<p><strong>ಬೆಂಗಳೂರು:</strong> ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ‘ನಮ್ಮ ನಾಡು ನಮ್ಮ ಆಳ್ವಿಕೆ’ ಪಕ್ಷವು 50,000 ಜನರ ಸಹಿ ಸಂಗ್ರಹಿಸಿದೆ. ಈ ವಿಚಾರವಾಗಿ ಆನ್ಲೈನ್ನಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದ ಪಕ್ಷವು, ಸಂಬಂಧಿತ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.</p>.<p>ನಮ್ಮ ನಾಡು ನಮ್ಮ ಆಳ್ವಿಕೆಯ ಕವಿರಾಜ್ ಅವರು ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ‘ನಾವು ರೂಪಿಸಿದ್ದ ಆನ್ಲೈನ್ ಅರ್ಜಿಗೆ 50 ಸಾವಿರ ಜನರು ಸಹಿ ಮಾಡಿದ್ದು, ಇದೊಂದು ಮಹತ್ವದ ಮೈಲುಗಲ್ಲು. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲುಪಿಸುವುದು ನಮ್ಮ ಜವಾಬ್ದಾರಿಯಾಗಿತ್ತು. ಅದನ್ನು ಮಾಡಿದ್ದೇವೆ’ ಎಂದಿದ್ದಾರೆ.</p>.<p>‘ದ್ವಿಭಾಷಾ ನೀತಿ ಸಹಿ ಸಂಗ್ರಹ ಕುರಿತಾದ ನಮ್ಮ ಫಲಕವನ್ನು ಮುಖ್ಯಮಂತ್ರಿ ಆಸಕ್ತಿಯಿಂದ ಓದಿದರು. 50 ಸಾವಿರ ಕನ್ನಡಿಗರ ಬೆಂಬಲದ ಸಹಿ ಹಾಕಿಸಿದ್ದೇವೆ ಅಂದಾಗ, ಎಲ್ಲಿ ಹಾಕ್ಸಿದ್ರಿ ? ಹ್ಯಾಗೆ ? ಎಂದು ಕುತೂಹಲದೊಂದಿಗೆ ಕೇಳಿದರು. ನಾವು ಆನ್ಲೈನ್ನಲ್ಲಿ ಎಂದು ವಿವರಿಸಿ, ಪಿಟಿಷನ್ನ ಲಿಂಕ್ ಓಪನ್ ಮಾಡಿ ತೋರಿಸಿದೆವು. ದ್ವಿಭಾಷಾ ನೀತಿ ಜಾರಿಗೆ ತಂದರೆ ಕನ್ನಡದ ಮಕ್ಕಳಿಗೆ ಸಹಾಯ ಆಗುತ್ತದೆ ಎಂದಾಗ, ಮುಖ್ಯಮಂತ್ರಿ ಅವರು ಸಮ್ಮತಿ ಎಂಬಂತೆ ತಲೆ ಆಡಿಸಿದರು’ ಎಂದು ಬರೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ‘ನಮ್ಮ ನಾಡು ನಮ್ಮ ಆಳ್ವಿಕೆ’ ಪಕ್ಷವು 50,000 ಜನರ ಸಹಿ ಸಂಗ್ರಹಿಸಿದೆ. ಈ ವಿಚಾರವಾಗಿ ಆನ್ಲೈನ್ನಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದ ಪಕ್ಷವು, ಸಂಬಂಧಿತ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.</p>.<p>ನಮ್ಮ ನಾಡು ನಮ್ಮ ಆಳ್ವಿಕೆಯ ಕವಿರಾಜ್ ಅವರು ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ‘ನಾವು ರೂಪಿಸಿದ್ದ ಆನ್ಲೈನ್ ಅರ್ಜಿಗೆ 50 ಸಾವಿರ ಜನರು ಸಹಿ ಮಾಡಿದ್ದು, ಇದೊಂದು ಮಹತ್ವದ ಮೈಲುಗಲ್ಲು. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲುಪಿಸುವುದು ನಮ್ಮ ಜವಾಬ್ದಾರಿಯಾಗಿತ್ತು. ಅದನ್ನು ಮಾಡಿದ್ದೇವೆ’ ಎಂದಿದ್ದಾರೆ.</p>.<p>‘ದ್ವಿಭಾಷಾ ನೀತಿ ಸಹಿ ಸಂಗ್ರಹ ಕುರಿತಾದ ನಮ್ಮ ಫಲಕವನ್ನು ಮುಖ್ಯಮಂತ್ರಿ ಆಸಕ್ತಿಯಿಂದ ಓದಿದರು. 50 ಸಾವಿರ ಕನ್ನಡಿಗರ ಬೆಂಬಲದ ಸಹಿ ಹಾಕಿಸಿದ್ದೇವೆ ಅಂದಾಗ, ಎಲ್ಲಿ ಹಾಕ್ಸಿದ್ರಿ ? ಹ್ಯಾಗೆ ? ಎಂದು ಕುತೂಹಲದೊಂದಿಗೆ ಕೇಳಿದರು. ನಾವು ಆನ್ಲೈನ್ನಲ್ಲಿ ಎಂದು ವಿವರಿಸಿ, ಪಿಟಿಷನ್ನ ಲಿಂಕ್ ಓಪನ್ ಮಾಡಿ ತೋರಿಸಿದೆವು. ದ್ವಿಭಾಷಾ ನೀತಿ ಜಾರಿಗೆ ತಂದರೆ ಕನ್ನಡದ ಮಕ್ಕಳಿಗೆ ಸಹಾಯ ಆಗುತ್ತದೆ ಎಂದಾಗ, ಮುಖ್ಯಮಂತ್ರಿ ಅವರು ಸಮ್ಮತಿ ಎಂಬಂತೆ ತಲೆ ಆಡಿಸಿದರು’ ಎಂದು ಬರೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>