಿದೆ.</p>.<p>ಗ್ರೇಟರ್ ನೊಯಿಡಾ ಮತ್ತು ನೊಯಿಡಾ ವಿಸ್ತರಣಾ ಪ್ರದೇಶಗಳ ಅಭಿವೃದ್ಧಿಗಾಗಿ ಭೂ ಸ್ವಾಧೀನ ಮಾಡಿಕೊಂಡ ಉತ್ತರಪ್ರದೇಶ ಸರ್ಕಾರದ ನೀತಿಯನ್ನು ಪ್ರಶ್ನಿಸಿದ ಕೋರ್ಟ್ `ಭೂಮಿ ಬಳಕೆಯ ಬದಲಾವಣೆ~ ಕುರಿತು ತನಿಖೆ ನಡೆಸಬೇಕು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.</p>.<p>ಸಂಬಂಧಿಸಿದ ಯೋಜನಾ ಮಂಡಳಿಯಿಂದ ಅನುಮತಿ ಪಡೆಯದೆ ಮತ್ತ್ಯಾವುದೇ ಕಟ್ಟಡ ಕಾಮಗಾರಿ ಕೈಗೊಳ್ಳಬಾರದು ಎಂದೂ ಅಧಿಕಾರಿಗಳಿಗೆ ಸೂಚಿಸಿದೆ.</p>.<p>ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಯು. ಖಾನ್ ಮತ್ತು ವಿ.ಕೆ. ಶುಕ್ಲ ಅವರನ್ನು ಒಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠವು ಈ ತೀರ್ಪನ್ನು ನೀಡಿದೆ.</p>.<p>ಪೀಠವು ಒಟ್ಟು 491 ಅರ್ಜಿಗಳ ಕುರಿತ ಆದೇಶವನ್ನು ಈ ಹಿಂದೆ ಕಾಯ್ದಿರಿಸಿತ್ತು.</p>.<p>ಅಸ್ದುಲ್ಲಾಪುರ್, ಯೂಸೂಫ್ಪುರ್ ಚಕ್ ಶಬೇರಿ ಮತ್ತು ದೆವ್ಲಾ ಗ್ರಾಮಗಳ ರೈತರ ಅರ್ಜಿಗಳನ್ನು ಅಂಗೀಕರಿಸಿದ ಕೋರ್ಟ್ ಈ ಗ್ರಾಮಗಳಲ್ಲಿ ಭೂ ಸ್ವಾಧೀನ ಪಡಿಸಿಕೊಂಡಿರುವ ಪ್ರಕಟಣೆಗಳನ್ನು ರದ್ದುಗೊಳಿಸಲಾಗಿದೆ. ಅರ್ಜಿದಾರರು ತಮ್ಮ ಭೂಮಿಯನ್ನು ಪುನರ್ ವಶಕ್ಕೆ ಪಡೆಯಬಹುದು. ಇದಕ್ಕೆ ಮೊದಲು ಒಪ್ಪಂದದಂತೆ ತಾವು ಪಡೆದ ಭೂ ಪರಿಹಾರದ ಹಣವನ್ನು ಜಿಲ್ಲಾಧಿಕಾರಿ ಅವರಿಗೆ ಹಿಂತಿರುಗಿಸಬೇಕು ಎಂದು ಹೇಳಿದೆ.</p>.<p>ಇತರ ಗ್ರಾಮಗಳ ರೈತರು `ಹೆಚ್ಚುವರಿ ಪರಿಹಾರ ಹಣ ಪಡೆಯಲು ಅರ್ಹರಾಗಿರುತ್ತಾರೆ~ ಈ ಮೊತ್ತವು ಈ ಮೊದಲು ಪಡೆದ ಪರಿಹಾರದ ಶೇಕಡಾ 64.70ರವರೆಗೆ ಇರಬಹುದು. ನೊಯಿಡಾ/ ಗ್ರೇಟರ್ ನೊಯಿಡಾದವರು ಆದಷ್ಟು ಬೇಗ ಈ ಪರಿಹಾರ ಒದಗಿಸಬೇಕು ಎಂದು ಕೋರ್ಟ್ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಲಹಾಬಾದ್ (ಪಿಟಿಐ):</strong> ಗೌತಮ ಬುದ್ಧ ನಗರ ಜಿಲ್ಲೆಯ ಮೂರು ಗ್ರಾಮಗಳಲ್ಲಿ ಭೂ ಸ್ವಾಧೀನದ ಅಧಿಸೂಚನೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.