<p>ನವದೆಹಲಿ (ಐಎಎನ್ಎಸ್): ಭ್ರಷ್ಟಾಚಾರ ವಿರುದ್ಧ ಸಮರ ಸಾರಿರುವ ಅಣ್ಣಾ ಹಜಾರೆ ಅವರ ಧೋರಣೆ, ಕಾರ್ಯವೈಖರಿ ವಿರುದ್ಧ ಇದೇ ಪ್ರಥಮ ಬಾರಿಗೆ ಸಮಾಜದ ಹಲವು ವರ್ಗಗಳಿಂದ ತೀವ್ರ ಆಕ್ಷೇಪ ಕೇಳಿಬಂದಿದ್ದು, ಅವರ `ಸರ್ವಾಧಿಕಾರಿ~ ವರ್ತನೆ, ಬಲಪಂಥೀಯರನ್ನು ಬೆಂಬಲಿಸುವ ಪ್ರವೃತ್ತಿಯನ್ನು ಟೀಕಿಸಲಾಗಿದೆ.<br /> <br /> ಚಿತ್ರ ನಿರ್ಮಾಪಕ ಮಹೇಶ್ ಭಟ್, ಇತಿಹಾಸಕಾರ ಕೆ. ಎನ್. ಪಣಿಕ್ಕರ್ ಮತ್ತು ಸಾಮಾಜಿಕ ಕಾರ್ಯಕರ್ತರಾದ ಶಬನಂ ಹಶ್ಮಿ ಅವರು ಶುಕ್ರವಾರ ಇಲ್ಲಿ ಪತ್ರಕರ್ತರಿಗೆ ಅಣ್ಣಾ ಹಜಾರೆ ಅವರ ವಿರುದ್ಧ ಆಕ್ರೋಶ ಹೊರಹಾಕಿದರು. <br /> <br /> `ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ ಸಿನಿಮಾ ಕತೆಯಂತೆ ಕಾಣಿಸುತ್ತಿದೆ. ಇದು ಟಿವಿಗಳ ಟಿಆರ್ಪಿಯನ್ನು ಹೆಚ್ಚಿಸೀತೇ ಹೊರತು ಭ್ರಷ್ಟಾಚಾರ ಸಮಸ್ಯೆಗೆ ಪರಿಹಾರ ನೀಡಲಾರದು~ ಎಂದು ಮಹೇಶ್ ಭಟ್ ಹೇಳಿದರು. ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಹಜಾರೆ ಅವರು ಸರ್ವಾಧಿಕಾರಿ ಧೋರಣೆ ತಳೆದಿದ್ದಾರೆ ಎಂದು ಮೂವರೂ ಒಕ್ಕೊರಲಿನಿಂದ ಆಕ್ಷೇಪಿಸಿದರು.<br /> <br /> ಲೋಕಪಾಲ ಮಸೂದೆಯನ್ನು ಜಾರಿಗೆ ತರುವ ವಿಧಾನವೇ ಸರಿಯಾಗಿಲ್ಲ. ದೇಶದಲ್ಲಿ ಕಾಯಂ ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ರೂಪಿಸುವ ಹುನ್ನಾರ ನಡೆದಿದೆ. ಭ್ರಷ್ಟಾಚಾರ ನಿಗ್ರಹಕ್ಕೆ ಶಾಸನವೊಂದು ರೂಪುಗೊಳ್ಳಬೇಕಾದುದೇನೋ ನಿಜ, ಆದರೆ ಲೋಕಪಾಲ ಮಸೂದೆ ಪ್ರಜಾಪ್ರಭುತ್ವವನ್ನು ದಮನ ಮಾಡೀತೇ ಹೊರತು ಭ್ರಷ್ಟಾಚಾರವನ್ನು ಹತ್ತಿಕ್ಕಲಾರದು~ ಎಂದು ಪಣಿಕ್ಕರ್ ಅಭಿಪ್ರಾಯಪಟ್ಟರು.<br /> <br /> ಹಜಾರೆ ಅವರು ಆರಂಭಿಸಿರುವ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಬಲಪಂಥೀಯ ಸಂಘಟನೆಗಳು ಅಪಹರಣ ಮಾಡಿವೆ ಎಂದು ಅವರು ದೂರಿದರು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಹಜಾರೆ ಪ್ರಶಂಸಿಸಿದ್ದನ್ನು ಅವರು ಟೀಕಿಸಿದರು.