ಪತ್ರದಲ್ಲೇನಿದೆ: ‘ಆ್ಯಂಬಿಡೆಂಟ್ ಕಂಪನಿಯಿಂದ ಹಣ ಪಡೆದವರಲ್ಲಿ ಹಾಲಿ/ಮಾಜಿ ಸಚಿವರು, ಶಾಸಕರು, ಹಿರಿಯ ಪೊಲೀಸ್ ಅಧಿಕಾರಿಗಳೂ ಇದ್ದಾರೆ ಎಂದು ಆರೋಪಿ ಫರೀದ್ ಹೇಳಿದ್ದಾನೆ. ಇದೆಲ್ಲದರ ಬಗ್ಗೆ ಪೂರ್ಣ ಮಾಹಿತಿ ತಮಗೆ ಗೊತ್ತಿರುವುದಾಗಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರು ಇತ್ತೀಚೆಗೆ ಡಿಜಿಪಿಗೆ ಬರೆದಿದ್ದ ಪತ್ರದಲ್ಲಿ ಹೇಳಿದ್ದಾರೆ. ಆದರೆ, ಸಿಸಿಬಿಯವರು ಈವರೆಗೂ ಯಾವೊಬ್ಬ ಅಧಿಕಾರಿಯನ್ನೂ, ಶಾಸಕರನ್ನು ಕರೆಸಿ ವಿಚಾರಣೆ ನಡೆಸಿಲ್ಲ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.