<p>ನವದೆಹಲಿ: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗಾಗಿ ಆ ಪ್ರದೇಶದ ಕಾಂಗ್ರೆಸ್ ಸಂಸದರು ಮತ್ತು ಶಾಸಕರು ಪಕ್ಷದ 83ನೇ ಮಹಾಧಿವೇಶನದಲ್ಲಿ ಒತ್ತಾಯಿಸಿದರು.<br /> ಆಂಧ್ರಪ್ರದೇಶದ ಸಂಸದರಾದ ಪೊನ್ನಮ್ಮ ಪ್ರಭಾಕರ ಅವರು ಸೋಮವಾರ ಮಾತನಾಡಲು ಎದ್ದು ನಿಂತಾಗ ತೆಲಂಗಾಣ ಪ್ರದೇಶದ ಕಾಂಗ್ರೆಸ್ ಸಂಸದರು ಮತ್ತು ಶಾಸಕರು ಘೋಷಣೆ ಕೂಗಿದರು. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಾಗಬೇಕು ಎಂದು ಆಗ್ರಹಿಸಿದರು. ಇದರಿಂದ ಅಧಿವೇಶನದ ಕಲಾಪಗಳು ಕೆಲ ನಿಮಿಷ ಸ್ಥಗಿತಗೊಂಡವು.<br /> <br /> ಈ ಘಟನೆ ನಡೆದಾಗ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ವೇದಿಕೆಯಲ್ಲಿ ಇರಲಿಲ್ಲ. ಈ ಘೋಷಣೆಗಳಿಗೆ ಪ್ರಧಾನಿ ಮನಮೋಹನ ಸಿಂಗ್ ಸಾಕ್ಷಿಯಾದರು.<br /> ಚಿತ್ರಗಳ ಮಾರಾಟದ ಭರಾಟೆ: ಇಂದಿರಾ ಗಾಂಧಿ ಕುಟುಂಬದ ಛಾಯಾಚಿತ್ರಗಳ ಮಾರಾಟ ಭರಾಟೆಯಿಂದ ಸಾಗಿತ್ತು. ಇವುಗಳನ್ನು ಕೊಳ್ಳಲು ಕಾರ್ಯಕರ್ತರು ಮುಗಿಬಿದ್ದಿದ್ದರು.<br /> <br /> ರಾಹುಲ್ ಗಾಂಧಿ ಛಾಯಾಚಿತ್ರಗಳಿಗಂತೂ ಭಾರಿ ಬೇಡಿಕೆ ಇತ್ತು ಎಂದು ಮಾರಾಟಗಾರ ರಮೇಶ್ ಸಿಂಘಾಲ್ ಹೇಳಿದರು.ಚಂದಾದಾರರ ನೇಮಕ: ಪಕ್ಷದ ಮುಖವಾಣಿ “ಸಂದೇಶ” ಸಹ ಮಹಾಧಿವೇಶನದಲ್ಲಿ ಮಿಂಚಿತು. ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳಲು ಇದೇ ಸುಸಮಯ ಎಂದು ಭಾವಿಸಿದ್ದ ‘ಸಂದೇಶ’ದ ಸಿಬ್ಬಂದಿ ಹೊಸ ಚಂದಾದಾರರನ್ನು ಹುರುಪಿನಿಂದ ನೋಂದಾಯಿಸುತಿದ್ದರು.<br /> <br /> ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ವಿಶೇಷ ಆಹ್ವಾನಿತರಿಗೆ 325 ರೂಪಾಯಿ ಶುಲ್ಕ ವಿಧಿಸಲಾಗಿದೆ. ಇದರಲ್ಲಿ 100 ರೂಪಾಯಿ ಅಧಿವೇಶನದ ವೆಚ್ಚಕ್ಕೆ ಹಾಗೂ ಉಳಿದ 225ರೂಪಾಯಿಗಳನ್ನು ಸಂದೇಶದ ಚಂದಾ ಹಣವೆಂದೇ ಸ್ವೀಕರಿಸಲಾಯಿತು. ಸುಮಾರು ಎರಡು ಲಕ್ಷ ಕಾರ್ಯಕರ್ತರು ಪಾಲ್ಗೊಂಡಿದ್ದರು.