ಮೂರ್ತಿ ಸ್ಥಳಾಂತರ ವಿಷಯ ಗೊತ್ತಾಗುತ್ತಿದ್ದಂತೆ, ಸ್ಥಳಕ್ಕೆ ಬಂದ ಕೆಲ ಲಿಂಗಾಯತ ಮುಖಂಡರು ಕಾರ್ಯಾಚರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮೂರ್ತಿಯನ್ನು ಸ್ಥಳಾಂತರ ಮಾಡುವ ಬದಲು, ಅದರ ಪಕ್ಕದಲ್ಲಿ ಕಾಮಗಾರಿ ಮಾಡಬಹುದಿತ್ತು. ಮೂರ್ತಿ ಸ್ಥಳಾಂತರಕ್ಕೆ ಉತ್ಸಾಹ ತೋರಿರುವ ಅಧಿಕಾರಿಗಳು, ಮುಂದೆ ಪುನರ್ ಪ್ರತಿಷ್ಠಾಪನೆಗೆ ಮೀನಮೇಷ ಎಣಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.