<br /> <br /> `ಹಜಾರೆ ಅವರು ಭ್ರಷ್ಟಾಚಾರ ವಿರುದ್ಧ ಆಂದೋಲನ ಮಾಡುತ್ತಿದ್ದರೂ ಕೋಮುವಾದವನ್ನು ಕಡೆಗಣಿಸುತ್ತಿದ್ದಾರೆ. ಅಭಿವೃದ್ಧಿಗಾಗಿ ಮೋದಿ ಅವರನ್ನು ಪ್ರಶಂಸಿದರೂ, ಅವರ ನೈತಿಕ ಸಮಸ್ಯೆಯನ್ನು ಬದಿಗೆ ಸರಿಸುವ ಧೋರಣೆ ಸರಿಯಲ್ಲ~ ಎಂದು ಮಹೇಶ್ ಭಟ್ ಹೇಳಿದರು.<br /> <br /> ಬೆದರಿಕೆ ದುರದೃಷ್ಟಕರ-ಬಿಜೆಪಿ: ಲೋಕಪಾಲ ಮಸೂದೆ ರಚನಾ ಸಮಿತಿಯಲ್ಲಿರುವ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮತ್ತು ಇತರ ನಾಗರಿಕ ಸಮಾಜದ ಸದಸ್ಯರನ್ನು ಸಮರ್ಥಿಸಿಕೊಂಡಿರುವ ಬಿಜೆಪಿ, ನಿವೃತ್ತ ನ್ಯಾಯಮೂರ್ತಿ ಅಥವಾ ಕಾರ್ಯಕರ್ತರಿಗೆ ಬೆದರಿಕೆ ಒಡ್ಡುವ ಪ್ರವೃತ್ತಿ ದುರದೃಷ್ಟಕರ ಎಂದು ಹೇಳಿದೆ.<br /> <br /> `ಭ್ರಷ್ಟಾಚಾರ ವಿರುದ್ಧ ಚಳವಳಿಯಲ್ಲಿ ತೊಡಗಿರುವ ಎಲ್ಲಾ ಕಾರ್ಯಕರ್ತರನ್ನು ಅವಮಾನಿಸುವ ಪ್ರವೃತ್ತಿ ಯುಪಿಎ ಅಥವಾ ಸರ್ಕಾರದ ಯೋಗ್ಯತೆಗೆ ತಕ್ಕುದಲ್ಲ~ ಎಂದು ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಐಎಎನ್ಎಸ್): ಭ್ರಷ್ಟಾಚಾರ ವಿರುದ್ಧ ಸಮರ ಸಾರಿರುವ ಅಣ್ಣಾ ಹಜಾರೆ ಅವರ ಧೋರಣೆ, ಕಾರ್ಯವೈಖರಿ ವಿರುದ್ಧ ಇದೇ ಪ್ರಥಮ ಬಾರಿಗೆ ಸಮಾಜದ ಹಲವು ವರ್ಗಗಳಿಂದ ತೀವ್ರ ಆಕ್ಷೇಪ ಕೇಳಿಬಂದಿದ್ದು, ಅವರ `ಸರ್ವಾಧಿಕಾರಿ~ ವರ್ತನೆ, ಬಲಪಂಥೀಯರನ್ನು ಬೆಂಬಲಿಸುವ ಪ್ರವೃತ್ತಿಯನ್ನು ಟೀಕಿಸಲಾಗಿದೆ.<br /> <br /> ಚಿತ್ರ ನಿರ್ಮಾಪಕ ಮಹೇಶ್ ಭಟ್, ಇತಿಹಾಸಕಾರ ಕೆ. ಎನ್. ಪಣಿಕ್ಕರ್ ಮತ್ತು ಸಾಮಾಜಿಕ ಕಾರ್ಯಕರ್ತರಾದ ಶಬನಂ ಹಶ್ಮಿ ಅವರು ಶುಕ್ರವಾರ ಇಲ್ಲಿ ಪತ್ರಕರ್ತರಿಗೆ ಅಣ್ಣಾ ಹಜಾರೆ ಅವರ ವಿರುದ್ಧ ಆಕ್ರೋಶ ಹೊರಹಾಕಿದರು. <br /> <br /> `ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ ಸಿನಿಮಾ ಕತೆಯಂತೆ ಕಾಣಿಸುತ್ತಿದೆ. ಇದು ಟಿವಿಗಳ ಟಿಆರ್ಪಿಯನ್ನು ಹೆಚ್ಚಿಸೀತೇ ಹೊರತು ಭ್ರಷ್ಟಾಚಾರ ಸಮಸ್ಯೆಗೆ ಪರಿಹಾರ ನೀಡಲಾರದು~ ಎಂದು ಮಹೇಶ್ ಭಟ್ ಹೇಳಿದರು. ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಹಜಾರೆ ಅವರು ಸರ್ವಾಧಿಕಾರಿ ಧೋರಣೆ ತಳೆದಿದ್ದಾರೆ ಎಂದು ಮೂವರೂ ಒಕ್ಕೊರಲಿನಿಂದ ಆಕ್ಷೇಪಿಸಿದರು.<br /> <br /> ಲೋಕಪಾಲ ಮಸೂದೆಯನ್ನು ಜಾರಿಗೆ ತರುವ ವಿಧಾನವೇ ಸರಿಯಾಗಿಲ್ಲ. ದೇಶದಲ್ಲಿ ಕಾಯಂ ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ರೂಪಿಸುವ ಹುನ್ನಾರ ನಡೆದಿದೆ. ಭ್ರಷ್ಟಾಚಾರ ನಿಗ್ರಹಕ್ಕೆ ಶಾಸನವೊಂದು ರೂಪುಗೊಳ್ಳಬೇಕಾದುದೇನೋ ನಿಜ, ಆದರೆ ಲೋಕಪಾಲ ಮಸೂದೆ ಪ್ರಜಾಪ್ರಭುತ್ವವನ್ನು ದಮನ ಮಾಡೀತೇ ಹೊರತು ಭ್ರಷ್ಟಾಚಾರವನ್ನು ಹತ್ತಿಕ್ಕಲಾರದು~ ಎಂದು ಪಣಿಕ್ಕರ್ ಅಭಿಪ್ರಾಯಪಟ್ಟರು.<br /> <br /> ಹಜಾರೆ ಅವರು ಆರಂಭಿಸಿರುವ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಬಲಪಂಥೀಯ ಸಂಘಟನೆಗಳು ಅಪಹರಣ ಮಾಡಿವೆ ಎಂದು ಅವರು ದೂರಿದರು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಹಜಾರೆ ಪ್ರಶಂಸಿಸಿದ್ದನ್ನು ಅವರು ಟೀಕಿಸಿದರು.<br /> <br /> `ಹಜಾರೆ ಅವರು ಭ್ರಷ್ಟಾಚಾರ ವಿರುದ್ಧ ಆಂದೋಲನ ಮಾಡುತ್ತಿದ್ದರೂ ಕೋಮುವಾದವನ್ನು ಕಡೆಗಣಿಸುತ್ತಿದ್ದಾರೆ. ಅಭಿವೃದ್ಧಿಗಾಗಿ ಮೋದಿ ಅವರನ್ನು ಪ್ರಶಂಸಿದರೂ, ಅವರ ನೈತಿಕ ಸಮಸ್ಯೆಯನ್ನು ಬದಿಗೆ ಸರಿಸುವ ಧೋರಣೆ ಸರಿಯಲ್ಲ~ ಎಂದು ಮಹೇಶ್ ಭಟ್ ಹೇಳಿದರು.<br /> <br /> ಬೆದರಿಕೆ ದುರದೃಷ್ಟಕರ-ಬಿಜೆಪಿ: ಲೋಕಪಾಲ ಮಸೂದೆ ರಚನಾ ಸಮಿತಿಯಲ್ಲಿರುವ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮತ್ತು ಇತರ ನಾಗರಿಕ ಸಮಾಜದ ಸದಸ್ಯರನ್ನು ಸಮರ್ಥಿಸಿಕೊಂಡಿರುವ ಬಿಜೆಪಿ, ನಿವೃತ್ತ ನ್ಯಾಯಮೂರ್ತಿ ಅಥವಾ ಕಾರ್ಯಕರ್ತರಿಗೆ ಬೆದರಿಕೆ ಒಡ್ಡುವ ಪ್ರವೃತ್ತಿ ದುರದೃಷ್ಟಕರ ಎಂದು ಹೇಳಿದೆ.<br /> <br /> `ಭ್ರಷ್ಟಾಚಾರ ವಿರುದ್ಧ ಚಳವಳಿಯಲ್ಲಿ ತೊಡಗಿರುವ ಎಲ್ಲಾ ಕಾರ್ಯಕರ್ತರನ್ನು ಅವಮಾನಿಸುವ ಪ್ರವೃತ್ತಿ ಯುಪಿಎ ಅಥವಾ ಸರ್ಕಾರದ ಯೋಗ್ಯತೆಗೆ ತಕ್ಕುದಲ್ಲ~ ಎಂದು ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>