<p><strong>ನವದೆಹಲಿ (ಐಎಎನ್ಎಸ್): </strong>ರಾಜಕೀಯ ಹಿತಾಸಕ್ತಿಯಿಂದ ಕೇಂದ್ರ ಸಂಪುಟ ಹೊರಡಿಸಲು ತಯಾರಾಗಿರುವ ಕೆಲವು ಸುಗ್ರೀವಾಜ್ಞೆಗಳಿಗೆ ಸಹಿಹಾಕದಂತೆ ಭಾನುವಾರ ಸಿಪಿಎಂ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಒತ್ತಾಯಿಸಿದೆ.<br /> <br /> ಸಂಪುಟವು ಈ ಸುಗ್ರೀವಾಜ್ಞೆಗಳನ್ನು ರಾಜಕೀಯ ಹಿತಾಸಕ್ತಿಗಾಗಿ ಬಳಸಬಹುದೆಂದು ಶಂಕೆ ವ್ಯಕ್ತಪಡಿಸಿರುವ ಸಿಪಿಎಂ, ‘ಈಚೆಗೆ ಮುಕ್ತಾಯವಾದ ಸಂಸತ್ತಿನ ಅಧಿವೇಶನದಲ್ಲಿ ಕೈಗೆತ್ತಿಕೊಳ್ಳದ ಅನೇಕ ಮಸೂದೆಗಳನ್ನು ಕೇಂದ್ರ ಸಂಪುಟ ಈಗ ಪರಿಗಣಿಸುತ್ತಿದೆಯೆಂದು’ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು ಪ್ರಣವ್ ಮುಖರ್ಜಿಯವರಿಗೆ ಬರೆದಿರುವ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.<br /> <br /> ಆಂಧ್ರ ಪ್ರದೇಶದಿಂದ ಪ್ರತ್ಯೇಕಗೊಂಡಿರುವ ತೆಲಂಗಾಣ ರಾಜ್ಯಕ್ಕೆ ಅಂಗೀಕಾರ ನೀಡುವ ಆಂಧ್ರ ಪ್ರದೇಶ ಪುನರ್ ಸಂಘಟನಾ ಕಾಯ್ದೆಗೆ ರಾಷ್ಟ್ರಪತಿಯವರು ಈಗಾಗಲೆ ಸಹಿ ಹಾಕಿದ್ದು, ಸಂಪುಟವು ಅದರಲ್ಲಿ ಕೆಲವು ತಿದ್ದುಪಡಿ ತರಬಹುದೆಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.<br /> <br /> ‘ಈ ಸಂಶಯ ನಿಜವಾದಲ್ಲಿ ಇದು ಪ್ರಜಾಪ್ರಭುತ್ವದ ಅಣಕ ಮತ್ತು ಆಘಾತಕಾರಿಯಾದ ಅಸಾಂವಿಧಾನಿಕ ಕ್ರಮವಾಗಲಿದೆ’ ಎಂದು ಅವರು ಹೇಳಿದ್ದಾರೆ.<br /> <br /> ‘ಭ್ರಷ್ಟಾಚಾರ ನಿಗ್ರಹಿಸುವುದಕ್ಕೆ ಸಂಬಂಧಿಸಿದ ಮಸೂದೆಗಳನ್ನು ಕುರಿತು ಕಳೆದ ಐದು ವರ್ಷಗಳಲ್ಲಿ ಏನೂ ಮಾಡದ ಸರ್ಕಾರ ಈಗ ಸುಗ್ರೀವಾಜ್ಞೆ ದಾರಿ ಹಿಡಿದಿದೆ. ಸರ್ಕಾರ ಸುಲಭವಾಗಿ ಅಧಿವೇಶನವನ್ನು ಕೆಲವು ದಿನಗಳವರೆಗೆ ವಿಸ್ತರಿಸಿ ಇವುಗಳನ್ನು ಚರ್ಚಿಸಿ ಅಂಗೀಕರಿಸಬಹುದಿತ್ತು ಎಂದು ಕಾರಟ್ ಹೇಳಿದ್ದಾರೆ.<br /> <br /> ಸಂಸತ್ತಿನ ಅಧಿವೇಶನ ಮುಗಿದ ಮೇಲೆ ಆಡಳಿತ ಪಕ್ಷದ ಹಿತಾಸಕ್ತಿಗೆ ಪೂರಕವಾಗುವಂತೆ ಮತ್ತು ಚುನಾವಣೆ ಘೋಷಣೆಯಾಗಲಿರುವ ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸುವುದು ‘ಪ್ರಜಾಪ್ರಭುತ್ವ ವಿರೋಧಿ ಮತ್ತು ಪಕ್ಷಪಾತದ ಕ್ರಿಯೆ’ಎಂದು ಸಿಪಿಐಎಂನ ನಾಯಕರು ಹೇಳಿದ್ದಾರೆ.<br /> <br /> ದೀರ್ಘಕಾಲದ ಸಾರ್ವಜನಿಕ ಬದುಕಿನಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆ ಬಗ್ಗೆ ಅನುಭವ, ವಿವೇಚನೆ ಇರುವ ರಾಷ್ಟ್ರಪತಿಯವರು ಅವುಗಳನ್ನು ಉಲ್ಲಂಘಿಸುವ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೆಂಬ ಭರವಸೆ ತಮಗಿರುವುದಾಗಿ ಕಾರಟ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಐಎಎನ್ಎಸ್): </strong>ರಾಜಕೀಯ ಹಿತಾಸಕ್ತಿಯಿಂದ ಕೇಂದ್ರ ಸಂಪುಟ ಹೊರಡಿಸಲು ತಯಾರಾಗಿರುವ ಕೆಲವು ಸುಗ್ರೀವಾಜ್ಞೆಗಳಿಗೆ ಸಹಿಹಾಕದಂತೆ ಭಾನುವಾರ ಸಿಪಿಎಂ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಒತ್ತಾಯಿಸಿದೆ.