<p><strong>ನವದೆಹಲಿ (ಪಿಟಿಐ): </strong>ವಿವಾದಾತ್ಮಕ 2ಜಿ ಟಿಪ್ಪಣಿ ವಿಷಯದಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮತ್ತು ಗೃಹ ಸಚಿವ ಪಿ. ಚಿದಂಬರಂ ಅವರ ನಡುವೆ `ಕಾರ್ಯನಿರ್ವಹಣಾ ಭಿನ್ನಾಭಿಪ್ರಾಯ~ ಉಂಟಾಗಿರುವುದನ್ನು ಒಪ್ಪಿಕೊಂಡಿರುವ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್, ಆದರೆ ಇದು `ಅವರ ಅಭಿಪ್ರಾಯಗಳನ್ನು ತಿಳಿಸುತ್ತದೆಯೇ ಹೊರತು ಪರಸ್ಪರ ಭಿನ್ನಮತವನ್ನಲ್ಲ~ ಎಂದು ಸ್ಪಷ್ಟಪಡಿಸಿದ್ದಾರೆ.<br /> <br /> ಸ್ಪೆಕ್ಟ್ರಂ ಪರವಾನಗಿ ಹಂಚಿಕೆ ಮಾಡುವಾಗ `ಮೊದಲು ಬಂದವರಿಗೆ ಆದ್ಯತೆ~ ಎಂಬ ನಿಯಮವನ್ನು ಗೃಹ ಸಚಿವರು ಪಾಲಿಸಿದ್ದು, ಕೇವಲ ಅವರೊಬ್ಬರೇ ಏಕಪಕ್ಷೀಯವಾಗಿ ಸಂಪುಟದ ನಿರ್ಧಾರವನ್ನು ಬದಲಿಸಲಾಗದು ಎಂದು ಭಾನುವಾರ `ಸಿಎನ್ಎನ್-ಐಬಿಎನ್ ಟಿವಿ~ ಪ್ರಸಾರ ಮಾಡಿದ ಕರಣ್ ಥಾಪರ್ ಅವರ `ಡೆವಿಲ್ಸ್ ಅಡ್ವೊಕೇಟ್~ ಸಂದರ್ಶನ ಕಾರ್ಯಕ್ರಮದಲ್ಲಿ ಖುರ್ಷಿದ್ ಉತ್ತರಿಸಿದ್ದಾರೆ.<br /> <br /> `ಚಿದಂಬರಂ ಸಂಪುಟದ ನಿರ್ಧಾರದ ಬಳಿಕವೂ ಹರಾಜಿನ ಮೂಲಕ ಸ್ಪೆಕ್ಟ್ರಂ ಹಂಚಿಕೆಗೆ ಪಟ್ಟು ಹಿಡಿದಿದ್ದರು. ಆದರೆ ಇದೊಂದು ಸಂಪುಟದ ತೀರ್ಮಾನವಾಗಿದ್ದರಿಂದ ಹಣಕಾಸು ಸಚಿವರಾಗಿದ್ದಾಗ ಚಿದಂಬರಂ ಅವರ ಇಚ್ಛೆಗೆ ವಿರುದ್ಧವಾಗಿ ಪ್ರಕ್ರಿಯೆ ನಡೆದಿತ್ತು~ ಎಂದು ತಿಳಿಸಿದ್ದಾರೆ.<br /> <br /> ಸಂಪುಟದ ತಿರ್ಮಾನದ ಬಗ್ಗೆ ಹಲವು ಸಚಿವರು ಮತ್ತು ಒಬ್ಬ ಸಚಿವರ ಮಧ್ಯೆ ಅಥವಾ ಇಬ್ಬರು ಸಚಿವರ ನಡುವೆ ಭಿನ್ನಾಭಿಪ್ರಾಯ ಮೂಡಿದಾಗ, ಅಂತಿಮವಾಗಿ ಬೇರೇನೂ ಮಾಡಲಾಗದೆ, `ಆಯಿತು~ ಎನ್ನದೆ ವಿಧಿಯಿಲ್ಲ ಎಂದು ಅವರು ಹೇಳಿದ್ದಾರೆ. `ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಚಿದಂಬರಂ ತಪ್ಪಿತಸ್ಥರು~ ಎಂಬ ಬಿಜೆಪಿ ನಾಯಕ ಅರುಣ್ ಜೇಟ್ಲಿಯವರ ಆರೋಪವನ್ನು ಖುರ್ಷಿದ್ ತಳ್ಳಿಹಾಕಿದ್ದಾರೆ. <br /> <br /> ಕಡಿಮೆ ದರದಲ್ಲಿ ಸ್ಪೆಕ್ಟ್ರಂ ಹಂಚಿಕೆ ಮಾಡುವ ನಿರ್ಧಾರವನ್ನು 2001ರಲ್ಲಿ ಜೇಟ್ಲಿಯವರ ಎನ್ಡಿಎ ಸರ್ಕಾರವೇ ಮಾಡಿದ್ದು, ಈ ದರದಲ್ಲಿ ಇನ್ನೂ ಹೆಚ್ಚಿಗೆ ಲೈಸೆನ್ಸ್ ನೀಡುವ ತೀರ್ಮಾನವನ್ನು 2003ರಲ್ಲಿ ಎನ್ಡಿಎ ಸರ್ಕಾರವೇ ಕೈಗೊಂಡಿದ್ದನ್ನು ಅವರು ಸ್ಮರಿಸಿದ್ದಾರೆ. <br /> <br /> `ಮೊದಲು ಬಂದವರಿಗೆ ಆದ್ಯತೆ ನೀಡಬೇಕೆಂಬ 2003ರ ಸಚಿವ ಸಂಪುಟದ ತೀರ್ಮಾನವನ್ನೇ ಯುಪಿಎ ಸರ್ಕಾರವೂ ಮುಂದುವರಿಸಿದ್ದು, ಇದೊಂದು ಒಮ್ಮತದ ನಿರ್ಧಾರವಿರುವುದರಿಂದ ಇದರಲ್ಲಿ ಚಿದಂಬರಂ, ರಾಜಾ ಅಥವಾ ಬೇರಾವ ಸಚಿವರೂ ಸ್ವಂತ ತೀರ್ಮಾನ ಕೈಗೊಳ್ಳಲಾಗದು~ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ವಿವಾದಾತ್ಮಕ 2ಜಿ ಟಿಪ್ಪಣಿ ವಿಷಯದಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮತ್ತು ಗೃಹ ಸಚಿವ ಪಿ. ಚಿದಂಬರಂ ಅವರ ನಡುವೆ `ಕಾರ್ಯನಿರ್ವಹಣಾ ಭಿನ್ನಾಭಿಪ್ರಾಯ~ ಉಂಟಾಗಿರುವುದನ್ನು ಒಪ್ಪಿಕೊಂಡಿರುವ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್, ಆದರೆ ಇದು `ಅವರ ಅಭಿಪ್ರಾಯಗಳನ್ನು ತಿಳಿಸುತ್ತದೆಯೇ ಹೊರತು ಪರಸ್ಪರ ಭಿನ್ನಮತವನ್ನಲ್ಲ~ ಎಂದು ಸ್ಪಷ್ಟಪಡಿಸಿದ್ದಾರೆ.<br /> <br /> ಸ್ಪೆಕ್ಟ್ರಂ ಪರವಾನಗಿ ಹಂಚಿಕೆ ಮಾಡುವಾಗ `ಮೊದಲು ಬಂದವರಿಗೆ ಆದ್ಯತೆ~ ಎಂಬ ನಿಯಮವನ್ನು ಗೃಹ ಸಚಿವರು ಪಾಲಿಸಿದ್ದು, ಕೇವಲ ಅವರೊಬ್ಬರೇ ಏಕಪಕ್ಷೀಯವಾಗಿ ಸಂಪುಟದ ನಿರ್ಧಾರವನ್ನು ಬದಲಿಸಲಾಗದು ಎಂದು ಭಾನುವಾರ `ಸಿಎನ್ಎನ್-ಐಬಿಎನ್ ಟಿವಿ~ ಪ್ರಸಾರ ಮಾಡಿದ ಕರಣ್ ಥಾಪರ್ ಅವರ `ಡೆವಿಲ್ಸ್ ಅಡ್ವೊಕೇಟ್~ ಸಂದರ್ಶನ ಕಾರ್ಯಕ್ರಮದಲ್ಲಿ ಖುರ್ಷಿದ್ ಉತ್ತರಿಸಿದ್ದಾರೆ.