<p><strong>ಅಹಮದ್ನಗರ (ಪಿಟಿಐ):</strong> ಮಹಾರಾಷ್ಟ್ರದ ಪ್ರಸಿದ್ಧ ಶನಿ ಶಿಂಗ್ಣಾಪುರ ಬಯಲು ದೇವಾಲಯದಲ್ಲಿ ಮಹಿಳೆಯರಿಗಿದ್ದ ನಿರ್ಬಂಧ ತೆರವುಗೊಳಿಸಿದ ಮಾರನೇ ದಿನವಾದ ಶನಿವಾರ, ಸಾವಿರಾರು ಮಹಿಳಾ ಭಕ್ತರು ನೇರವಾಗಿ ಶನಿ ಶಿಲೆಯನ್ನು ಮುಟ್ಟಿ ಪೂಜೆ ಸಲ್ಲಿಸಿದರು.<br /> <br /> ಸುಮಾರು ನಾಲ್ಕು ಶತಮಾನಗಳಿಂದ ಮಹಿಳೆಯರ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಬಾಂಬೆ ಹೈಕೋರ್ಟ್ನ ನಿರ್ದೇಶನದ ಮೇರೆಗೆ ದೇವಾಲಯದ ಆಡಳಿತ ಮಂಡಳಿಯು ಯುಗಾದಿಯ ದಿನ ತೆರವುಗೊಳಿಸಿತ್ತು.<br /> <br /> ದೇವಾಲಯದಲ್ಲಿ ಲಿಂಗ ಸಮಾನತೆಗೆ ಆಗ್ರಹಿಸಿ ಭೂಮಾತಾ ಬ್ರಿಗೇಡ್ ಸಂಘಟನೆ ಮೂರು ತಿಂಗಳುಗಳಿಂದ ಬೃಹತ್ ಚಳವಳಿ ಕೂಡ ನಡೆಸುತ್ತಿತ್ತು.<br /> ದೇವಳ ಟ್ರಸ್ಟ್ ಶುಕ್ರವಾರ ತನ್ನ ನಿರ್ಧಾರವನ್ನು ಪ್ರಕಟಿಸುತ್ತಲೇ, ಕೆಲವು ಮಹಿಳಾ ಭಕ್ತರು ಶನಿ ಶಿಲೆ ಇರುವ ಕಟ್ಟೆ ಏರಿ ಸ್ಪರ್ಶಿಸಿ ಪೂಜೆ ಸಲ್ಲಿಸಿದ್ದರು.<br /> ಭೂಮಾತಾ ಬ್ರಿಗೇಡ್ನ ನಾಯಕಿ ತೃಪ್ತಿ ದೇಸಾಯಿ ಕೂಡ ದೇವಾಲಯಕ್ಕೆ ಭೇಟಿ ನೀಡಿ ಶನಿ ದೇವರಿಗೆ ಪೂಜೆ ಸಲ್ಲಿಸಿದರು.<br /> <br /> <strong>ತೈಲಾಭಿಷೇಕ: </strong>ನಿರ್ಬಂಧಿತ ಪ್ರದೇಶವಾಗಿದ್ದ ಶಿಲೆಯ ಬಳಿಗೆ ತೆರಳಲು ಅವಕಾಶ ನೀಡಿದ್ದು ಮಹಿಳಾ ಭಕ್ತರ ಸಂತಸವನ್ನು ಇಮ್ಮಡಿಗೊಳಿಸಿತ್ತು.<br /> ಶನಿ ದೇವರಿಗೆ ವಿಶೇಷ ದಿನವಾದ ಶನಿವಾರ ಭಾರಿ ಸಂಖ್ಯೆಯಲ್ಲಿ ಬಯಲು ಆಲಯಕ್ಕೆ ಭೇಟಿ ನೀಡಿದ ಮಹಿಳೆಯರು ಪುರಾತನ ಶಿಲೆಗೆ ತೈಲ ಅಭಿಷೇಕ ನಡೆಸಿದರು.</p>.<p>ಭಾವನೆಗಳಿಗೆ ಧಕ್ಕೆ: ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿಂಗ್ಣಾಪುರದ ಸರ್ಪಂಚ್ (ಮುಖ್ಯಸ್ಥ) ಬಾಳಸಾಹೇಬ್ ಬಾನಕರ್, ‘ಈ ನಿರ್ಧಾರದಿಂದಾಗಿ ಗ್ರಾಮಸ್ಥರ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ದೇವಾಲಯದ ಪಾವಿತ್ರ್ಯವನ್ನು ರಕ್ಷಿಸುವುದಕ್ಕಾಗಿ ಶತಮಾನಗಳಿಂದ ಅನುಸರಿಸಿಕೊಂಡು ಬಂದಿದ್ದ ಸಂಪ್ರದಾಯ ಮುರಿಯಲಾಗಿದೆ’ ಎಂದು ತಿಳಿಸಿದ್ದಾರೆ.