ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ ರಹಿತ ಚಾಲನೆಗೆ ಪ್ರಶಸ್ತಿ: ಕೆಎಸ್‌ಆರ್‌ಟಿಸಿ, ಬಿಎಂಟಿಸಿಯ 3 ಚಾಲಕರ ಆಯ್ಕೆ

Last Updated 18 ಏಪ್ರಿಲ್ 2023, 6:28 IST
ಅಕ್ಷರ ಗಾತ್ರ

ಬೆಂಗಳೂರು: ನವದೆಹಲಿಯ ಎಎಸ್‌ಆರ್‌ಟಿಯು(ಅಸೋಸಿಯೇಷನ್ ಆಫ್ ಸ್ಟೇಟ್‌ ರೋಡ್ ಟ್ರಾನ್ಸ್‌
ಪೋರ್ಟ್‌ ಅಂಡರ್‌ಟೇಕಿಂಗ್‌) ಅಪಘಾತ ರಹಿತ ಚಾಲಕರಿಗೆ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ಕೆಎಸ್‌ಆರ್‌ಟಿಸಿಯ ಇಬ್ಬರು ಮತ್ತು ಬಿಎಂಟಿಸಿಯ ಒಬ್ಬ ಚಾಲಕರು ಆಯ್ಕೆಯಾಗಿದ್ದಾರೆ.

ಕೆಎಸ್‌ಆರ್‌ಟಿಸಿ ಚಾಲಕರಾದ ಎಜಾಜ್ ಅಹಮದ್ ಷರೀಫ್, ಇಶಾಕ್ ಶರೀಫ್ ಅವರು ಆಯ್ಕೆ ಯಾಗಿದ್ದು, ಈ ಇಬ್ಬರು 33 ವರ್ಷಗಳಿಂದ ಅಪಘಾತ ರಹಿತ ಚಾಲನೆ ಮಾಡಿದ್ದಾರೆ.

ಬಿಎಂಟಿಸಿ ಚಾಲಕ ಲಕ್ಷ್ಮಣ ರೆಡ್ಡಿ ಅವರು 35 ವರ್ಷಗಳಿಂದ ಅಪಘಾರ ರಹಿತ ಚಾಲನೆ ಮಾಡಿದ್ದು, ಬೆಳ್ಳಿ
ಮತ್ತು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಈ ಮೂವರಿಗೆ ನವದೆಹಲಿ ಯಲ್ಲಿ ಮಂಗಳವಾರ ಪ್ರಶಸ್ತಿ ಪ್ರದಾನವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಪ್ರಕಟಣೆಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT