ಅಂಬೇಡ್ಕರ್ ಅವರು ಪ್ರಭುತ್ವ ಸಮಾಜ, ಕಲ್ಯಾಣ ರಾಜ್ಯದ ಕನಸು ಕಂಡಿದ್ದರು. ಬಿಜೆಪಿಯು ಸಂವಿಧಾನದ ಜಾತ್ಯತೀತ, ಸಮಾಜವಾದದ ಆಶಯಗಳನ್ನೇ ನಾಶ ಮಾಡುತ್ತಿದೆ. ಧರ್ಮಾಧಾರಿತ ಮನುವಾದಿ ಸಂವಿಧಾನವನ್ನು ನೆಲೆಗೊಳಿಸುವ ಸಂಚು ಮಾಡಿದೆ. 2024ರ ಲೋಕಸಭಾ ಚುನಾವಣೆಯು ಶೋಷಿತರು, ಬಡವರು, ದಲಿತರು ಸೇರಿದಂತೆ ಎಲ್ಲರನ್ನೂ ಒಳಗೊಳ್ಳುವ ಅಂಬೇಡ್ಕರ್ ಸಂವಿಧಾನ ಹಾಗೂ ಮನುವಾದಿ ಸಂವಿಧಾನದ ನಡುವಿನ ಹೋರಾಟ ಎಂದರು.