<br /> <br /> ‘ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದು ಮಹಿಳೆಯರ ಮೂಲಭೂತ ಹಕ್ಕು. ಅದನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ’ ಎಂದು ಬಾಂಬೆ ಹೈಕೋರ್ಟ್ ಏಪ್ರಿಲ್ 1ರಂದು ಅಭಿಪ್ರಾಯಪಟ್ಟಿತ್ತು.<br /> <br /> ಶನಿ ಶಿಂಗ್ಣಾಪುರ ಬಯಲು ದೇವಾಲಯದಲ್ಲಿ ಶಿಲೆ ಸ್ಪರ್ಶಿಸಿ ಪೂಜೆ ಸಲ್ಲಿಸುವುದಕ್ಕೆ ಮಹಿಳೆಯರಿಗೂ ಅವಕಾಶ ಕಲ್ಪಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತ್ತು.<br /> <br /> ನಿರ್ಧಾರಕ್ಕೆ ಶ್ಲಾಘನೆ: ಶನಿ ಶಿಂಗ್ಣಾಪುರ ದೇವಾಲಯದ ಆಡಳಿತ ಮಂಡಳಿಯ ನಿರ್ಧಾರವನ್ನು ಮಹಾರಾಷ್ಟ್ರದ ಮಹಿಳಾ ಮುಖಂಡರು ಶ್ಲಾಘಿಸಿದ್ದಾರೆ.<br /> ನಿರ್ಧಾರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಪತ್ನಿ ಅಮೃತಾ ಫಡಣವೀಸ್ ಅವರು ಸ್ವಾಗತಿಸಿದ್ದಾರೆ.<br /> <br /> ‘ಇದು ಅತ್ಯಂತ ತೃಪ್ತಿದಾಯಕ ಬೆಳವಣಿಗೆ. ಪುರುಷರಂತೆ ಮಹಿಳೆಯರೂ ಕೂಡ ಎಲ್ಲ ನ್ಯಾಯಯುತ ಪ್ರಯೋಜನಗಳನ್ನು ಪಡೆಯಲು ಅರ್ಹರು ಎಂಬ ಪ್ರಬಲ ಸಂದೇಶವನ್ನು ಇದು ರವಾನಿಸಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.<br /> <br /> ‘ಶನಿ ಶಿಂಗ್ಣಾಪುರದಲ್ಲಿ ಮಹಿಳೆಯರೂ ಶಿಲೆ ಸ್ಪರ್ಶಿಸಿ ಪೂಜೆ ಸಲ್ಲಿಸಲು ಆರಂಭಿಸಿದ್ದಾರೆ ಎಂದು ತಿಳಿದು ಸಂತಸವಾಗಿದೆ. ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ವಿಚಾರದಲ್ಲಿ ಇದು ಅತ್ಯಂತ ಮಹತ್ವಪೂರ್ಣ ಬೆಳವಣಿಗೆಯಾಗಿದೆ’ ಎಂದು ಮಹಾರಾಷ್ಟ್ರ ದ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹಾತ್ಕರ್ ಅವರು ಬಣ್ಣಿಸಿದ್ದಾರೆ.<br /> <br /> ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ವಕೀಲೆ ಅಭಾ ಸಿಂಗ್ ಅವರು ಐತಿಹಾಸಿಕ ತೀರ್ಪು ನೀಡಿದ ಬಾಂಬೆ ಹೈಕೋರ್ಟ್ಗೆ ಧನ್ಯವಾದ ಸಲ್ಲಿಸಿದ್ದಾರೆ.<br /> <br /> <strong>ಮೊದಲ ದರ್ಶನ</strong><br /> ಟ್ರಸ್ಟ್ನ ನಿರ್ಧಾರ ಹೊರಬೀಳುತ್ತಲೇ, ಪ್ರಿಯಾಂಕಾ ಜಗತ್ ಮತ್ತು ಪುಷ್ಪಕ್ ಕೆವಾಡ್ಕರ್ ಎಂಬ ಇಬ್ಬರು ಹೋರಾಟಗಾರ್ತಿಯರು ನಿರ್ಬಂಧಿತ ಪ್ರದೇಶಕ್ಕೆ ತೆರಳಿ ಮೊದಲಿಗೆ ಶನಿ ಶಿಲೆ ಮುಟ್ಟಿ ಪೂಜಿಸಿದರು.</p>.<p>ತೃಪ್ತಿ ದೇಸಾಯಿ ಅವರ ಭೂಮಾತಾ ಬ್ರಿಗೇಡ್ನಿಂದ ಹೊರ ಬಂದಿದ್ದ ಈ ಇಬ್ಬರು ಒಟ್ಟಾಗಿ ಸೇರಿ ‘ಸ್ವರಾಜ್’ ಬ್ರಿಗೇಡ್ ಎಂಬ ಸಂಘಟನೆ ಸ್ಥಾಪಿಸಿದ್ದರು. ತೃಪ್ತಿ ದೇಸಾಯಿ ಪ್ರಚಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಆ ಹೋರಾಟ ಅವರನ್ನೇ ಕೇಂದ್ರಿತವಾಗಿದೆ ಎಂದು ಇಬ್ಬರೂ ಆರೋಪಿಸಿದ್ದರು.<br /> <br /> <strong>‘ಮುಟ್ಟಾದಾಗ ಪ್ರವೇಶ ನಿರ್ಬಂಧಿಸಿ’</strong><br /> ಶಿರಡಿ (ಪಿಟಿಐ): ಎಲ್ಲ ದೇವಾಲಯಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು. ಮುಟ್ಟಿನ ಸಂದರ್ಭದಲ್ಲಿ ಮಾತ್ರ ಅವರ ಪ್ರವೇಶವನ್ನು ನಿರ್ಬಂಧಿಸಬಹುದು ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ.</p>.<p>ಶಿರಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರಿಗೆ ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧಿಸುವುದು ತಪ್ಪು’ ಎಂದು ಹೇಳಿದ್ದಾರೆ.<br /> <br /> ‘ಮಹಿಳೆಯರು ಮುಟ್ಟಾಗುವ ಸಂದರ್ಭದಲ್ಲಿ ಪ್ರತಿ ತಿಂಗಳು ಐದು ದಿನಗಳ ಕಾಲ ದೇವಾಲಯ ಪ್ರವೇಶಕ್ಕೆ ಅವರನ್ನು ನಿರ್ಬಂಧಿಸಬಹುದಾಗಿದೆ’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.<br /> <br /> <strong>ಎಸೆಯಬೇಕು:</strong> ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಲು ಹಿಂದೇಟು ಹಾಕಿದವರ ವಿರುದ್ಧ ಹರಿಹಾಯ್ದ ಅವರು, ‘ಘೋಷಣೆ ಕೂಗದವರನ್ನು ದೇಶದ ಹೊರಗೆ ಅಥವಾ ಹಿಂದೂ ಮಹಾ ಸಾಗರಕ್ಕೆ ಎಸೆಯಬೇಕು’ ಎಂದು ಕಿಡಿ ಕಾರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದ್ನಗರ (ಪಿಟಿಐ):</strong> ಮಹಾರಾಷ್ಟ್ರದ ಪ್ರಸಿದ್ಧ ಶನಿ ಶಿಂಗ್ಣಾಪುರ ಬಯಲು ದೇವಾಲಯದಲ್ಲಿ ಮಹಿಳೆಯರಿಗಿದ್ದ ನಿರ್ಬಂಧ ತೆರವುಗೊಳಿಸಿದ ಮಾರನೇ ದಿನವಾದ ಶನಿವಾರ, ಸಾವಿರಾರು ಮಹಿಳಾ ಭಕ್ತರು ನೇರವಾಗಿ ಶನಿ ಶಿಲೆಯನ್ನು ಮುಟ್ಟಿ ಪೂಜೆ ಸಲ್ಲಿಸಿದರು.<br /> <br /> ಸುಮಾರು ನಾಲ್ಕು ಶತಮಾನಗಳಿಂದ ಮಹಿಳೆಯರ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಬಾಂಬೆ ಹೈಕೋರ್ಟ್ನ ನಿರ್ದೇಶನದ ಮೇರೆಗೆ ದೇವಾಲಯದ ಆಡಳಿತ ಮಂಡಳಿಯು ಯುಗಾದಿಯ ದಿನ ತೆರವುಗೊಳಿಸಿತ್ತು.<br /> <br /> ದೇವಾಲಯದಲ್ಲಿ ಲಿಂಗ ಸಮಾನತೆಗೆ ಆಗ್ರಹಿಸಿ ಭೂಮಾತಾ ಬ್ರಿಗೇಡ್ ಸಂಘಟನೆ ಮೂರು ತಿಂಗಳುಗಳಿಂದ ಬೃಹತ್ ಚಳವಳಿ ಕೂಡ ನಡೆಸುತ್ತಿತ್ತು.<br /> ದೇವಳ ಟ್ರಸ್ಟ್ ಶುಕ್ರವಾರ ತನ್ನ ನಿರ್ಧಾರವನ್ನು ಪ್ರಕಟಿಸುತ್ತಲೇ, ಕೆಲವು ಮಹಿಳಾ ಭಕ್ತರು ಶನಿ ಶಿಲೆ ಇರುವ ಕಟ್ಟೆ ಏರಿ ಸ್ಪರ್ಶಿಸಿ ಪೂಜೆ ಸಲ್ಲಿಸಿದ್ದರು.<br /> ಭೂಮಾತಾ ಬ್ರಿಗೇಡ್ನ ನಾಯಕಿ ತೃಪ್ತಿ ದೇಸಾಯಿ ಕೂಡ ದೇವಾಲಯಕ್ಕೆ ಭೇಟಿ ನೀಡಿ ಶನಿ ದೇವರಿಗೆ ಪೂಜೆ ಸಲ್ಲಿಸಿದರು.<br /> <br /> <strong>ತೈಲಾಭಿಷೇಕ: </strong>ನಿರ್ಬಂಧಿತ ಪ್ರದೇಶವಾಗಿದ್ದ ಶಿಲೆಯ ಬಳಿಗೆ ತೆರಳಲು ಅವಕಾಶ ನೀಡಿದ್ದು ಮಹಿಳಾ ಭಕ್ತರ ಸಂತಸವನ್ನು ಇಮ್ಮಡಿಗೊಳಿಸಿತ್ತು.<br /> ಶನಿ ದೇವರಿಗೆ ವಿಶೇಷ ದಿನವಾದ ಶನಿವಾರ ಭಾರಿ ಸಂಖ್ಯೆಯಲ್ಲಿ ಬಯಲು ಆಲಯಕ್ಕೆ ಭೇಟಿ ನೀಡಿದ ಮಹಿಳೆಯರು ಪುರಾತನ ಶಿಲೆಗೆ ತೈಲ ಅಭಿಷೇಕ ನಡೆಸಿದರು.</p>.<p>ಭಾವನೆಗಳಿಗೆ ಧಕ್ಕೆ: ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿಂಗ್ಣಾಪುರದ ಸರ್ಪಂಚ್ (ಮುಖ್ಯಸ್ಥ) ಬಾಳಸಾಹೇಬ್ ಬಾನಕರ್, ‘ಈ ನಿರ್ಧಾರದಿಂದಾಗಿ ಗ್ರಾಮಸ್ಥರ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ದೇವಾಲಯದ ಪಾವಿತ್ರ್ಯವನ್ನು ರಕ್ಷಿಸುವುದಕ್ಕಾಗಿ ಶತಮಾನಗಳಿಂದ ಅನುಸರಿಸಿಕೊಂಡು ಬಂದಿದ್ದ ಸಂಪ್ರದಾಯ ಮುರಿಯಲಾಗಿದೆ’ ಎಂದು ತಿಳಿಸಿದ್ದಾರೆ.