<br /> <br /> <strong>ಗೊಂದಲ: </strong>ಪ್ರಧಾನಿ ಮನಮೋಹನ ಸಿಂಗ್ ಅವರು ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವಾಗ, ಬಿಹಾರ, ಉತ್ತರ ಪ್ರದೇಶದ ನಾಯಕರು ತಮ್ಮ ರಾಜ್ಯಗಳ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಘೋಷಣೆ ಕೂಗಿ ಗಮನ ಸೆಳೆದರು.<br /> <br /> ಪೊಲೀಸರು ಈ ಘೋಷಣೆ ಕೂಗುತ್ತಿದ್ದವರನ್ನು ತಹಬಂದಿಗೆ ತರಲು ಶ್ರಮಿಸಿದರಾದರೂ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಇವರಿಂದ ಕಾರ್ಯಕ್ರಮಕ್ಕೆ ಅಡ್ಡಿಯಾಯಿತು.<br /> <br /> <br /> ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ಉಸ್ತುವಾರಿ ಹೊತ್ತ ಪಕ್ಷದ ನಾಯಕ ಹಾಗೂ ಸಚಿವ ಮುಕುಲ್ ವಾಸ್ನಿಕ್ ಅವರು ಟಿಕೆಟ್ಗಳನ್ನು ಮಾರಾಟ ಮಾಡಿದ್ದಾರೆ ಎಂದು ಘೋಷಣೆ ಕೂಗಿದರು. ಭಾನುವಾರವೂ ವಾಸ್ನಿಕ್ ಅವರ ಭಾಷಣದ ವೇಳೆ ಇದೇ ರೀತಿಯ ಘೋಷಣೆ ಕೂಗಿ ಅಡ್ಡಿಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗಾಗಿ ಆ ಪ್ರದೇಶದ ಕಾಂಗ್ರೆಸ್ ಸಂಸದರು ಮತ್ತು ಶಾಸಕರು ಪಕ್ಷದ 83ನೇ ಮಹಾಧಿವೇಶನದಲ್ಲಿ ಒತ್ತಾಯಿಸಿದರು.<br /> ಆಂಧ್ರಪ್ರದೇಶದ ಸಂಸದರಾದ ಪೊನ್ನಮ್ಮ ಪ್ರಭಾಕರ ಅವರು ಸೋಮವಾರ ಮಾತನಾಡಲು ಎದ್ದು ನಿಂತಾಗ ತೆಲಂಗಾಣ ಪ್ರದೇಶದ ಕಾಂಗ್ರೆಸ್ ಸಂಸದರು ಮತ್ತು ಶಾಸಕರು ಘೋಷಣೆ ಕೂಗಿದರು. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಾಗಬೇಕು ಎಂದು ಆಗ್ರಹಿಸಿದರು. ಇದರಿಂದ ಅಧಿವೇಶನದ ಕಲಾಪಗಳು ಕೆಲ ನಿಮಿಷ ಸ್ಥಗಿತಗೊಂಡವು.<br /> <br /> ಈ ಘಟನೆ ನಡೆದಾಗ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ವೇದಿಕೆಯಲ್ಲಿ ಇರಲಿಲ್ಲ. ಈ ಘೋಷಣೆಗಳಿಗೆ ಪ್ರಧಾನಿ ಮನಮೋಹನ ಸಿಂಗ್ ಸಾಕ್ಷಿಯಾದರು.<br /> ಚಿತ್ರಗಳ ಮಾರಾಟದ ಭರಾಟೆ: ಇಂದಿರಾ ಗಾಂಧಿ ಕುಟುಂಬದ ಛಾಯಾಚಿತ್ರಗಳ ಮಾರಾಟ ಭರಾಟೆಯಿಂದ ಸಾಗಿತ್ತು. ಇವುಗಳನ್ನು ಕೊಳ್ಳಲು ಕಾರ್ಯಕರ್ತರು ಮುಗಿಬಿದ್ದಿದ್ದರು.