ರಾಷ್ಟ್ರೀಯ ವಿಕೋಪ ಪ್ರತಿಸ್ಪಂದನಾಸ ಪಡೆಯ ಸದಸ್ಯರು ಮಂಗಳವಾರ ಬೆಳಿಗ್ಗೆ ಸುಮಾರು 5.30ಕ್ಕೆ ಮಗು ಫತೇವೀರ್ ಸಿಂಗ್ ನನ್ನು ಹೊರತೆಗೆದಿದ್ದು, ಚಂಡೀಗಢದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆ(ಪಿಸಿಐಎಂಇಆರ್)ಗೆ ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಯಿತು ಎಂದು ಸಂಗ್ರೂರು ಜಿಲ್ಲಾಧಿಕಾರಿ ಘನಶ್ಯಾಮ್ ಥೋರಿ ತಿಳಿಸಿದ್ದರೆ. ಆದರೆ ಮಗು ಸತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದಷ್ಟು ಬೇಗ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಸಂ್ಥೆಯ ವೈದ್ಯಕೀಯ ಅಧೀಕ್ಷಕ ಎ.ಕೆ. ಗುಪ್ತಾ ಹೇಳಿದರು.