<br /> <br /> ‘ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದು ಮಹಿಳೆಯರ ಮೂಲಭೂತ ಹಕ್ಕು. ಅದನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ’ ಎಂದು ಬಾಂಬೆ ಹೈಕೋರ್ಟ್ ಏಪ್ರಿಲ್ 1ರಂದು ಅಭಿಪ್ರಾಯಪಟ್ಟಿತ್ತು.<br /> <br /> ಶನಿ ಶಿಂಗ್ಣಾಪುರ ಬಯಲು ದೇವಾಲಯದಲ್ಲಿ ಶಿಲೆ ಸ್ಪರ್ಶಿಸಿ ಪೂಜೆ ಸಲ್ಲಿಸುವುದಕ್ಕೆ ಮಹಿಳೆಯರಿಗೂ ಅವಕಾಶ ಕಲ್ಪಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತ್ತು.<br /> <br /> ನಿರ್ಧಾರಕ್ಕೆ ಶ್ಲಾಘನೆ: ಶನಿ ಶಿಂಗ್ಣಾಪುರ ದೇವಾಲಯದ ಆಡಳಿತ ಮಂಡಳಿಯ ನಿರ್ಧಾರವನ್ನು ಮಹಾರಾಷ್ಟ್ರದ ಮಹಿಳಾ ಮುಖಂಡರು ಶ್ಲಾಘಿಸಿದ್ದಾರೆ.<br /> ನಿರ್ಧಾರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಪತ್ನಿ ಅಮೃತಾ ಫಡಣವೀಸ್ ಅವರು ಸ್ವಾಗತಿಸಿದ್ದಾರೆ.<br /> <br /> ‘ಇದು ಅತ್ಯಂತ ತೃಪ್ತಿದಾಯಕ ಬೆಳವಣಿಗೆ. ಪುರುಷರಂತೆ ಮಹಿಳೆಯರೂ ಕೂಡ ಎಲ್ಲ ನ್ಯಾಯಯುತ ಪ್ರಯೋಜನಗಳನ್ನು ಪಡೆಯಲು ಅರ್ಹರು ಎಂಬ ಪ್ರಬಲ ಸಂದೇಶವನ್ನು ಇದು ರವಾನಿಸಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.<br /> <br /> ‘ಶನಿ ಶಿಂಗ್ಣಾಪುರದಲ್ಲಿ ಮಹಿಳೆಯರೂ ಶಿಲೆ ಸ್ಪರ್ಶಿಸಿ ಪೂಜೆ ಸಲ್ಲಿಸಲು ಆರಂಭಿಸಿದ್ದಾರೆ ಎಂದು ತಿಳಿದು ಸಂತಸವಾಗಿದೆ. ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ವಿಚಾರದಲ್ಲಿ ಇದು ಅತ್ಯಂತ ಮಹತ್ವಪೂರ್ಣ ಬೆಳವಣಿಗೆಯಾಗಿದೆ’ ಎಂದು ಮಹಾರಾಷ್ಟ್ರ ದ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹಾತ್ಕರ್ ಅವರು ಬಣ್ಣಿಸಿದ್ದಾರೆ.<br /> <br /> ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ವಕೀಲೆ ಅಭಾ ಸಿಂಗ್ ಅವರು ಐತಿಹಾಸಿಕ ತೀರ್ಪು ನೀಡಿದ ಬಾಂಬೆ ಹೈಕೋರ್ಟ್ಗೆ ಧನ್ಯವಾದ ಸಲ್ಲಿಸಿದ್ದಾರೆ.