<p><strong>ಬಳ್ಳಾರಿ/ಕುರುಗೋಡು:</strong> ತಾಲ್ಲೂಕಿನ ಸಿಂಧಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಲೂರು ಗ್ರಾಮದಲ್ಲಿ ಹರಾಜಿನ ಮೂಲಕ 13 ಜನ ಸದಸ್ಯರನ್ನು ಆಯ್ಕೆಮಾಡಿರುವ ಕುರಿತ ವೀಡಿಯೋ ವಾಟ್ಸ್ ಅಪ್ ಗುಂಪುಗಳಲ್ಲಿ ಸೋಮವಾರ ರಾತ್ರಿ ಹರಿದಾಡಿತ್ತು.</p>.<p>‘ಇದು ಸ್ಪಷ್ಟವಾಗಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಪ್ರಕರಣ ದಾಖಲಿಸಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ತಿಳಿಸಿದ್ದಾರೆ.</p>.<p>ಎಲ್ಲ ವಾರ್ಡ್ಗಳ ಆಕಾಂಕ್ಷಿಗಳು ನೀಡಿದ್ದಾರೆ ಎನ್ನಲಾದ ಮೊತ್ತವನ್ನು ವ್ಯಕ್ತಿಯೊಬ್ಬರು ಘೋಷಿಸಿರುವ ವೀಡಿಯೋದಲ್ಲಿ ಅಭ್ಯರ್ಥಿಗಳ ಹೆಸರುಗಳೂ ಇವೆ. ಮೊತ್ತವನ್ನು ಹೇಳುವ ವ್ಯಕ್ತಿ ಕೊನೆಯಲ್ಲಿ ‘ಈ ದಿನ ಎಲ್ಲ ಅಭ್ಯರ್ಥಿಗಳ ಒಟ್ಟು ಮೊತ್ತ ₨ 51.20 ಲಕ್ಷ. ಜಗದಾಂಬ ಮಾರಿಕಾಂಬ ದೇವಿಯ ಗುಡಿಗೆ ಅರ್ಪಿಸಿದೆ’ ಎಂದು ಘೋಷಿಸುತ್ತಾರೆ. ಅದನ್ನು ನೆರೆದ ಜನ ಸಂಭ್ರಮದಿಂದ ಕೂಗಿ ಅದನ್ನು ಸ್ವಾಗತಿಸುತ್ತಾರೆ.</p>.<p>ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ಹರಾಜಿನಲ್ಲಿ ಆಯ್ಕೆಯಾದ ಮತ್ತು ಹರಾಜು ಏರ್ಪಡಿಸಿದ ಎಲ್ಲ ಮುಖಂಡರು ಗ್ರಾಮ ತೊರೆದಿದ್ದಾರೆ. ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಅವರು ಶೋಧದಲ್ಲಿ ತೊಡಗಿದ್ದಾರೆ.</p>.<p><strong>ಭಿನ್ನ ಹೇಳಿಕೆ:</strong> ಈ ಬಗ್ಗೆ ಗ್ರಾಮದ ವ್ಯಕ್ತಿಗಳ ಹೇಳಿಕೆ ಬೇರೆಯಾಗಿದೆ. ‘ಚುನಾವಣೆಯಲ್ಲಿ ಅಭಿವೃದ್ದಿ ಪರ ಚಿಂತನೆ ಇಲ್ಲದ ವ್ಯಕ್ತಿಗಳು ಆಯ್ಕೆಯಾಗಬಹುದು. ಅದರಿಂದ ತಪ್ಪಿಸಲು ಗ್ರಾಮದ ಬಗ್ಗೆ ಕಳಕಳಿ ಇರುವ ವ್ಯಕ್ತಿಗಳನ್ನು ಆಯ್ಕೆಮಾಡಿ ಚುನಾವಣೆಗೆ ಖರ್ಚು ಮಾಡುವ ಹಣವನ್ನು ಅವರಿಂದ ಪಡೆದು ದೇವಸ್ಥಾನ ಅಭಿವೃದ್ಧಿ ಮಾಡಲು ಈ ಕ್ರಮ ಅನುಸರಿಸಲಾಗಿದೆ’ ಎನ್ನುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ/ಕುರುಗೋಡು:</strong> ತಾಲ್ಲೂಕಿನ ಸಿಂಧಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಲೂರು ಗ್ರಾಮದಲ್ಲಿ ಹರಾಜಿನ ಮೂಲಕ 13 ಜನ ಸದಸ್ಯರನ್ನು ಆಯ್ಕೆಮಾಡಿರುವ ಕುರಿತ ವೀಡಿಯೋ ವಾಟ್ಸ್ ಅಪ್ ಗುಂಪುಗಳಲ್ಲಿ ಸೋಮವಾರ ರಾತ್ರಿ ಹರಿದಾಡಿತ್ತು.</p>.<p>‘ಇದು ಸ್ಪಷ್ಟವಾಗಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಪ್ರಕರಣ ದಾಖಲಿಸಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ತಿಳಿಸಿದ್ದಾರೆ.</p>.<p>ಎಲ್ಲ ವಾರ್ಡ್ಗಳ ಆಕಾಂಕ್ಷಿಗಳು ನೀಡಿದ್ದಾರೆ ಎನ್ನಲಾದ ಮೊತ್ತವನ್ನು ವ್ಯಕ್ತಿಯೊಬ್ಬರು ಘೋಷಿಸಿರುವ ವೀಡಿಯೋದಲ್ಲಿ ಅಭ್ಯರ್ಥಿಗಳ ಹೆಸರುಗಳೂ ಇವೆ. ಮೊತ್ತವನ್ನು ಹೇಳುವ ವ್ಯಕ್ತಿ ಕೊನೆಯಲ್ಲಿ ‘ಈ ದಿನ ಎಲ್ಲ ಅಭ್ಯರ್ಥಿಗಳ ಒಟ್ಟು ಮೊತ್ತ ₨ 51.20 ಲಕ್ಷ. ಜಗದಾಂಬ ಮಾರಿಕಾಂಬ ದೇವಿಯ ಗುಡಿಗೆ ಅರ್ಪಿಸಿದೆ’ ಎಂದು ಘೋಷಿಸುತ್ತಾರೆ. ಅದನ್ನು ನೆರೆದ ಜನ ಸಂಭ್ರಮದಿಂದ ಕೂಗಿ ಅದನ್ನು ಸ್ವಾಗತಿಸುತ್ತಾರೆ.</p>.<p>ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ಹರಾಜಿನಲ್ಲಿ ಆಯ್ಕೆಯಾದ ಮತ್ತು ಹರಾಜು ಏರ್ಪಡಿಸಿದ ಎಲ್ಲ ಮುಖಂಡರು ಗ್ರಾಮ ತೊರೆದಿದ್ದಾರೆ. ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಅವರು ಶೋಧದಲ್ಲಿ ತೊಡಗಿದ್ದಾರೆ.</p>.<p><strong>ಭಿನ್ನ ಹೇಳಿಕೆ:</strong> ಈ ಬಗ್ಗೆ ಗ್ರಾಮದ ವ್ಯಕ್ತಿಗಳ ಹೇಳಿಕೆ ಬೇರೆಯಾಗಿದೆ. ‘ಚುನಾವಣೆಯಲ್ಲಿ ಅಭಿವೃದ್ದಿ ಪರ ಚಿಂತನೆ ಇಲ್ಲದ ವ್ಯಕ್ತಿಗಳು ಆಯ್ಕೆಯಾಗಬಹುದು. ಅದರಿಂದ ತಪ್ಪಿಸಲು ಗ್ರಾಮದ ಬಗ್ಗೆ ಕಳಕಳಿ ಇರುವ ವ್ಯಕ್ತಿಗಳನ್ನು ಆಯ್ಕೆಮಾಡಿ ಚುನಾವಣೆಗೆ ಖರ್ಚು ಮಾಡುವ ಹಣವನ್ನು ಅವರಿಂದ ಪಡೆದು ದೇವಸ್ಥಾನ ಅಭಿವೃದ್ಧಿ ಮಾಡಲು ಈ ಕ್ರಮ ಅನುಸರಿಸಲಾಗಿದೆ’ ಎನ್ನುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>