‘₹1 ಕೋಟಿ ನೆರವು ನೀಡಲು ಸಜನ್ ಪೂವಯ್ಯ ಮುಂದಾಗಿರುವುದು ದೊಡ್ಡ ಕೆಲಸ. ಬೆಂಗಳೂರು ವಕೀಲರ ಸಂಘಕ್ಕೆ ₹20 ಲಕ್ಷ ಹಾಗೂ ವಿವಿಧ ಐದು ವಕೀಲರ ಸಂಘಕ್ಕೆ ಈ ಮೊತ್ತ ವಿಭಜಿಸುವುದಾಗಿ ಅವರು ದೂರವಾಣಿಯಲ್ಲಿ ತಿಳಿಸಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ನೆರವನ್ನು ಬೇರೆ ಯಾರೂ ನೀಡಿರಲಿಲ್ಲ. ಅವರ ಈ ಕೆಲಸ ಇತರರಿಗೆ ಮಾದರಿ’ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಹೇಳಿದರು.