ಶಿವಶರಣ ಡೋಹರ ಕಕ್ಕಯ್ಯ 12ನೇ ಶತಮಾನದಲ್ಲಿ ನಡೆದ ಶರಣ ಚಳವಳಿಯಲ್ಲಿ ಭಾಗವಹಿಸಿದ ಗಣಾಚಾರಿ. ಕಲ್ಯಾಣದ ಅನುಭವ ಮಂಟಪದಲ್ಲಿ ಪಾಲ್ಗೊಂಡು ಶರಣರ ಜೊತೆಗಿದ್ದು, ಅನುಭವಾ ಸಂಪನ್ನ ಎಂದು ಕರೆಸಿಕೊಂಡವರು. ವಚನ ಚಳವಳಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು. ಬಸವಾದಿ ಶರಣ ಗೌರವಕ್ಕೆ ಪಾತ್ರರಾದವರು. ಅಭಿವನ ಮಲ್ಲಿಕಾರ್ಜುನ ಅಂಕಿತದಲ್ಲಿ ಅವರ ಆರು ವಚನಗಳು ಲಭ್ಯವಿದೆ. ಇಂತಹ ಶಿವಶರಣರ ಬದುಕು, ಕ್ರಾಂತಿಯ ಕುರಿತ ಅಂಶಗಳು ಮಾರ್ಕಂಡೇಯ ಯಲ್ಲಪ್ಪ ಅವರ ಸಂಶೋಧನಾ ಪ್ರಬಂಧದಲ್ಲಿದೆ.