2) 2013ರ ಭೂಸ್ವಾಧೀನ ಕಾಯ್ದೆಯನ್ವಯ ಆರು ತಿಂಗಳ ಒಳಗೆ ಸಾಮಾಜಿಕ ಪರಿಣಾಮದ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಅಂದರೆ, ಭೂ ಸ್ವಾಧೀನಕ್ಕೂ ಮುನ್ನ ಗ್ರಾಮಸಭೆ/ಹಳ್ಳಿ ಸಭೆಯ (ಎಸ್ಐಎ) ಅಭಿಪ್ರಾಯಗಳನ್ನು ಪಡೆಯಬೇಕು. ಆದರೆ, ತಿದ್ದುಪಡಿ ಮಸೂದೆಯಲ್ಲಿ ಎಸ್ಐಎಯನ್ನು ಗಾಳಿಗೆ ತೂರಲಾಗಿದ್ದು, ಬಹು ಬೆಳೆಯ ಕೃಷಿ ಭೂಮಿಯನ್ನೂ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬಲ್ಲದು. ಅಲ್ಲದೇ, ಅಗತ್ಯಕ್ಕಿಂತಲೂ ಹೆಚ್ಚಿನ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆಯಬಲ್ಲದು.