<p><strong>ತುಮಕೂರು:</strong> ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತೀವ್ರವಾಗುತ್ತಿದೆ. ಆಹಾರ ಅರಸಿ ಚಿರತೆ, ಕರಡಿ, ಜಿಂಕೆಗಳು ಕಾಡಂಚಿನ ಗ್ರಾಮಗಳತ್ತ ಮುಖ ಮಾಡುತ್ತಿವೆ.</p>.<p>ನಾಡಿನತ್ತ ಮುಖಮಾಡಿದ್ದ ವೇಳೆ ಬೇಟೆ, ವಾಹನಗಳು ಡಿಕ್ಕಿ ಹೊಡೆದು ಹಾಗೂ ಇತರ ಕಾರಣಗಳಿಂದ 2016ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ವನ್ಯಜೀವಿಗಳು ಮೃತಪಟ್ಟಿವೆ. ಇದರಲ್ಲಿ 17 ಚಿರತೆಗಳು ಸಾವಿನ ಮನೆ ಸೇರಿವೆ. ಅಪಘಾತದ ಕಾರಣದಿಂದಲೇ ಹೆಚ್ಚು ವನ್ಯ ಜೀವಿಗಳು ಮೃತಪಟ್ಟಿವೆ.</p>.<p>ಕುಣಿಗಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಮೂರು ವರ್ಷಗಳಲ್ಲಿ 7 ಚಿರತೆಗಳು ಅಪಘಾತಕ್ಕೆ ಬಲಿಯಾಗಿವೆ. ಅರಣ್ಯ ಇಲಾಖೆ ಮಾಹಿತಿಯ ಪ್ರಕಾರ 2016ರಲ್ಲಿ ಅಪಘಾತ ಮತ್ತು ಇತರ ಕಾರಣದಿಂದ 5 ಚಿರತೆಗಳು, ತಲಾ ಒಂದು ಕರಡಿ, ನರಿ ಮತ್ತು ಕೃಷ್ಣಮೃಗಮೃತಪಟ್ಟಿವೆ. 2017ರಲ್ಲಿ 3 ಚಿರತೆ, ಎರಡು ಕೃಷ್ಣಮೃಗ, 2018ರಲ್ಲಿ 9 ಚಿರತೆ, ಮೂರು ಕರಡಿಗಳು ಸಾವನ್ನಪ್ಪಿವೆ.</p>.<p>ಜಿಲ್ಲೆಯ ಅರಣ್ಯಗಳಲ್ಲಿ ನರಿ, ಕೃಷ್ಣಮೃಗ, ಪುನುಗು ಬೆಕ್ಕು, ನಕ್ಷತ್ರ ಆಮೆ, ಕರಡಿಗಳು ಹೆಚ್ಚಿವೆ. ಕೆಲವು ಕಡೆಗಳಲ್ಲಿ ಜೀವಿಗಳು ಅಪಘಾತಕ್ಕೆ ಬಲಿಯಾದರೂ ದಾಖಲಾಗುತ್ತಿಲ್ಲ. ಉರುಳಿಗೆ ಬಿದ್ದ ಪ್ರಾಣಿಗಳು ತಪ್ಪಿಸಿಕೊಳ್ಳುವ ಯತ್ನದಲ್ಲಿಯೂ ಸಾವನ್ನಪ್ಪಿವೆ.</p>.<p>ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಅವರ ಅಧ್ಯಯನದ ಪ್ರಕಾರ ಜಿಲ್ಲೆಯ 93 ಗ್ರಾಮಗಳಲ್ಲಿ ಮಾನವ ಮತ್ತು ಚಿರತೆ ಸಂಘರ್ಷ ಇದೆ.</p>.<p>ತಿಂಗಳಲ್ಲಿ ಜಿಲ್ಲೆಯಲ್ಲಿ ಕನಿಷ್ಠ ಎರಡು –ಮೂರು ಕಡೆಗಳಲ್ಲಿಯಾದರೂ ಕುರಿ, ಮೇಕೆಗಳ ಮೇಲೆ ಚಿರತೆ ದಾಳಿ, ಮನುಷ್ಯನ ಮೇಲೆ ಕರಡಿ ದಾಳಿ, ನಾಡಿಗೆ ಬಂದ ಜಿಂಕೆ ಇಂತಹ ಪ್ರಸಂಗಗಳು ವರದಿಯಾಗುತ್ತಲೇ ಇವೆ.</p>.<p>ಈ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಕಡೆಗಳಲ್ಲಿ ಚಿರತೆಗಳು ಕುರಿ, ಮೇಕೆಗಳ ಮೇಲೆ ದಾಳಿ ನಡೆಸಿವೆ. ಕುಣಿಗಲ್ ತಾಲ್ಲೂಕಿನಲ್ಲಿಯೇ ಕಳೆದ ಐದು ತಿಂಗಳಲ್ಲಿ 80ಕ್ಕೂ ಹೆಚ್ಚು ದಾಳಿಗಳು ನಡೆದಿವೆ.</p>.<p><strong>ಸೂಚನಾ ಫಲಕ ನಿರ್ಲಕ್ಷ್ಯ</strong></p>.<p>ಕುಣಿಗಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಸುತ್ತಮುತ್ತ ಬೆಟ್ಟಗುಡ್ಡ ಪ್ರದೇಶಗಳು ಇವೆ. ಈ ವ್ಯಾಪ್ತಿಯಲ್ಲಿ ಚಿರತೆಗಳು ರಾತ್ರಿ ಹಳ್ಳಿಗಳತ್ತ ಮುಖಮಾಡುತ್ತವೆ.</p>.