</p>.<p>ಅಲ್ಲದೆ ಇತರ ಗ್ರಾಮಗಳಲ್ಲಿ ಇದೇ ರೀತಿ ತೊಂದರೆಗೊಳಗಾಗಿರುವ ರೈತರಿಗೆ ಹೆಚ್ಚುವರಿ ಪರಿಹಾರ ನೀಡಬೇಕು ಎಂದೂ ಆದೇಶಿಸಿದೆ.</p>.<p>ಗ್ರೇಟರ್ ನೊಯಿಡಾ ಮತ್ತು ನೊಯಿಡಾ ವಿಸ್ತರಣಾ ಪ್ರದೇಶಗಳ ಅಭಿವೃದ್ಧಿಗಾಗಿ ಭೂ ಸ್ವಾಧೀನ ಮಾಡಿಕೊಂಡ ಉತ್ತರಪ್ರದೇಶ ಸರ್ಕಾರದ ನೀತಿಯನ್ನು ಪ್ರಶ್ನಿಸಿದ ಕೋರ್ಟ್ `ಭೂಮಿ ಬಳಕೆಯ ಬದಲಾವಣೆ~ ಕುರಿತು ತನಿಖೆ ನಡೆಸಬೇಕು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.</p>.<p>ಸಂಬಂಧಿಸಿದ ಯೋಜನಾ ಮಂಡಳಿಯಿಂದ ಅನುಮತಿ ಪಡೆಯದೆ ಮತ್ತ್ಯಾವುದೇ ಕಟ್ಟಡ ಕಾಮಗಾರಿ ಕೈಗೊಳ್ಳಬಾರದು ಎಂದೂ ಅಧಿಕಾರಿಗಳಿಗೆ ಸೂಚಿಸಿದೆ.</p>.<p>ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಯು. ಖಾನ್ ಮತ್ತು ವಿ.ಕೆ. ಶುಕ್ಲ ಅವರನ್ನು ಒಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠವು ಈ ತೀರ್ಪನ್ನು ನೀಡಿದೆ.</p>.<p>ಪೀಠವು ಒಟ್ಟು 491 ಅರ್ಜಿಗಳ ಕುರಿತ ಆದೇಶವನ್ನು ಈ ಹಿಂದೆ ಕಾಯ್ದಿರಿಸಿತ್ತು.</p>.<p>ಅಸ್ದುಲ್ಲಾಪುರ್, ಯೂಸೂಫ್ಪುರ್ ಚಕ್ ಶಬೇರಿ ಮತ್ತು ದೆವ್ಲಾ ಗ್ರಾಮಗಳ ರೈತರ ಅರ್ಜಿಗಳನ್ನು ಅಂಗೀಕರಿಸಿದ ಕೋರ್ಟ್ ಈ ಗ್ರಾಮಗಳಲ್ಲಿ ಭೂ ಸ್ವಾಧೀನ ಪಡಿಸಿಕೊಂಡಿರುವ ಪ್ರಕಟಣೆಗಳನ್ನು ರದ್ದುಗೊಳಿಸಲಾಗಿದೆ. ಅರ್ಜಿದಾರರು ತಮ್ಮ ಭೂಮಿಯನ್ನು ಪುನರ್ ವಶಕ್ಕೆ ಪಡೆಯಬಹುದು. ಇದಕ್ಕೆ ಮೊದಲು ಒಪ್ಪಂದದಂತೆ ತಾವು ಪಡೆದ ಭೂ ಪರಿಹಾರದ ಹಣವನ್ನು ಜಿಲ್ಲಾಧಿಕಾರಿ ಅವರಿಗೆ ಹಿಂತಿರುಗಿಸಬೇಕು ಎಂದು ಹೇಳಿದೆ.</p>.<p>ಇತರ ಗ್ರಾಮಗಳ ರೈತರು `ಹೆಚ್ಚುವರಿ ಪರಿಹಾರ ಹಣ ಪಡೆಯಲು ಅರ್ಹರಾಗಿರುತ್ತಾರೆ~ ಈ ಮೊತ್ತವು ಈ ಮೊದಲು ಪಡೆದ ಪರಿಹಾರದ ಶೇಕಡಾ 64.70ರವರೆಗೆ ಇರಬಹುದು. ನೊಯಿಡಾ/ ಗ್ರೇಟರ್ ನೊಯಿಡಾದವರು ಆದಷ್ಟು ಬೇಗ ಈ ಪರಿಹಾರ ಒದಗಿಸಬೇಕು ಎಂದು ಕೋರ್ಟ್ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>