<br /> <br /> ರಾಹುಲ್ ಗಾಂಧಿ ಛಾಯಾಚಿತ್ರಗಳಿಗಂತೂ ಭಾರಿ ಬೇಡಿಕೆ ಇತ್ತು ಎಂದು ಮಾರಾಟಗಾರ ರಮೇಶ್ ಸಿಂಘಾಲ್ ಹೇಳಿದರು.ಚಂದಾದಾರರ ನೇಮಕ: ಪಕ್ಷದ ಮುಖವಾಣಿ “ಸಂದೇಶ” ಸಹ ಮಹಾಧಿವೇಶನದಲ್ಲಿ ಮಿಂಚಿತು. ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳಲು ಇದೇ ಸುಸಮಯ ಎಂದು ಭಾವಿಸಿದ್ದ ‘ಸಂದೇಶ’ದ ಸಿಬ್ಬಂದಿ ಹೊಸ ಚಂದಾದಾರರನ್ನು ಹುರುಪಿನಿಂದ ನೋಂದಾಯಿಸುತಿದ್ದರು.<br /> <br /> ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ವಿಶೇಷ ಆಹ್ವಾನಿತರಿಗೆ 325 ರೂಪಾಯಿ ಶುಲ್ಕ ವಿಧಿಸಲಾಗಿದೆ. ಇದರಲ್ಲಿ 100 ರೂಪಾಯಿ ಅಧಿವೇಶನದ ವೆಚ್ಚಕ್ಕೆ ಹಾಗೂ ಉಳಿದ 225ರೂಪಾಯಿಗಳನ್ನು ಸಂದೇಶದ ಚಂದಾ ಹಣವೆಂದೇ ಸ್ವೀಕರಿಸಲಾಯಿತು. ಸುಮಾರು ಎರಡು ಲಕ್ಷ ಕಾರ್ಯಕರ್ತರು ಪಾಲ್ಗೊಂಡಿದ್ದರು.<br /> <br /> <strong>ಗೊಂದಲ: </strong>ಪ್ರಧಾನಿ ಮನಮೋಹನ ಸಿಂಗ್ ಅವರು ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವಾಗ, ಬಿಹಾರ, ಉತ್ತರ ಪ್ರದೇಶದ ನಾಯಕರು ತಮ್ಮ ರಾಜ್ಯಗಳ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಘೋಷಣೆ ಕೂಗಿ ಗಮನ ಸೆಳೆದರು.<br /> <br /> ಪೊಲೀಸರು ಈ ಘೋಷಣೆ ಕೂಗುತ್ತಿದ್ದವರನ್ನು ತಹಬಂದಿಗೆ ತರಲು ಶ್ರಮಿಸಿದರಾದರೂ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಇವರಿಂದ ಕಾರ್ಯಕ್ರಮಕ್ಕೆ ಅಡ್ಡಿಯಾಯಿತು.<br /> <br /> <br /> ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ಉಸ್ತುವಾರಿ ಹೊತ್ತ ಪಕ್ಷದ ನಾಯಕ ಹಾಗೂ ಸಚಿವ ಮುಕುಲ್ ವಾಸ್ನಿಕ್ ಅವರು ಟಿಕೆಟ್ಗಳನ್ನು ಮಾರಾಟ ಮಾಡಿದ್ದಾರೆ ಎಂದು ಘೋಷಣೆ ಕೂಗಿದರು. ಭಾನುವಾರವೂ ವಾಸ್ನಿಕ್ ಅವರ ಭಾಷಣದ ವೇಳೆ ಇದೇ ರೀತಿಯ ಘೋಷಣೆ ಕೂಗಿ ಅಡ್ಡಿಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>