<p>ವಾಹನ ಚಾಲಕರು ವೇಗದ ಮಿತಿ ಅಳವಡಿಸಿಕೊಂಡು ಸಾಗುವಂತೆ ಹೆದ್ದಾರಿ ಬದಿಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆದರೂ ಜನರು ಈ ಬಗ್ಗೆ ಲಕ್ಷ್ಯವನ್ನೇ ನೀಡುವುದಿಲ್ಲ. ಇದು ಪ್ರಾಣಿಗಳ ಬದುಕಿಗೆ ಕುತ್ತು ತರುತ್ತಿದೆ ಎನ್ನುವರು ಕುಣಿಗಲ್ ವಲಯ ಅರಣ್ಯಾಧಿಕಾರಿ ರವಿ.</p>.<p><strong>ಇನ್ನಷ್ಟು ಸುದ್ದಿಗಳು</strong></p>.<p><strong><span style="color:#FF0000;">*</span><a href="https://www.prajavani.net/stories/stateregional/indian-leopard-death-581194.html" target="_blank">ಚಿರತೆ ಸಾವಿಗೆ ಹಸಿವು ಕಾರಣ</a></strong></p>.<p><strong><span style="color:#FF0000;">*</span></strong><a href="https://www.prajavani.net/stories/stateregional/leopard-accident-589345.html" target="_blank"><strong>ವಾಹನ ಡಿಕ್ಕಿ ಚಿರತೆ ಸಾವು</strong></a></p>.<p><span style="color:#FF0000;"><strong>*</strong></span><a href="https://www.prajavani.net/news/article/2018/04/01/563291.html" target="_blank"><strong>ಉರುಳಿಗೆ ಸಿಲುಕಿ ಚಿರತೆ ಸಾವು </strong></a></p>.<p><strong><span style="color:#FF0000;">*</span></strong><a href="https://www.prajavani.net/district/mysore/tiger-and-leopard-death-no-563304.html" target="_blank"><strong>ಹುಲಿ, ಚಿರತೆ ಸಾವು: ಸಿಗದ ಸುಳಿವು</strong></a></p>.<p><span style="color:#FF0000;"><strong>*</strong></span><a href="http://https://www.prajavani.net/news/article/2018/04/15/566037.html" target="_blank"><strong>ಚಿರತೆ ನಿಗೂಢ ಸಾವು</strong></a></p>.<p><strong><span style="color:#FF0000;">*</span></strong><a href="https://www.prajavani.net/article/ಎರಡು-ಚಿರತೆ-ಸಾವು-ವಿಷಪ್ರಾಶನ-ಶಂಕೆ" target="_blank"><strong>ಎರಡು ಚಿರತೆ ಸಾವು; ವಿಷಪ್ರಾಶನ ಶಂಕೆ</strong></a></p>.<p><strong><span style="color:#FF0000;">*</span></strong><a href="https://ಚಿರತೆ ಸಾವು: ಅಪಘಾತ ಕಾರಣವಲ್ಲ https://www.prajavani.net/article/ಚಿರತೆ-ಸಾವು-ಅಪಘಾತ-ಕಾರಣವಲ್ಲ" target="_blank"><strong>ಚಿರತೆ ಸಾವು</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತೀವ್ರವಾಗುತ್ತಿದೆ. ಆಹಾರ ಅರಸಿ ಚಿರತೆ, ಕರಡಿ, ಜಿಂಕೆಗಳು ಕಾಡಂಚಿನ ಗ್ರಾಮಗಳತ್ತ ಮುಖ ಮಾಡುತ್ತಿವೆ.