<br /> <br /> <strong>ಮೊದಲ ದರ್ಶನ</strong><br /> ಟ್ರಸ್ಟ್ನ ನಿರ್ಧಾರ ಹೊರಬೀಳುತ್ತಲೇ, ಪ್ರಿಯಾಂಕಾ ಜಗತ್ ಮತ್ತು ಪುಷ್ಪಕ್ ಕೆವಾಡ್ಕರ್ ಎಂಬ ಇಬ್ಬರು ಹೋರಾಟಗಾರ್ತಿಯರು ನಿರ್ಬಂಧಿತ ಪ್ರದೇಶಕ್ಕೆ ತೆರಳಿ ಮೊದಲಿಗೆ ಶನಿ ಶಿಲೆ ಮುಟ್ಟಿ ಪೂಜಿಸಿದರು.</p>.<p>ತೃಪ್ತಿ ದೇಸಾಯಿ ಅವರ ಭೂಮಾತಾ ಬ್ರಿಗೇಡ್ನಿಂದ ಹೊರ ಬಂದಿದ್ದ ಈ ಇಬ್ಬರು ಒಟ್ಟಾಗಿ ಸೇರಿ ‘ಸ್ವರಾಜ್’ ಬ್ರಿಗೇಡ್ ಎಂಬ ಸಂಘಟನೆ ಸ್ಥಾಪಿಸಿದ್ದರು. ತೃಪ್ತಿ ದೇಸಾಯಿ ಪ್ರಚಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಆ ಹೋರಾಟ ಅವರನ್ನೇ ಕೇಂದ್ರಿತವಾಗಿದೆ ಎಂದು ಇಬ್ಬರೂ ಆರೋಪಿಸಿದ್ದರು.<br /> <br /> <strong>‘ಮುಟ್ಟಾದಾಗ ಪ್ರವೇಶ ನಿರ್ಬಂಧಿಸಿ’</strong><br /> ಶಿರಡಿ (ಪಿಟಿಐ): ಎಲ್ಲ ದೇವಾಲಯಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು. ಮುಟ್ಟಿನ ಸಂದರ್ಭದಲ್ಲಿ ಮಾತ್ರ ಅವರ ಪ್ರವೇಶವನ್ನು ನಿರ್ಬಂಧಿಸಬಹುದು ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ.</p>.<p>ಶಿರಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರಿಗೆ ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧಿಸುವುದು ತಪ್ಪು’ ಎಂದು ಹೇಳಿದ್ದಾರೆ.<br /> <br /> ‘ಮಹಿಳೆಯರು ಮುಟ್ಟಾಗುವ ಸಂದರ್ಭದಲ್ಲಿ ಪ್ರತಿ ತಿಂಗಳು ಐದು ದಿನಗಳ ಕಾಲ ದೇವಾಲಯ ಪ್ರವೇಶಕ್ಕೆ ಅವರನ್ನು ನಿರ್ಬಂಧಿಸಬಹುದಾಗಿದೆ’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.<br /> <br /> <strong>ಎಸೆಯಬೇಕು:</strong> ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಲು ಹಿಂದೇಟು ಹಾಕಿದವರ ವಿರುದ್ಧ ಹರಿಹಾಯ್ದ ಅವರು, ‘ಘೋಷಣೆ ಕೂಗದವರನ್ನು ದೇಶದ ಹೊರಗೆ ಅಥವಾ ಹಿಂದೂ ಮಹಾ ಸಾಗರಕ್ಕೆ ಎಸೆಯಬೇಕು’ ಎಂದು ಕಿಡಿ ಕಾರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>