ರಾಜ್ಯದ ಎಲ್ಲಾ ಶಾಲೆಗಳಲ್ಲಿ ನ. 26ರಂದು ಸಂವಿಧಾನ ದಿನಾಚರಣೆಯನ್ನು ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯ ಕೈಪಿಡಿಯಲ್ಲಿ ‘ನಮ್ಮ ಸಂವಿಧಾನವನ್ನು ಬರೆದವರು ಯಾರು?’ ಎಂಬ ಶೀರ್ಷಿಕೆ ನೀಡಿ ವಿವರಣೆ ಕೊಡಲಾಗಿದೆ. ‘ಸಾಕಷ್ಟು ಜನರಿಗೆ ತಿಳಿದಿರುವಂತೆ ಡಾ.ಅಂಬೇಡ್ಕರ್ ಸಂವಿಧಾನದ ಪಿತಾಮಹ ಆಗಿರುತ್ತಾರೆ. ಜತೆಗೆ ಸಂವಿಧಾನವನ್ನು ಅವರೊಬ್ಬರೇ ಬರೆದಿಲ್ಲ. ದೇಶದಾದ್ಯಂತ ಇರುವ ವಿವಿಧ ಧರ್ಮ, ಜಾತಿ, ಬುಡಕಟ್ಟಿಗೆ ಸೇರಿದ ಅನೇಕ ಪುರುಷರು, ಮಹಿಳೆಯರು ಸೇರಿ ಮಾಡಿರುವಂತಹ ಒಂದು ಸಾಮೂಹಿಕ ಪ್ರಯತ್ನದ ಫಲವಾಗಿದೆ. ಸಂವಿಧಾನ ರಚನೆ ಹಿಂದೆ ಸಾಕಷ್ಟು ಚರ್ಚೆ, ಭಿನ್ನಾಭಿಪ್ರಾಯ ಮತ್ತು ಬದಲಾವಣೆಗಳಂತಹ ಅನೇಕ ಕ್ರಿಯೆಗಳು ನಡೆದಿವೆ’ ಎಂದು ನಮೂದಿಸಲಾಗಿದೆ.