ಎರಡೂ ವರ್ಷಗಳ ಬಳಿಕ ಸಚಿವ ಸಂಪುಟ ಪುನರ್ರಚನೆಯಾಗಲಿದೆ. ಆಗ ಸಚಿವರಾಗ ಬಯಸುವವರು ಮೊದಲಾರ್ಧದಲ್ಲಿ ನಿಗಮ–ಮಂಡಳಿಯ ಅಧ್ಯಕ್ಷ ಸ್ಥಾನ ಪಡೆಯುವಂತಿಲ್ಲ. ಸಚಿವ ಸ್ಥಾನ ಬೇಡವೆಂದಾದರೆ ಮಾತ್ರ, ನಿಗಮದ ಅಧಿಕಾರ ನೀಡಲಾಗುವುದು. ಆಕಾಂಕ್ಷಿ ಶಾಸಕರಿಂದ ಇದನ್ನು ಖಚಿತ ಪಡಿಸಿಕೊಂಡು ನೇಮಕ ಮಾಡಬೇಕು. ಈಗ ನಿಗಮ–ಮಂಡಳಿಗೆ ನೇಮಕ ಮಾಡಿ, ಎರಡೂವರೆ ವರ್ಷಗಳ ಬಳಿಕ ಸಚಿವ ಸ್ಥಾನವನ್ನೂ ನೀಡಿದರೆ, ಕೆಲವರಿಗಷ್ಟೇ ಅಧಿಕಾರ ಸಿಕ್ಕಂತಾಗುತ್ತದೆ. ಮೊದಲ ಬಾರಿಗೆ ಆಯ್ಕೆಯಾದವರಿಗೂ ಅವಕಾಶ ಸಿಗಬೇಕಾದರೆ ಈ ಸೂತ್ರ ಅನ್ವಯಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗೆ ಈ ಸೂಚನೆ ಬಂದಿದೆ ಎಂದು ಮೂಲಗಳು ಖಚಿತಪಡಿಸಿವೆ.