</p>.<p>ನಾಡಿನತ್ತ ಮುಖಮಾಡಿದ್ದ ವೇಳೆ ಬೇಟೆ, ವಾಹನಗಳು ಡಿಕ್ಕಿ ಹೊಡೆದು ಹಾಗೂ ಇತರ ಕಾರಣಗಳಿಂದ 2016ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ವನ್ಯಜೀವಿಗಳು ಮೃತಪಟ್ಟಿವೆ. ಇದರಲ್ಲಿ 17 ಚಿರತೆಗಳು ಸಾವಿನ ಮನೆ ಸೇರಿವೆ. ಅಪಘಾತದ ಕಾರಣದಿಂದಲೇ ಹೆಚ್ಚು ವನ್ಯ ಜೀವಿಗಳು ಮೃತಪಟ್ಟಿವೆ.</p>.<p>ಕುಣಿಗಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಮೂರು ವರ್ಷಗಳಲ್ಲಿ 7 ಚಿರತೆಗಳು ಅಪಘಾತಕ್ಕೆ ಬಲಿಯಾಗಿವೆ. ಅರಣ್ಯ ಇಲಾಖೆ ಮಾಹಿತಿಯ ಪ್ರಕಾರ 2016ರಲ್ಲಿ ಅಪಘಾತ ಮತ್ತು ಇತರ ಕಾರಣದಿಂದ 5 ಚಿರತೆಗಳು, ತಲಾ ಒಂದು ಕರಡಿ, ನರಿ ಮತ್ತು ಕೃಷ್ಣಮೃಗಮೃತಪಟ್ಟಿವೆ. 2017ರಲ್ಲಿ 3 ಚಿರತೆ, ಎರಡು ಕೃಷ್ಣಮೃಗ, 2018ರಲ್ಲಿ 9 ಚಿರತೆ, ಮೂರು ಕರಡಿಗಳು ಸಾವನ್ನಪ್ಪಿವೆ.</p>.<p>ಜಿಲ್ಲೆಯ ಅರಣ್ಯಗಳಲ್ಲಿ ನರಿ, ಕೃಷ್ಣಮೃಗ, ಪುನುಗು ಬೆಕ್ಕು, ನಕ್ಷತ್ರ ಆಮೆ, ಕರಡಿಗಳು ಹೆಚ್ಚಿವೆ. ಕೆಲವು ಕಡೆಗಳಲ್ಲಿ ಜೀವಿಗಳು ಅಪಘಾತಕ್ಕೆ ಬಲಿಯಾದರೂ ದಾಖಲಾಗುತ್ತಿಲ್ಲ. ಉರುಳಿಗೆ ಬಿದ್ದ ಪ್ರಾಣಿಗಳು ತಪ್ಪಿಸಿಕೊಳ್ಳುವ ಯತ್ನದಲ್ಲಿಯೂ ಸಾವನ್ನಪ್ಪಿವೆ.</p>.<p>ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಅವರ ಅಧ್ಯಯನದ ಪ್ರಕಾರ ಜಿಲ್ಲೆಯ 93 ಗ್ರಾಮಗಳಲ್ಲಿ ಮಾನವ ಮತ್ತು ಚಿರತೆ ಸಂಘರ್ಷ ಇದೆ.</p>.<p>ತಿಂಗಳಲ್ಲಿ ಜಿಲ್ಲೆಯಲ್ಲಿ ಕನಿಷ್ಠ ಎರಡು –ಮೂರು ಕಡೆಗಳಲ್ಲಿಯಾದರೂ ಕುರಿ, ಮೇಕೆಗಳ ಮೇಲೆ ಚಿರತೆ ದಾಳಿ, ಮನುಷ್ಯನ ಮೇಲೆ ಕರಡಿ ದಾಳಿ, ನಾಡಿಗೆ ಬಂದ ಜಿಂಕೆ ಇಂತಹ ಪ್ರಸಂಗಗಳು ವರದಿಯಾಗುತ್ತಲೇ ಇವೆ.</p>.<p>ಈ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಕಡೆಗಳಲ್ಲಿ ಚಿರತೆಗಳು ಕುರಿ, ಮೇಕೆಗಳ ಮೇಲೆ ದಾಳಿ ನಡೆಸಿವೆ. ಕುಣಿಗಲ್ ತಾಲ್ಲೂಕಿನಲ್ಲಿಯೇ ಕಳೆದ ಐದು ತಿಂಗಳಲ್ಲಿ 80ಕ್ಕೂ ಹೆಚ್ಚು ದಾಳಿಗಳು ನಡೆದಿವೆ.</p>.<p><strong>ಸೂಚನಾ ಫಲಕ ನಿರ್ಲಕ್ಷ್ಯ</strong></p>.<p>ಕುಣಿಗಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಸುತ್ತಮುತ್ತ ಬೆಟ್ಟಗುಡ್ಡ ಪ್ರದೇಶಗಳು ಇವೆ. ಈ ವ್ಯಾಪ್ತಿಯಲ್ಲಿ ಚಿರತೆಗಳು ರಾತ್ರಿ ಹಳ್ಳಿಗಳತ್ತ ಮುಖಮಾಡುತ್ತವೆ.</p>.