ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಆ. 31ರಂದು ಚುನಾವಣೆ ನಡೆಯಲಿದೆ. ನಾನೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೂ ಚರ್ಚಿಸಿದ್ದೇನೆ. 16 ಮಂದಿ ನಿರ್ದೇಶಕರ ಪೈಕಿ 12 ಮಂದಿ ನನ್ನ ಬೆಂಬಲಕ್ಕಿದ್ದಾರೆ. ಅವಿರೋಧ ಆಯ್ಕೆಯಾಗದಿದ್ದಲ್ಲಿ ಚುನಾವಣೆ ಎದುರಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.