‘ರಾಮಸ್ವಾಮಿ ಪಾಳ್ಯ (ಆರ್.ಎಸ್.ಪಾಳ್ಯ) ನಿವಾಸಿಯಾಗಿರುವ ಸಂಜನಾ, ಸೋದರ ಸಂಬಂಧಿ ವಿನಯ್ಕುಮಾರ್ ಜೊತೆ ಜಯನಗರದಲ್ಲಿರುವ ಸಂಬಂಧಿಯೊಬ್ಬರ ಮನೆಗೆ ತೆರಳುತ್ತಿದ್ದರು. ಅವರ ಮುಂಬದಿಯಲ್ಲಿದ್ದ ಟಿಪ್ಪರ್ ವಾಹನ ರಸ್ತೆಯ ಬಲ ಪಥದಲ್ಲಿ ಸಾಗುತ್ತಿತ್ತು. ಅದು ನೇರವಾಗಿ ಚಲಿಸಬಹುದೆಂದು ಭಾವಿಸಿದ್ದ ವಿನಯ್, ಅದನ್ನು ಹಿಂಬಾಲಿಸಿದ್ದರು. ಆದರೆ, ಟಿಪ್ಪರ್ ಚಾಲಕ ಏಕಾಏಕಿಯಾಗಿ ಎಡ ತಿರುವು ಪಡೆದಿದ್ದ. ಹೀಗಾಗಿ ಅಪಘಾತ ಸಂಭವಿಸಿದೆ. ವಿನಯ್ ದೂರಿನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.