‘ವ್ಯಾಸರಾಜರು ವಿಜಯನಗರದ ಅರಸರಿಗೆ ರಾಜಗುರುಗಳಾಗಿದ್ದವರು. ಇದನ್ನರಿತ ಆರೋಪಿಗಳು ವೃಂದಾವನವನ್ನು ನಿಧಿ ಆಸೆಗಾಗಿ ಧ್ವಂಸ ಮಾಡಿದರು. ಈ ಹಿಂದೆ ಎರಡು ಬಾರಿ ಸ್ಥಳಕ್ಕೆ ಬಂದಿದ್ದ ಅವರು, ಜಾಗದ ಬಗ್ಗೆ ತಿಳಿದುಕೊಂಡು ಹಾರೆ, ಚಾಣ, ಸಲಾಕೆ, ಬುಟ್ಟಿ ಹಾಗೂ ಪಿಕಾಸಿ ಇಟ್ಟಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರೇಣುಕಾ ಕೆ.ಸುಕುಮಾರ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.