<p><strong>ನವದೆಹಲಿ (ಪಿಟಿಐ):</strong> ಎಲ್ಟಿಟಿಇ ವಿರುದ್ಧದ ನಿರ್ಣಾಯಕ ಯುದ್ಧ ನಡೆದಾಗ ತಮಿಳರ ವಿರುದ್ಧ ಶ್ರೀಲಂಕಾ ಸೇನೆ ನಡೆಸಿದ ಅಪರಾಧಗಳನ್ನು ಖಂಡಿಸಿ ಆ ಸರ್ಕಾರದ ವಿರುದ್ಧ ವಿಶ್ವಸಂಸ್ಥೆ ಕೈಗೊಂಡಿರುವ ಗೊತ್ತುವಳಿಯನ್ನು ಬೆಂಬಲಿಸದಿರುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.<br /> <br /> ಇದೊಂದು ಅಮೆರಿಕ ಪ್ರಾಯೋಜಿತ ಗೊತ್ತುವಳಿಯಾಗಿದೆ. ಮಾತ್ರವಲ್ಲ, ಪಾಶ್ಚಿಮಾತ್ಯರು ಪ್ರಜಾಪ್ರಭುತ್ವ ಸರ್ಕಾರಗಳ ಮೇಲೆ ತಮ್ಮ ಅಭಿಪ್ರಾಯವನ್ನು ಹೇರಲು ನಡೆಸುತ್ತಿರುವ ಹುನ್ನಾರ ಎಂದು ಆರ್ಎಸ್ಎಸ್ ಬಣ್ಣಿಸಿದೆ.<br /> <br /> `ಗೊತ್ತುವಳಿ ಕುರಿತು ಭಾರತ ಸ್ಪಷ್ಟ ನಿರ್ಧಾರ ಪ್ರಕಟಿಸದೇ ತಟಸ್ಥ ನೀತಿ ಅನುಸರಿಸಿದರೆ ಅಮೆರಿಕ ಅಥವಾ ಐರೋಪ್ಯ ರಾಷ್ಟ್ರಗಳು ನಮ್ಮಂಥ ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ತಮ್ಮ ಅಭಿಪ್ರಾಯವನ್ನು ಬಲವಂತವಾಗಿ ಹೇರುತ್ತವೆ~ ಎಂದು ತನ್ನ ಮುಖವಾಣಿ `ಆರ್ಗನೈಸರ್~ನ ಸಂಪಾದಕೀಯದಲ್ಲಿ ಪ್ರಕಟಿಸಿದೆ.<br /> <br /> ಇದೇ ಸಂಪಾದಕೀಯದಲ್ಲಿ `ಶ್ರೀಲಂಕಾ ಸರ್ಕಾರದ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಆರೋಪಿಸಲಾಗಿದ್ದು, ಯುದ್ಧದಲ್ಲಿ ಎಲ್ಟಿಟಿಇ ಉಗ್ರರು ನಿಶಸ್ತ್ರರಾಗಿ ಹೋರಾಟಕ್ಕಿಳಿದಿರಲಿಲ್ಲ. ಅವರು ಅಹಿಂಸಾತ್ಮಕ ಹೋರಾಟ ನಡೆಸುತ್ತಿರಲಿಲ್ಲ. ಬದಲಾಗಿ ಅವರ ಬಳಿ ಅತ್ಯಾಧುನಿಕ ಗನ್ಗಳಿದ್ದವು, ರಾಕೆಟ್ ಲಾಂಚರ್ಗಳು ಹಾಗೂ ಟ್ಯಾಂಕರ್ಗಳಿದ್ದವು~ ಎಂದು ಹೇಳಿದೆ.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಎಲ್ಟಿಟಿಇ ವಿರುದ್ಧದ ನಿರ್ಣಾಯಕ ಯುದ್ಧ ನಡೆದಾಗ ತಮಿಳರ ವಿರುದ್ಧ ಶ್ರೀಲಂಕಾ ಸೇನೆ ನಡೆಸಿದ ಅಪರಾಧಗಳನ್ನು ಖಂಡಿಸಿ ಆ ಸರ್ಕಾರದ ವಿರುದ್ಧ ವಿಶ್ವಸಂಸ್ಥೆ ಕೈಗೊಂಡಿರುವ ಗೊತ್ತುವಳಿಯನ್ನು ಬೆಂಬಲಿಸದಿರುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.<br /> <br /> ಇದೊಂದು ಅಮೆರಿಕ ಪ್ರಾಯೋಜಿತ ಗೊತ್ತುವಳಿಯಾಗಿದೆ. ಮಾತ್ರವಲ್ಲ, ಪಾಶ್ಚಿಮಾತ್ಯರು ಪ್ರಜಾಪ್ರಭುತ್ವ ಸರ್ಕಾರಗಳ ಮೇಲೆ ತಮ್ಮ ಅಭಿಪ್ರಾಯವನ್ನು ಹೇರಲು ನಡೆಸುತ್ತಿರುವ ಹುನ್ನಾರ ಎಂದು ಆರ್ಎಸ್ಎಸ್ ಬಣ್ಣಿಸಿದೆ.<br /> <br /> `ಗೊತ್ತುವಳಿ ಕುರಿತು ಭಾರತ ಸ್ಪಷ್ಟ ನಿರ್ಧಾರ ಪ್ರಕಟಿಸದೇ ತಟಸ್ಥ ನೀತಿ ಅನುಸರಿಸಿದರೆ ಅಮೆರಿಕ ಅಥವಾ ಐರೋಪ್ಯ ರಾಷ್ಟ್ರಗಳು ನಮ್ಮಂಥ ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ತಮ್ಮ ಅಭಿಪ್ರಾಯವನ್ನು ಬಲವಂತವಾಗಿ ಹೇರುತ್ತವೆ~ ಎಂದು ತನ್ನ ಮುಖವಾಣಿ `ಆರ್ಗನೈಸರ್~ನ ಸಂಪಾದಕೀಯದಲ್ಲಿ ಪ್ರಕಟಿಸಿದೆ.<br /> <br /> ಇದೇ ಸಂಪಾದಕೀಯದಲ್ಲಿ `ಶ್ರೀಲಂಕಾ ಸರ್ಕಾರದ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಆರೋಪಿಸಲಾಗಿದ್ದು, ಯುದ್ಧದಲ್ಲಿ ಎಲ್ಟಿಟಿಇ ಉಗ್ರರು ನಿಶಸ್ತ್ರರಾಗಿ ಹೋರಾಟಕ್ಕಿಳಿದಿರಲಿಲ್ಲ. ಅವರು ಅಹಿಂಸಾತ್ಮಕ ಹೋರಾಟ ನಡೆಸುತ್ತಿರಲಿಲ್ಲ. ಬದಲಾಗಿ ಅವರ ಬಳಿ ಅತ್ಯಾಧುನಿಕ ಗನ್ಗಳಿದ್ದವು, ರಾಕೆಟ್ ಲಾಂಚರ್ಗಳು ಹಾಗೂ ಟ್ಯಾಂಕರ್ಗಳಿದ್ದವು~ ಎಂದು ಹೇಳಿದೆ.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>