<br /> <br /> ಸಂಪುಟವು ಈ ಸುಗ್ರೀವಾಜ್ಞೆಗಳನ್ನು ರಾಜಕೀಯ ಹಿತಾಸಕ್ತಿಗಾಗಿ ಬಳಸಬಹುದೆಂದು ಶಂಕೆ ವ್ಯಕ್ತಪಡಿಸಿರುವ ಸಿಪಿಎಂ, ‘ಈಚೆಗೆ ಮುಕ್ತಾಯವಾದ ಸಂಸತ್ತಿನ ಅಧಿವೇಶನದಲ್ಲಿ ಕೈಗೆತ್ತಿಕೊಳ್ಳದ ಅನೇಕ ಮಸೂದೆಗಳನ್ನು ಕೇಂದ್ರ ಸಂಪುಟ ಈಗ ಪರಿಗಣಿಸುತ್ತಿದೆಯೆಂದು’ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು ಪ್ರಣವ್ ಮುಖರ್ಜಿಯವರಿಗೆ ಬರೆದಿರುವ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.<br /> <br /> ಆಂಧ್ರ ಪ್ರದೇಶದಿಂದ ಪ್ರತ್ಯೇಕಗೊಂಡಿರುವ ತೆಲಂಗಾಣ ರಾಜ್ಯಕ್ಕೆ ಅಂಗೀಕಾರ ನೀಡುವ ಆಂಧ್ರ ಪ್ರದೇಶ ಪುನರ್ ಸಂಘಟನಾ ಕಾಯ್ದೆಗೆ ರಾಷ್ಟ್ರಪತಿಯವರು ಈಗಾಗಲೆ ಸಹಿ ಹಾಕಿದ್ದು, ಸಂಪುಟವು ಅದರಲ್ಲಿ ಕೆಲವು ತಿದ್ದುಪಡಿ ತರಬಹುದೆಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.<br /> <br /> ‘ಈ ಸಂಶಯ ನಿಜವಾದಲ್ಲಿ ಇದು ಪ್ರಜಾಪ್ರಭುತ್ವದ ಅಣಕ ಮತ್ತು ಆಘಾತಕಾರಿಯಾದ ಅಸಾಂವಿಧಾನಿಕ ಕ್ರಮವಾಗಲಿದೆ’ ಎಂದು ಅವರು ಹೇಳಿದ್ದಾರೆ.<br /> <br /> ‘ಭ್ರಷ್ಟಾಚಾರ ನಿಗ್ರಹಿಸುವುದಕ್ಕೆ ಸಂಬಂಧಿಸಿದ ಮಸೂದೆಗಳನ್ನು ಕುರಿತು ಕಳೆದ ಐದು ವರ್ಷಗಳಲ್ಲಿ ಏನೂ ಮಾಡದ ಸರ್ಕಾರ ಈಗ ಸುಗ್ರೀವಾಜ್ಞೆ ದಾರಿ ಹಿಡಿದಿದೆ. ಸರ್ಕಾರ ಸುಲಭವಾಗಿ ಅಧಿವೇಶನವನ್ನು ಕೆಲವು ದಿನಗಳವರೆಗೆ ವಿಸ್ತರಿಸಿ ಇವುಗಳನ್ನು ಚರ್ಚಿಸಿ ಅಂಗೀಕರಿಸಬಹುದಿತ್ತು ಎಂದು ಕಾರಟ್ ಹೇಳಿದ್ದಾರೆ.<br /> <br /> ಸಂಸತ್ತಿನ ಅಧಿವೇಶನ ಮುಗಿದ ಮೇಲೆ ಆಡಳಿತ ಪಕ್ಷದ ಹಿತಾಸಕ್ತಿಗೆ ಪೂರಕವಾಗುವಂತೆ ಮತ್ತು ಚುನಾವಣೆ ಘೋಷಣೆಯಾಗಲಿರುವ ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸುವುದು ‘ಪ್ರಜಾಪ್ರಭುತ್ವ ವಿರೋಧಿ ಮತ್ತು ಪಕ್ಷಪಾತದ ಕ್ರಿಯೆ’ಎಂದು ಸಿಪಿಐಎಂನ ನಾಯಕರು ಹೇಳಿದ್ದಾರೆ.<br /> <br /> ದೀರ್ಘಕಾಲದ ಸಾರ್ವಜನಿಕ ಬದುಕಿನಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆ ಬಗ್ಗೆ ಅನುಭವ, ವಿವೇಚನೆ ಇರುವ ರಾಷ್ಟ್ರಪತಿಯವರು ಅವುಗಳನ್ನು ಉಲ್ಲಂಘಿಸುವ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೆಂಬ ಭರವಸೆ ತಮಗಿರುವುದಾಗಿ ಕಾರಟ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>