ಅಹಮದಾಬಾದ್ (ಪಿಟಿಐ): ಸದ್ಭಾವನಾ ಉಪವಾಸಕ್ಕೆ ದೊರೆತ ವ್ಯಾಪಕ ಬೆಂಬಲದಿಂದ ಉತ್ತೇಜಿತರಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ದಿನದ ಉಪವಾಸ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದ್ದಾರೆ.
ಈ ಕಾರ್ಯಕ್ರಮ ದ್ವಾರಕಾದಲ್ಲಿ ಅ.16ರಂದು ಆರಂಭವಾಗಲಿದೆ ಎಂದು ಮುಖ್ಯಮಂತ್ರಿಗಳ ವಕ್ತಾರ ಜಯನಾರಾಯಣ ವ್ಯಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.