<br /> <br /> `ಚಿದಂಬರಂ ಸಂಪುಟದ ನಿರ್ಧಾರದ ಬಳಿಕವೂ ಹರಾಜಿನ ಮೂಲಕ ಸ್ಪೆಕ್ಟ್ರಂ ಹಂಚಿಕೆಗೆ ಪಟ್ಟು ಹಿಡಿದಿದ್ದರು. ಆದರೆ ಇದೊಂದು ಸಂಪುಟದ ತೀರ್ಮಾನವಾಗಿದ್ದರಿಂದ ಹಣಕಾಸು ಸಚಿವರಾಗಿದ್ದಾಗ ಚಿದಂಬರಂ ಅವರ ಇಚ್ಛೆಗೆ ವಿರುದ್ಧವಾಗಿ ಪ್ರಕ್ರಿಯೆ ನಡೆದಿತ್ತು~ ಎಂದು ತಿಳಿಸಿದ್ದಾರೆ.<br /> <br /> ಸಂಪುಟದ ತಿರ್ಮಾನದ ಬಗ್ಗೆ ಹಲವು ಸಚಿವರು ಮತ್ತು ಒಬ್ಬ ಸಚಿವರ ಮಧ್ಯೆ ಅಥವಾ ಇಬ್ಬರು ಸಚಿವರ ನಡುವೆ ಭಿನ್ನಾಭಿಪ್ರಾಯ ಮೂಡಿದಾಗ, ಅಂತಿಮವಾಗಿ ಬೇರೇನೂ ಮಾಡಲಾಗದೆ, `ಆಯಿತು~ ಎನ್ನದೆ ವಿಧಿಯಿಲ್ಲ ಎಂದು ಅವರು ಹೇಳಿದ್ದಾರೆ. `ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಚಿದಂಬರಂ ತಪ್ಪಿತಸ್ಥರು~ ಎಂಬ ಬಿಜೆಪಿ ನಾಯಕ ಅರುಣ್ ಜೇಟ್ಲಿಯವರ ಆರೋಪವನ್ನು ಖುರ್ಷಿದ್ ತಳ್ಳಿಹಾಕಿದ್ದಾರೆ. <br /> <br /> ಕಡಿಮೆ ದರದಲ್ಲಿ ಸ್ಪೆಕ್ಟ್ರಂ ಹಂಚಿಕೆ ಮಾಡುವ ನಿರ್ಧಾರವನ್ನು 2001ರಲ್ಲಿ ಜೇಟ್ಲಿಯವರ ಎನ್ಡಿಎ ಸರ್ಕಾರವೇ ಮಾಡಿದ್ದು, ಈ ದರದಲ್ಲಿ ಇನ್ನೂ ಹೆಚ್ಚಿಗೆ ಲೈಸೆನ್ಸ್ ನೀಡುವ ತೀರ್ಮಾನವನ್ನು 2003ರಲ್ಲಿ ಎನ್ಡಿಎ ಸರ್ಕಾರವೇ ಕೈಗೊಂಡಿದ್ದನ್ನು ಅವರು ಸ್ಮರಿಸಿದ್ದಾರೆ. <br /> <br /> `ಮೊದಲು ಬಂದವರಿಗೆ ಆದ್ಯತೆ ನೀಡಬೇಕೆಂಬ 2003ರ ಸಚಿವ ಸಂಪುಟದ ತೀರ್ಮಾನವನ್ನೇ ಯುಪಿಎ ಸರ್ಕಾರವೂ ಮುಂದುವರಿಸಿದ್ದು, ಇದೊಂದು ಒಮ್ಮತದ ನಿರ್ಧಾರವಿರುವುದರಿಂದ ಇದರಲ್ಲಿ ಚಿದಂಬರಂ, ರಾಜಾ ಅಥವಾ ಬೇರಾವ ಸಚಿವರೂ ಸ್ವಂತ ತೀರ್ಮಾನ ಕೈಗೊಳ್ಳಲಾಗದು~ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>