<p>ವಾಹನ ಚಾಲಕರು ವೇಗದ ಮಿತಿ ಅಳವಡಿಸಿಕೊಂಡು ಸಾಗುವಂತೆ ಹೆದ್ದಾರಿ ಬದಿಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆದರೂ ಜನರು ಈ ಬಗ್ಗೆ ಲಕ್ಷ್ಯವನ್ನೇ ನೀಡುವುದಿಲ್ಲ. ಇದು ಪ್ರಾಣಿಗಳ ಬದುಕಿಗೆ ಕುತ್ತು ತರುತ್ತಿದೆ ಎನ್ನುವರು ಕುಣಿಗಲ್ ವಲಯ ಅರಣ್ಯಾಧಿಕಾರಿ ರವಿ.</p>.<p><strong>ಇನ್ನಷ್ಟು ಸುದ್ದಿಗಳು</strong></p>.<p><strong><span style="color:#FF0000;">*</span><a href="https://www.prajavani.net/stories/stateregional/indian-leopard-death-581194.html" target="_blank">ಚಿರತೆ ಸಾವಿಗೆ ಹಸಿವು ಕಾರಣ</a></strong></p>.<p><strong><span style="color:#FF0000;">*</span></strong><a href="https://www.prajavani.net/stories/stateregional/leopard-accident-589345.html" target="_blank"><strong>ವಾಹನ ಡಿಕ್ಕಿ ಚಿರತೆ ಸಾವು</strong></a></p>.<p><span style="color:#FF0000;"><strong>*</strong></span><a href="https://www.prajavani.net/news/article/2018/04/01/563291.html" target="_blank"><strong>ಉರುಳಿಗೆ ಸಿಲುಕಿ ಚಿರತೆ ಸಾವು </strong></a></p>.<p><strong><span style="color:#FF0000;">*</span></strong><a href="https://www.prajavani.net/district/mysore/tiger-and-leopard-death-no-563304.html" target="_blank"><strong>ಹುಲಿ, ಚಿರತೆ ಸಾವು: ಸಿಗದ ಸುಳಿವು</strong></a></p>.<p><span style="color:#FF0000;"><strong>*</strong></span><a href="http://https://www.prajavani.net/news/article/2018/04/15/566037.html" target="_blank"><strong>ಚಿರತೆ ನಿಗೂಢ ಸಾವು</strong></a></p>.<p><strong><span style="color:#FF0000;">*</span></strong><a href="https://www.prajavani.net/article/ಎರಡು-ಚಿರತೆ-ಸಾವು-ವಿಷಪ್ರಾಶನ-ಶಂಕೆ" target="_blank"><strong>ಎರಡು ಚಿರತೆ ಸಾವು; ವಿಷಪ್ರಾಶನ ಶಂಕೆ</strong></a></p>.<p><strong><span style="color:#FF0000;">*</span></strong><a href="https://ಚಿರತೆ ಸಾವು: ಅಪಘಾತ ಕಾರಣವಲ್ಲ https://www.prajavani.net/article/ಚಿರತೆ-ಸಾವು-ಅಪಘಾತ-ಕಾರಣವಲ್ಲ" target="_blank"><strong>ಚಿರತೆ ಸಾವು</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>